ಸ್ಪಂದನ ಅಗಲಿಕೆಯ ನಂತರ ಮೊದಲ ಬಾರಿ ಡಿಕೆಡಿ ವೇದಿಕೆಗೆ ಬಂದ ರಾಘುಗೆ ಶಿವಣ್ಣ ಹೇಳಿದ್ದೇನು..?

ಸ್ಪಂದನ ಅಗಲಿಕೆಯ ನಂತರ ಮೊದಲ ಬಾರಿ ಡಿಕೆಡಿ ವೇದಿಕೆಗೆ ಬಂದ ರಾಘುಗೆ ಶಿವಣ್ಣ ಹೇಳಿದ್ದೇನು..?

ಕನ್ನಡ ಚಿತ್ರರಂಗದಲ್ಲಿ ನಟ ವಿಜಯ್ ರಾಘವೇಂದ್ರ ಅವರು ಎಂದಿಗೂ ಸಹ ಸಿನಿಮಾ ಯಶಸ್ಸು ಹೆಚ್ಚು ಸಿಗದೇ ಇದ್ದಕ್ಕೆ ಬೇಜಾರು ಮಾಡಿಕೊಂಡಿರಲಿಲ್ಲ. ಒಂದಲ್ಲ ಒಂದು ದಿನ ಜನರು ನಮ್ಮನ್ನು ಕೂಡ ಹೆಚ್ಚು ಗುರುತಿಸುತ್ತಾರೆ ಎಂದು ಸದಾ ಧೈರ್ಯದಿಂದಲೇ ಮುನ್ನುಗ್ತಲೆ ಇದ್ದರು. ಅದಕ್ಕೆ ಕಾರಣ ಅವರ ಹೆಂಡತಿ ಸ್ಪಂದನ ಅವರು ಎಂದು ಹೇಳಬಹುದು. ಹೌದು ಪ್ರತಿ ಹಂತದಲ್ಲೂ ಸ್ಪಂದನ ಅವರು ವಿಜಯ ರಾಘವೇಂದ್ರ ಅವರ ಜೊತೆಗೆ ನಿಂತುಕೊಂಡಿದ್ದರು. ಬೆನ್ನು ತಟ್ಟುತ್ತಾ ನೀವು ಎಂದಿಗೂ ಕುಗ್ಗ ಬೇಡಿ ನಾನು ನಿಮ್ಮ ಜೊತೆಗೆ ನಿಂತುಕೊಳ್ಳುತ್ತೇನೆ, ಏನೇ ಆಗಲಿ ಸಿನಿಮಾ ಮಾಡಿ ಸಿನಿಮಾದಲ್ಲಿ ಒಂದಲ್ಲ ಒಂದು ದಿನ ನಿಮ್ಮ ಅದ್ಬುತ ನಟನೆಯನ್ನು, ನಿಮ್ಮಲ್ಲಿರುವ ಕಲೆಯನ್ನು ಜನರು ಮೆಚ್ಚಿ ಮೆಚ್ಚಿಕೊಳ್ಳುತ್ತಾರೆ ಎಂದು ಸ್ಪಂದನ ಅವರು ಸದಾ ಹುರಿದುಂಬಿಸುತ್ತಿದ್ದರು. 

ಆದರೆ ಅಂತಹ ಜೀವ ಇದೀಗ ರಾಘು ಅವರನ್ನು ಬಿಟ್ಟು ಹೋಗಿದೆ. ಕೇವಲ ಸ್ಪಂದನ ಅವರ ಅಗಲಿಕೆಯಿಂದ  ರಾಘುಗೆ ಮಾತ್ರವಲ್ಲದೆ ಅವರ ಇಡೀ ಕುಟುಂಬಕ್ಕೆ ಮಗ ಶೌರ್ಯಾನಿಗೂ ಕೂಡ ಹೆಚ್ಚು ನೋವಿದೆ. ಹೌದು ಡಿಕೆಡಿ ವೇದಿಕೆಯಲ್ಲಿ ಸ್ಪಂದನ ಅವರ ಅಗಲಿಕೆಯ ನಂತರ ಬಹು ಬೇಗ ರಾಘು ಅವರು ಕಾಣಿಸಿಕೊಳ್ಳಲಿಲ್ಲ.. ಇತ್ತೀಚಿಗೆ ಮೊನ್ನೆ ಆ ನೋವನ್ನು ಕೊಂಚ ಮರೆತು ಡಿಕೆಡಿ ವೇದಿಕೆಗೆ ಬಂದಿದ್ದಾರೆ ರಾಘು. ಅವರನ್ನು ನೋಡಿ ಶಿವಣ್ಣ ಅಸಲಿಗೆ ಹೇಳಿದ್ದೇನು..? ಶೌರ್ಯನ ಬಗ್ಗೆ ಹೇಳಿರುವ ಮಾತುಗಳು ಎಂಥಹವು ಗೊತ್ತಾ..? ಇಲ್ಲಿದೆ ನೋಡಿ...ಹೌದು ನಾನು ಏನು ಹೇಳಬೇಕು ನನಗೆ ಗೊತ್ತಾಗುತ್ತಿಲ್ಲ, ತುಂಬಾ ಕಷ್ಟ ಆಗುತ್ತದೆ, ರಾಘುನನ್ನ ನೋಡಿದರೆ ಮತ್ತು ಶೌರ್ಯವನ್ನು ನೋಡಿದರೆ ತುಂಬಾನೇ ಕಷ್ಟ ಆಗುತ್ತದೆ. ನಾವು ಸಮಾಧಾನದ ಮಾತು ಆಡಬಹುದು. ಆದ್ರೆ ಆ ಪರಿಸ್ಥಿತಿ, ಆ ನೋವು ಹೇಗಿರುತ್ತದೆ ಎಂದು ಅವರಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಜೊತೆಗೆ ಆ ನೋವನ್ನು ಮರೆತು ಇದೀಗ ರಾಘು ಶೌರ್ಯನ ಜೊತೆ ನಿಲ್ಲಬೇಕು, ನೋವಿನಲ್ಲಿಯೇ ನಲಿವನ್ನು ಹುಡುಕಬೇಕು, ಅಂದಾಗ ಮಾತ್ರ ಜೀವನ ಮಾಡಲು ಸಾಧ್ಯ. ನೋವು ಇದ್ದರೂ ಆ ನೋವನ್ನ ಕಡಿಮೆ ಮಾಡಿಕೊಂಡು ನೋವಿನಲ್ಲೇ ನಲಿವನ್ನು ಅನುಭವಿಸುತ್ತಾ ಮುಂದೆ ಸಾಗಬೇಕು ಎಂದು ಶಿವಣ್ಣ ಹೇಳಿದರು. ಅಸಲಿಗೆ ಇನ್ನೂ ಸಾಕಷ್ಟು ವಿಚಾರಗಳ ಕುರಿತು ಶಿವಣ್ಣ ರಾಘು ಹಾಗೂ ಅವರ ಮಗ ಶೌರ್ಯ ನಿಗೆ ಏನೆಲ್ಲಾ ಹೇಳಿದರು ಗೊತ್ತಾ..? ಇಲ್ನೋಡಿ ವಿಡಿಯೋ..