ಸಿದ್ದು ಸರ್ಕಾರ ಹಾಗೂ ಗಣ್ಯರ ಸಾವಿನ ಬಗ್ಗೆ ಭವಿಷ್ಯ ನುಡಿದ ಕೊಡಿ ಸ್ವಾಮೀಜಿ! ಅದೇನು ನೀವೇ ನೋಡಿ?

ಸಿದ್ದು ಸರ್ಕಾರ ಹಾಗೂ ಗಣ್ಯರ ಸಾವಿನ ಬಗ್ಗೆ ಭವಿಷ್ಯ ನುಡಿದ ಕೊಡಿ ಸ್ವಾಮೀಜಿ! ಅದೇನು ನೀವೇ ನೋಡಿ?

ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ ನುಡಿಯುತ್ತಿದ್ದ ಕೊಡಿ ಮಠದ ಸ್ವಾಮೀಜಿ ಈಗಂತೂ ಆಗಾಗ ಬಂದು ಜಗತ್ತಿನ ಅಂತ್ಯದ ಮುನ್ಸೂಚನೆ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.  

ಇನ್ನೂ ನಾಲ್ಕು ವರ್ಷದ ಹಿಂದೆ ಇವರು ತಿಳಿಸಿರುವ ಹಾಗೆ 100 ವರ್ಷಕ್ಕೆ ಒಮ್ಮೆ ಬರುವ ಸಾಂಕ್ರಾಮಿಕ ರೋಗದಿಂದ ನಮ್ಮ ಪ್ರಪಂಚ ಹೊಡೆತ ಅನುಭವಿಸುತ್ತದೆ ಎಂದು ತಿಳಿದಿದ್ದರೂ ಇನ್ನೂ ಅವರು ಹೇಳಿದಂತೆ ಕರೋನ ಕಾರಣದಿಂದ ಇಡೀ ದೇಶವೇ ಸ್ತಬ್ಧವಾಗಿತ್ತು. ಹಾಗೆಯೇ ಇಂದಿಗೂ ಆ ರೋಗದ ಹೊಡೆತದಿಂದ ನಾವಿನ್ನೂ ಸುಧಾರಣೆ ಕಂಡಿಲ್ಲ. ಹೀಗಿರುವಾಗ ಮತ್ತೆ ಕೊಡಿ ಮಠದ ಸ್ವಾಮೀಜಿ ಅವರು ಭವಿಷ್ಯ ನೀಡಿದ್ದಾರೆ. ಇನ್ನೂ ಈಗ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರದಿಂದ ನಮ್ಮ ಪ್ರಪಂಚ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹಾಗೆಯೇ ಇದರಿಂದ ಬೇಸತ್ತ ಜನರಿಂದ 2024 ಮುಗಿಯುವ ಹೊತ್ತಿನಲ್ಲಿ ಸಿದ್ದು ಅವರ ಸರ್ಕಾರಕ್ಕೂ ಕೊಡ ಸಂಕಷ್ಟ ಎದುರಾಗಲಿದೆ.

ಹಾಗೆಯೇ 2024 ರೆಲ್ಲಿ ನಮ್ಮ ಪ್ರಪಂಚ ಮತ್ತೆ ಸಮಸ್ಯೆಗಳಿಗೆ ಸಿಲುಕಲಿದೆ. ಭೂಕಂಪ ಹಾಗೂ ಸುನಾಮಿಯ ಭೀತಿ ಕೊಡ ಎದುರಿಸಬೇಕಾಗುತ್ತದೆ. ಹಾಗೆಯೇ ರಾಜಕಿಯದಲ್ಲಿ ಒಬ್ಬ ಹೆಣ್ಣು ಮಕ್ಕಳ ಆಳ್ವಿಕೆಯಿಂದ ರಾಜಕೀಯ ರಣರಂಗ ಹಾಗೂ ಕುರುಕ್ಷೇತ್ರದ ರೀತಿಯಲ್ಲಿ ಬದಲಾಗಲಿದೆ. ಇನ್ನೂ ಮುಂದಿನ ವರ್ಷದಲ್ಲಿ  ಸಾಕಷ್ಟು ಗಣ್ಯರ ಸಾವಾಗಲಿದೆ. ಹಾಗೆಯೇ ಮತ್ತೆ ಕೇಂದ್ರ ಸರ್ಕಾರದಲ್ಲಿ ಯಾವ ಮಿಶ್ರ ಸರ್ಕಾರ ಅಥವಾ ಮೈತ್ರಿ ಸರ್ಕಾರ ಮಾಡದೆ ಒಂದೇ ಸರ್ಕಾರ ಆಳ್ವಿಕೆಗೆ ಬರುತ್ತದೆ ಎಂದು ಭವಿಷ್ಯ ನುಡಿದರು.ಆದ್ರೆ ಸೂಕ್ತವಾಗಿ ಯಾವ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಮಾತ್ರ ತಿಳಿಸಿಲ್ಲ. ಇನ್ನೂ ಮುಂದಿನ ವರ್ಷದಲ್ಲಿ ಇವರ ಮಾತು ಎಷ್ಟರ ಮಟ್ಟಿಗೆ ನೈಜತೆ ಹೊಂದಲಿದೆ ಎಂದು ಕಾದು ನೋಡಬೇಕಿದೆ .