ಚಂದ್ರಯಾನ 3 ರ ಬೆನ್ನಲ್ಲೆ ಕೋಡಿ ಮಠದ ಶ್ರೀಗಳು ನುಡಿದ ಮುಖ್ಯಮಂತ್ರಿ ಭವಿಷ್ಯ ವೈರಲ್..!

ಚಂದ್ರಯಾನ 3 ರ ಬೆನ್ನಲ್ಲೆ ಕೋಡಿ ಮಠದ ಶ್ರೀಗಳು ನುಡಿದ ಮುಖ್ಯಮಂತ್ರಿ ಭವಿಷ್ಯ ವೈರಲ್..!

ರಾಜ್ಯದ ಖ್ಯಾತ ಸ್ವಾಮೀಜಿಗಳಾದ ಹಾಗೂ ಪ್ರಖ್ಯಾತಿ ಪಡೆದಿರುವ ಹಾಸನದ ಅರಸೀಕೆರೆ ಕೋಡಿಮಠದ ಶ್ರೀಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಕೋಡಿಮಠದ ಶ್ರೀಗಳು ಒಂದು ವಿಷಯದ ಬಗ್ಗೆ ಮಾತನಾಡುತ್ತಾರೆ ಎಂದರೆ, ಯಾವುದಾದರೂ ಒಂದು ವಿಷಯದ ಕುರಿತು ಭವಿಷ್ಯ ನುಡಿಯುತ್ತಿದ್ದಾರೆ ಎಂದರೆ ಅವುಗಳೆಲ್ಲವೂ ನಿಜವೇ ಆಗುತ್ತವೆ ಎಂದು ನಂಬಲಾಗುತ್ತದೆ. ಕೆಲವರು ಕೋಡಿಮಠದ ಶ್ರೀಗಳ ಭವಿಷ್ಯವನ್ನು ಆಲಿಸಲೆಂದೇ ಅವರು ಬರುವ ಎಲ್ಲಾ ಕಾರ್ಯಕ್ರಮಗಳಿಗೆ, ಆ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ರಾಜ್ಯದ ರೈತರು ಮಳೆ ಬೆಳೆ ವಿಚಾರವಾಗಿ ಅವರ ಬಳಿ ಹೇಳಿಕೆಯನ್ನು ಕೇಳಲು ಹೋಗುತ್ತಾರೆ.   

ಹೀಗೆ ಕೋಡಿಮಠದ ಶ್ರೀಗಳು ತುಂಬಾನೇ ಪ್ರಸಿದ್ಧಿ ಹೊಂದಿರುವ ಸ್ವಾಮೀಜಿಗಳು ಎಂದು ಹೇಳಬಹುದು. ಕೋಡಿಮಠದ ಶ್ರೀಗಳು ಮೊನ್ನೆ ಯಶಸ್ವಿಯಾದ ಚಂದ್ರಯಾನದ ಬಗ್ಗೆಯೂ ಭವಿಷ್ಯವ ಹೇಳಿದ್ದರು. ಹೌದು ಚಂದ್ರಯಾನ ಮೂರು ಯಶಸ್ವಿ ಆಗಲಿದೆ ಎಂದು ಹೇಳಿಕೆ ಕೊಟ್ಟಿದ್ದು, ಅದರಂತೆ ಚಂದ್ರಯಾನ ಇದೀಗ ಯಶಸ್ವಿಯಾಗಿದೆ. ರಾಜ್ಯದ ಬಗ್ಗೆ ಮತ್ತು ರಾಷ್ಟ್ರ ರಾಜಕೀಯ ಬಗ್ಗೆ ಮಾತನಾಡಿದ್ದ ಕೂಡಿ ಶ್ರೀಗಳು ರಾಷ್ಟ್ರ ರಾಜಕೀಯ ಬಗ್ಗೆ ಇನ್ನೂ ಸಮಯವಿದೆ, ಆಗ ನಾನೇ ಮಾತನಾಡುತ್ತೇನೆ, ಲೋಕಸಭಾ ಚುನಾವಣೆ ಮುಗಿದ ಬಳಿಕ ಮಾತನಾಡುತ್ತೇನೆ. ನಂತರ ರಾಜ್ಯ ರಾಜಕೀಯ ವಿಷಯದ ಕುರಿತು ಐದು ವರ್ಷ ಕಾಂಗ್ರೆಸ್ ಸರ್ಕಾರವೇ ಅಧಿಕಾರ ನಡೆಸಲಿದ್ದು, ಆದರೆ ಈಗಿನ ಮುಖ್ಯಮಂತ್ರಿ ಅವರೋಬ್ಬರೇ ಇರುತ್ತಾರೆ ಎಂದು ಹೇಳಲಿಲ್ಲ, ಬದಲಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ, ಮುಖ್ಯಮಂತ್ರಿ ಆಗಿ ಮಹಿಳೆ ಬರುವ ಲಕ್ಷಣಗಳು ಇದೆ ಎಂದು ಎಲ್ಲರಿಗೂ ಶಾಕ್ ನೀಡಿದ್ದಾರೆ. ಜೊತೆಗೆ ಈಗಿನ ಆಹಾರದ ಬಗ್ಗೆ ಮಾತನಾಡಿದ್ದು ಹೊಲಗಳಲ್ಲಿ ಬೆಳೆಗಳಿಗೆ ಹೆಚ್ಚು ವಿಷಪೂರಿತ ಎಣ್ಣೆಗಳನ್ನು ಹೊಡೆಯಲಾಗುತ್ತಿದೆ,  ಅದನ್ನ ನಾವು ಸೇವಿಸಿ ನಾವು ಕೂಡ ಅನಾರೋಗ್ಯಕ್ಕೆ ಈಡಾಗುತ್ತಿದ್ದೇವೆ, ಹಾಗಾಗಿ ನಮ್ಮ ಅರೋಗ್ಯದ ಕಡೆ ಗಮನ ಕೊಡಬೇಕು. ಅದು ಹೇಗೆ ಸುಧಾರಿಸಲಿಕ್ಕೆ ಸಾಧ್ಯ ಎಂದರು.

ಜೊತೆಗೆ ಮನುಷ್ಯ ದೈವವನ್ನು ನಂಬಬೇಕು, ದೈವವನ್ನು ನಂಬುವವರು ಎಂದಿಗೂ ಸಮಸ್ಯೆ ಎದುರಿಸಲಾರರು. ನಂಬದಿರುವವರಿಗೆ ಸಮಸ್ಯೆ ಹೆಚ್ಚು. ಹಾಗೆ ಈಗಿನ ಬರಗಾಲದ ಕುರಿತು ಮತ್ತು ಮುಂದಿನ ದಿನಗಳಲ್ಲಿ ಯಾವಾಗ ಮಳೆ ಆಗುತ್ತದೆ ಎಂಬುದಾಗಿ ಆ ವಿಚಾರವ ಸಹ ಕೋಡಿಮಠದ ಶ್ರೀಗಳು ಹೇಳಿದರು. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿಯ ವಿಡಿಯೋ. ಶ್ರಾವಣ ಮಧ್ಯಂತರದಿಂದ ಮುಂದಿನ ಕಾರ್ತಿಕ ಮಾಸದವರೆಗೂ ಭರ್ಜರಿ ಮಾಳೆಯಾಗಲಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.  ಒಮ್ಮೆ ಈ ವಿಡಿಯೋ ನೋಡಿ, ಹಾಗೆ ಕೊಡಿ ಶ್ರೀಗಳ ಈ ಭವಿಷ್ಯದ ಕುರಿತು ನಿಮ್ಮ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...