ದರ್ಶನ್, ವಿಜಯಲಕ್ಷ್ಮಿ ಮನೆಯಲ್ಲಿದ್ದ ಲಕ್ಷ ಲಕ್ಷ ಹಣ ಸೀಜ್! ಈ ಕೇಸ್ನಲ್ಲಿ ಸೀಜ್ ಆದ ಒಟ್ಟು ಹಣ ಎಷ್ಟು ಹಾಗೂ ವಿವರ ಇಲ್ಲಿದೆ ನೋಡಿ?

ದರ್ಶನ್, ವಿಜಯಲಕ್ಷ್ಮಿ ಮನೆಯಲ್ಲಿದ್ದ ಲಕ್ಷ ಲಕ್ಷ ಹಣ ಸೀಜ್! ಈ ಕೇಸ್ನಲ್ಲಿ ಸೀಜ್ ಆದ ಒಟ್ಟು ಹಣ ಎಷ್ಟು ಹಾಗೂ ವಿವರ ಇಲ್ಲಿದೆ ನೋಡಿ?

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಹಾಗೂ ಅವರ ಪತ್ನಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ.  ಘಟನೆಯಲ್ಲಿ ಚಿತ್ರದುರ್ಗದ ಫಾರ್ಮಾಸಿಸ್ಟ್ ಅಲ್ಲಿ ಕೆಲ್ಸ ಮಾಡುತ್ತಿದ್ದ ರೇಣುಕಾ ಸ್ವಾಮಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪವಿತ್ರಾ ಅವರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ.  ಸಾಕಷ್ಟು ಬಾರಿ ವಾರ್ನ್ ಮಾಡಿದ್ದರು ಕೊಡ ತನ್ನ ಚಾಳಿಯನ್ನು ಬಿಡದ ರೇಣುಕಾ ಸ್ವಾಮಿ ಅವರನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಮೈಸೂರಿಗೆ ಕರೆ ತಂದರು ಮತ್ತು ನಂತರದ ಕೊಲೆಗೆ ಕಾರಣವಾಯಿತು ಎಂದು ವರದಿ ಆಗಿದೆ. ಇನ್ನೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಅರೆಸ್ಟ್ ಅಡವರನ್ನು ನೆನ್ನೆ ಕೋರ್ಟ್ ಗೆ ಕರೆತರಲಾಯಿತು. 

ಇನ್ನೂ ನೆನ್ನೆ ನಡೆದ ಕೋರ್ಟ್ ನಲ್ಲಿ ದರ್ಶನ್ ಹಾಗೂ ಇನ್ನಿತರ ಆರು ಮಂದಿಯನ್ನು ಪೊಲೀಸ್ ಕಸ್ಟಡಿ ಅಲ್ಲಿ ಇರಿಸಿದ್ದರೆ ಪವಿತ್ರಾ ಗೌಡ ಅವರ ಜೊತೆಗೆ ಮಿಕ್ಕ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಯಿತು. ಕೊಲೆಯಾದ ರೇಣುಕಾ ಸ್ವಾಮಿಯವರನ್ನು ಅಮಾನುಷವಾಗಿ ಥಳಿಸಲಾಗಿದ್ದು, ಅನೇಕ ಗಾಯಗಳಿಂದ ಸಾವನ್ನಪ್ಪಿದ್ದಾರೆ ಮತ್ತು ಅವರ ಶವವನ್ನು ಬೆಂಗಳೂರಿನ ಸುಮನಹಳ್ಳಿ ಸೇತುವೆಯ ಬಳಿ ಎಸೆದಿದ್ದಾರೆ.  ದರ್ಶನ್ ಮತ್ತು ಪವಿತ್ರಾ ಸೇರಿದಂತೆ ಹಲವರು ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಶಂಕೆ ಇದೆ ಆದರೆ ಯಾವ ಸಾಕ್ಷಿ ಕೊಡ ಸಿಕ್ಕಿಲ್ಲ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 13 ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಈಗ ಸ್ಥಳ ಮಹಜರು ಮಾಡಿರುವ ಪೊಲೀಸರು ದರ್ಶನ್ ಮನೆಯಲ್ಲಿ 70ಲಕ್ಷಕ್ಕೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೊಲೆ ಮಾಡಿರುವ ಕಾರಣ ಎಲ್ಲಿಯೂ ದರ್ಶನ್ ಅವರ ಹೆಸರು ಹೇಳದಂತೆ ಸುಪಾರಿ ನೀಡಿದ್ದ 30ಲಕ್ಷ ಹಣವನ್ನು ದರ್ಶನ್ ಅವರನ್ನು ಅರೆಸ್ಟ್ ಮಾಡಿದ ದಿನವೇ ವಶಕ್ಕೆ ಪಡೆದುಕೊಂಡರು. ಸ್ಥಳ ಮಹಜರು ಎಂದು RR ನಗರದಲ್ಲಿ ಇರುವ ದರ್ಶನ್ ಮನೆಗೆ ಭೇಟಿ ನೀಡಿದ ಪೊಲೀಸರು ವಾರ್ಡ ರೋಬ್ ನಲ್ಲಿ ಇದ್ದ 30ಲಕ್ಷದ 40ಸಾವಿರ ವಶಕ್ಕೆ ಪಡೆದುಕೊಂಡರು. ಅದಾದ ಬಳಿಕ ವಿಜಯ ಲಕ್ಷ್ಮಿ ಅವರು ಇರುವ ಅಪಾರ್ಟ್ನೆಂಟ್  ಅಲ್ಲಿ ಕೊಡ 3ಲಕ್ಷದ ವರೆಗೂ ವಶಕ್ಕೆ ಪಡೆದುಕೊಂಡಿದ್ದಾರೆ. ಈಗಾಗಲೇ ದರ್ಶನ್ ಅವರು ಕೊಲೆಗೆ ಬಳಸಿದ್ದಾರೆ ಎಂದು ಅವರ ಬಳಿ ಇದ್ದ ಕಾರು ಸೇರಿ ಒಟ್ಟಾರೆ 70ಲಕ್ಷದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.