ಕೊನೆಗೂ ದರ್ಶನ್-ಪವಿತ್ರಾ ಬ್ರೇಕ್-ಅಪ್!! ಕಾರಣ ಏನು?

ಕೊನೆಗೂ ದರ್ಶನ್-ಪವಿತ್ರಾ ಬ್ರೇಕ್-ಅಪ್!! ಕಾರಣ ಏನು?

ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡದ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಭಾಗಿಯಾಗಿರುವ ಪ್ರಕರಣ ಮಹತ್ವದ ಬೆಳವಣಿಗೆಗಳನ್ನು ಕಂಡಿದೆ.   ದರ್ಶನ್ ಅಭಿಮಾನಿಯಾಗಿದ್ದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಪವಿತ್ರಾ ಸೇರಿ 15 ಮಂದಿಯನ್ನು ಬಂಧಿಸಲಾಗಿತ್ತು.  ದರ್ಶನ್ ಜೊತೆಗಾರ್ತಿ ಎಂಬ ವದಂತಿ ಹಬ್ಬಿರುವ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಆಕ್ಷೇಪಾರ್ಹ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಇನ್ನೂ ಈ ಕಾರಣದಿಂದ ರೇಣುಕಾ ಸ್ವಾಮಿಯನ್ನು ಅಪಹರಣ ಮತ್ತು ಕೊಲೆಗೆ ಯೋಜನೆ ರೂಪಿಸುವಲ್ಲಿ ದರ್ಶನ್ ಪ್ರಮುಖ ಪಾತ್ರ ವಹಿಸಿದ್ದು, ಅದರಲ್ಲಿ ಭಾಗಿಯಾದವರಿಗೆ ಹಣ ಒದಗಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.  

ಪವಿತ್ರಾ ಗೌಡ ಕೂಡ ಆರೋಪಿಯಾಗಿದ್ದು, ಆಕೆ ಅಪರಾಧ ಸ್ಥಳದಲ್ಲಿ ಹಾಜರಿದ್ದು, ಹಲ್ಲೆಯಲ್ಲಿ ಭಾಗವಹಿಸಿದ್ದಾಳೆ ಎಂದು ವರದಿಗಳು ತಿಳಿಸಿವೆ. ಆಗಸ್ಟ್ 2024 ರಂತೆ, ದರ್ಶನ್ ಮತ್ತು ಪವಿತ್ರಾ ಇಬ್ಬರೂ ಬಂಧನದಲ್ಲಿದ್ದಾರೆ, ಅವರ ನ್ಯಾಯಾಂಗ ಬಂಧನವನ್ನು ಆಗಸ್ಟ್ 28 ರವರೆಗೆ ವಿಸ್ತರಿಸಲಾಗಿದೆ. ಈ ಪ್ರಕರಣವು ಗಮನಾರ್ಹವಾದ ಸಾರ್ವಜನಿಕ ಮತ್ತು ಮಾಧ್ಯಮದ ಗಮನವನ್ನು ಸೆಳೆದಿದೆ, ವಿಶೇಷವಾಗಿ ದರ್ಶನ್ ಜೈಲಿನೊಳಗಿಂದ ವೀಡಿಯೊ ಕರೆ ಮಾಡುವುದನ್ನು ತೋರಿಸುವ ವೀಡಿಯೊ ಹೊರಹೊಮ್ಮಿದ ನಂತರದಲ್ಲಿ ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೋರ ಬಿದ್ದಿದ್ದು ಅದೇನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.

ಇನ್ನೂ ಪವಿತ್ರ ಗೌಡ ಹಾಗೂ ದರ್ಶನ್ ಅವರ ಸಂಭಂದ ಈಗ ಬುರುಕಾಗಿದೆ ಎಂದು ಹೇಳಲಾಗುತ್ತಿದೆ. ಕಾರಣ ಮೊದಲಿಗೆ ಮನೆಯವರು ಯಾರೊಬ್ಬರೂ ಕೊಡ ದರ್ಶನ್ ಭೇಟಿಗೆ ಬರುವುದಾಗಲಿ ಅಥವಾ ಹೊರಗಡೆ ಬರುವ ಕಾರ್ಯ ಮಾಡುತ್ತಿರಲಿಲ್ಲ ಆದರೆ ಈಗ ಎಲ್ಲರೂ ಆಗಾಗ ಬಂದು ಹೋಗುತಿದ್ದ ಜೊತೆಗೆ ಅವರನ್ನು ಆಚೆ ತರುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಕಾರಣ ದರ್ಶನ್ ತನ್ನ ಮನೆಯವರಿಗೆ ಇನ್ನೂ ಮುಂದೆ ಪವಿತ್ರ ಗೌಡ ಸಹವಾಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿರುವುದು. ಅಷ್ಟೇ ಅಲ್ಲದೇ A1 ಆರೋಪಿಯಾಗಿರುವ  ಪವಿತ್ರ ಗೌಡ ಕೊಡ ದರ್ಶನ್ ಹೆಸರಿಲ್ಲದೆ ಜಾಮೀನು ಅರ್ಜಿ ಹಾಕಿರುವುದು. ಹಾಗೆಯೇ ಸಾಮಾನ್ಯವಾಗಿ ಜೈಲಿನಲ್ಲಿ ಇರುವವರಿಗೆ ವಾರಕ್ಕೆ ಒಮ್ಮೆ ಪರಸ್ಪರ ಭೇಟಿಗೆ ಅವಕಾಶ ನೀಡಲಾಗುವುದು ಆದರೆ ಈ ಇಬ್ಬರು ಕೊಡ ಎರಡು ತಿಂಗಳು ಆಗಿದ್ದರು ಕೊಡ ಒಂದು ಭಾರಿಯೂ ಭೇಟಿ ಆಗದೆ ಇರುವುದು ನೋಡಿ ಇವರಿಬ್ಬರ ಮದ್ಯೆ ಬ್ರೆಕಪ್ ಆಗಿದೆ ಎಂದು ಹೇಳಲಾಗುತ್ತಿದೆ.