ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವ ಪವಿತ್ರಾ ಗೌಡ ? ಇದೇನು ಹೊಸ ಸುದ್ದಿ?

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವ ಪವಿತ್ರಾ ಗೌಡ ? ಇದೇನು ಹೊಸ ಸುದ್ದಿ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್ ತೂಗುದೀಪ, ಅವರ ಸಹವರ್ತಿ ಪವಿತ್ರಾ ಗೌಡ ಮತ್ತು ಇತರ 15 ಮಂದಿಯ ನ್ಯಾಯಾಂಗ ಬಂಧನವನ್ನು ಜುಲೈ 18, 2024 ರವರೆಗೆ ವಿಸ್ತರಿಸಲಾಗಿದೆ. ಸಂತ್ರಸ್ತೆ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳು ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಆರೋಪಿಗಳು ಬೇರೆ ಬೇರೆ ಹೆಸರುಗಳಲ್ಲಿ ಸಿಮ್ ಕಾರ್ಡ್ ಬಳಸಿದ್ದು, ಅವರಿಂದ 83.55 ಲಕ್ಷ ರೂ.ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ದರ್ಶನ್ ಮತ್ತು ಪವಿತ್ರಾ ಜೈಲಿನಲ್ಲಿ ಭೇಟಿಯಾಗದಂತೆ ಜೈಲು ಅಧಿಕಾರಿಗಳಿಗೆ ದರ್ಶನ್ ಕುಟುಂಬ ಮನವಿ ಮಾಡಿದೆ ಎಂದು ಕೊಡ ತಿಳಿಸಿದೆ.

ಇನ್ನು ದರ್ಶನ್ ಜೈಲು ಸೇರಿ ಒಂದು ತಿಂಗಳ ಹತ್ತಿರ ಬಂದಿದೆ. ಆದರೆ  ಅವರ ಜೈಲುವಾಸವನ್ನು ಮುಂದುವರೆಸುತ್ತಾ ಬಂದಿದೆ ಕೋರ್ಟ್. ಇನ್ನು ಜೂಲೈ 18ರಂದು ಕೇಸ್ ಯಾವ ಪರ ವಾಲಲಿದೆ ಎಂದು ನಾವೆಲ್ಲರೂ ಕೊಡ ಕಾದು ನೋಡಬೇಕಿದೆ. ಆದ್ರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಇವರ ಕೊಲೆಯ ವಿಚಾರಕ್ಕಿಂತ ಹೆಚ್ಚು ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ಪವಿತ್ರಾ ಗೌಡ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು. ಹೌದು ಈಗ ಗಾಂಧಿ ನಗರದಲ್ಲಿ ನಟಿ ಜೈಲಿನಲ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ವೈರಲ್ ಆಗಿದೆ. ಈ ತರ ಸುದ್ದಿ ಹರಡುವುದಕ್ಕೆ ಕಾರಣ ಇದೆ  ಅದೇನೆಂದರೆ ಪವಿತ್ರಾ ಗೌಡ ಮತ್ತೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಈ ಗಾಳಿ ಸುದ್ದಿ ನಿಜವೋ ಸುಳ್ಳೊ ಗೊತ್ತಿಲ್ಲ. ಆದರೆ ಪವಿತ್ರಾ ಗೌಡ ಪೊಲೀಸ್ ವಿಚಾರಣೆ ವೇಳೆ ಮಾವಿನ ಕಾಯಿ ಕೇಳಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಪವಿತ್ರಾ ಗೌಡ ಗರ್ಭಿಣಿ ಆಗಿರುವುದಕ್ಕೆನೇ ಅವರು ಮಾವಿನ ಕಾಯಿ ಕೇಳಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಈ ವರೆಗೂ ಜೈಲಿನ ಸಿಬ್ಬಂದಿ ಅಥವಾ ಪೊಲೀಸ್ ಅಧಿಕಾರಿಗಳ ಕಡೆಯಿಂದ ಈ ವಿಚಾರ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಗೌಡ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯಾಗಿದೆ.ಆದರೆ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಆಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುಳ್ಳು ಸುದ್ದಿ ವೈರಲ್ ಮಾಡುತ್ತಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿದೆ

ಇನ್ನು ಪವಿತ್ರ ಗೌಡ ಅವರು ಈಗಾಗಲೇ ದರ್ಶನ್ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವಾರು ಮೂಲಗಳೆ ತಿಳಿಸಿರುವ ಪ್ರಕಾರ ಪವಿತ್ರ ಗೌಡ ರೇಣುಕಾ ಸ್ವಾಮಿಯನ್ನು ದರ್ಶನ್ ಕರೆಸಿದ್ದು ನಿಜ ಆಗ ನಾನು ಕೋಪದಿಂದ ಅವನಿಗೆ ಚಪ್ಪಲಿಯಲ್ಲಿ ಹೊಡೆದು ಬಂದೆವು ಅದಾದ ಬಳಿಕ ಆಗಿರುವ ಘಟನೆಗೂ ನನಗೂ ಯಾವ ಸಂಭಂದ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸಣ್ಣ ಸುಳಿವನ್ನು ಬಿಡದೆ ಕೇಸ್ ತನಿಖೆ ನಡೆಸುತ್ತಿದ್ದು ಈ ಕೇಸ್ ಯಾರ ಪರವಾಗಿ ಆಗಲಿದೆ ಎಂದು ನಾವು ಜೂಲೈ 18ರಂದು ತಿಳಿಯಬಹುದಾಗಿದೆ.  ( video credit : DK hunts )