ಪ್ರೀತಿಸಿ ಮದುವೆಯಾದ ಯುವ ಹಾಗೂ ಶ್ರೀದೇವಿ ಈಗ ಪ್ರೀತಿಯನ್ನು ಅಂತ್ಯ ಮಾಡುವ ನಿರ್ಧಾರ! ಅಸಲಿ ಕಾರಣ ಏನು ಗೊತ್ತಾ?

ಪ್ರೀತಿಸಿ ಮದುವೆಯಾದ ಯುವ ಹಾಗೂ ಶ್ರೀದೇವಿ ಈಗ ಪ್ರೀತಿಯನ್ನು ಅಂತ್ಯ ಮಾಡುವ ನಿರ್ಧಾರ!     ಅಸಲಿ  ಕಾರಣ ಏನು ಗೊತ್ತಾ?

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಡೈವೋರ್ಸ್ ಬಳಿಕ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ . ಅದು ಏನಪ್ಪಾ ಅಂದ್ರೆ ಯುವ ರಾಜಕುಮಾರ್ ಇಂದ ಪತ್ನಿ ಶ್ರೀ ದೇವಿಗೆ ವಿಚ್ಚೇದನಕ್ಕೆ ಜೂನ್ ೬ ರಂದು ಕೋರ್ಟ್ ನಲ್ಲಿ  ಅರ್ಜಿ ಸಲ್ಲಿಕೆ  ಮಾಡಿದ್ದಾರೆ ಎಂದು ತಿಳಿದು ಬಂದಿದೆ .  ಚಿತ್ರ ರಂಗದಲ್ಲಿ ಇದು ನಿಜವಾಗಲೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನೆಟ್ಟಿಗರು ಪ್ರತೀರಿಯೇ ಮಾಡಿದ್ದಾರೆ . ಶ್ರೀ ದೇವಿ ಅವರು ತಮ್ಮ ಪತಿ ಯುವ ರಾಜಕುಮಾರ್ ಒಂದಿಗೆ ಆರು ತಿಂಗಳಿಂದ ಒಟ್ಟಿಗೆ ವಾಸ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ 

ಇನ್ನೂ  ಯುವರಾಜ್ ಕುಮಾರ್, ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ರಾಜ್ ಕುಮಾರ್ ಅವರ ಮೊಮ್ಮಗ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಮಗ. ರಾಜ್ ಕುಟುಂಬದ ತೃತೀಯ ತಲೆಮಾರಿನ ನಟನಾಗಿ, ಯುವರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಯುವರಾಜ್ ಅವರ ಮೊದಲ ಚಿತ್ರ "ಯುವರತ್ನ" ಎಂದು ಘೋಷಿಸಲಾಗಿತ್ತು, ಆದರೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅದು ಇನ್ನೂ ಬಿಡುಗಡೆ ಆಗಿಲ್ಲ. ಅವರು ತಮ್ಮ ನಟನೆಯ ಕಾರ್ಯಕೈದ ಜೊತೆಗೆ, ದಕ್ಷಿಣ ಭಾರತದ ಚಿತ್ರರಂಗದ ಹಲವಾರು ಪ್ರಸಿದ್ಧ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ. ಯುವರಾಜ್ ಕುಮಾರ್ ಅವರ ಮುಂಬರುವ ಚಿತ್ರಗಳು ಮತ್ತು ಅವರು ಮಾಡಲಿರುವ ಪಾತ್ರಗಳು ಕನ್ನಡ ಚಿತ್ರರಂಗದಲ್ಲಿ ಬಹಳ ನಿರೀಕ್ಷಿತವಾಗಿದೆ ಎಂದರೆ ತಪ್ಪಾಗಲಾರದು.  

ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮನೆ ಯಿಂದ ಕೊಡಲೇ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗೌರವ ಲಭ್ಯವಾಗುತ್ತದೆ. ಇನ್ನೂ ಈ ದೊಡ್ಡ ಮನೆಯ ಕುಟುಂಬದ ಸದಸ್ಯರ ಸರಳತೆಗೆ ಇನ್ನಷ್ಟು ಗೌರವ ಇದೆ ಎಂದರೆ ತಪ್ಪಾಗಲಾರದು. ಇನ್ನೂ ಇವರ ಜೀವನ ಶೈಲಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಈಗ ಪುನೀತ್ ಅಗಲಿಕೆಯ ನಂತರ ಜೂನಿಯರ್ ಅಪ್ಪು ಎಂದು ಕರೆಸಿಕೊಂಡ ಯುವ ಅವರು ಪ್ರೀತಿಸಿ ಮದುವೆಯಾಗಿದ್ದ  ಶ್ರೀದೇವಿ ಅವರ ಜೊತೆಗೆ ಅವರ ಜೊತೆ ಅನ್ಯೋನ್ಯತೆಯ ಕೊರತೆಯಿಂದ ಡೈವರ್ಸ್ ಗೆ ಅರ್ಜಿ ಸಲ್ಲಿಕೆ ಆಗಿದೆ. ಇನ್ನೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ನಡುವೆ ಇಬ್ಬರಲ್ಲೂ ಒಮ್ಮತ ಇತ್ತು ಆದರೆ ಇಲ್ಲಿ ಒಬ್ಬರು ಮಾತ್ರ ಮತ್ತೊಬ್ಬರ ವಿರುದ್ಧ ದೂರು ನೀಡಿ ಬಿಡುಗಡೆಯನ್ನು ಬಯಸುತ್ತಿದ್ದಾರೆ.

ಯುವ ಅವರು ತನ್ನದೇ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲ್ಸ ಮಾಡುತ್ತಿದ್ದ ಶ್ರೀಧೇವಿ ಬೈರಪ್ಪ ಅವರೊಟ್ಟಿಗೆ ಮದುವೆ ಆಗಿದ್ದಾರೆ. ಇನ್ನೂ ಇವರಿಬ್ಬರ ಕುಟುಂಬ ಮುಂಚೆಯಿಂದಲು ಪರಿಚಿತರಾಗಿರುತ್ತಾರೆ. ಯುವ ಅವರು ಅಲ್ಲಿಯೇ ಕೆಲ್ಸ ಮಾಡುತ್ತಿದ್ದ ಸಮಯದಲ್ಲಿ ಇವರಿಬ್ಬರ  ಪರಿಚಯ ಸ್ನೇಹ ಆಗಿ ಆ ಸ್ನೇಹ ಸಲುಗೆಯಿಂದ ಪ್ರೀತಿ ಆಗಿದೆ ಎನ್ನಲಾಗುತ್ತಿದೆ.  ಮೊದಲ ದಿನಗಳಲ್ಲಿ ತನ್ನ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಲು ಭಯ ಪಟ್ಟಿದ್ದು ಉಂಟು ಎಂದು ಇಂಟರ್ವ್ಯೂ ನಲ್ಲಿ  ಹೇಳಿದ್ದಾರೆ ಯುವ. ಆದರೆ ಮನೆಯಲ್ಲಿ ಕೊಡ ಈ ಹುಡುಗಿಯ ಬಗ್ಗೆ ಕೇಳಿ ಮನೆಯಲ್ಲಿ ಕೊಡ ಬಹಳ ಸಂತಸ ಪಟ್ಟು ಮದುವೆಗೆ ಗ್ರೀನ್ ಸಿಗ್ನಲ್ ನಿದ್ದರಂತೆ. ಹೀಗೆ ಮನೆಯಲ್ಲಿ ಒಪ್ಪಿಸಿ ಮದುವೆಯಾದ ಯುವ ಈಗ ದಂಪತಿಗಳ ನಡುವೆ ಅಗೌರವ ಹೆಚ್ಚಾಗಿದೆ ಎಂದು ಯುವ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇನ್ನೂ ವಿಚ್ಛೇದನ ಅರ್ಜಿಯ ಸೆಕ್ಷನ್ ಪ್ರಕಾರ ದೂರನ್ನು ಎತ್ತಿದ್ದಾರೆ, ಮುಂದಿನ ವಿಚಾರಣೆ ಜುಲೈ 4 ರಂದು ನಡೆಸಲಾಗುವುದು.  ಅಸಲಿ ಕಾರಣ  ಏನ್ ಅಂದ್ರೆ ಯುವ ರಾಜಕುಮಾರ್ ಪತ್ನಿ ಮೇಲೆ ದೌರ್ಜನ್ಯ ದ ಆರೋಪ ಮಾಡಿದ್ದಾರೆ .ಮತ್ತು ಮಾನಸಿಕವಾಗಿ (  torture )ತೊಂದರೆ ಕೊಟ್ಟಿದ್ದಾರೆ