ಧೃವಸರ್ಜಾ ಮಾತಿಗೆ ದರ್ಶನ್ ಕೊಟ್ಟ ತಿರುಗೇಟು ಏನು ಗೊತ್ತಾ ? ಧೃವಸರ್ಜಾ ಶಾಕ್ !

ಧೃವಸರ್ಜಾ ಮಾತಿಗೆ ದರ್ಶನ್ ಕೊಟ್ಟ ತಿರುಗೇಟು ಏನು ಗೊತ್ತಾ ? ಧೃವಸರ್ಜಾ ಶಾಕ್ !

ಸಿನಿಮಾ ರಂಗದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ. ಇಂದು ಸ್ಟಾರ್ ಪಟ್ಟದಲ್ಲಿ ಇರುವ ನಟರು ನಾಳಿನ ಕಾಲದಲ್ಲಿ ಯಾವ ಅವಕಾಶ ಇಳಲ್ದೆ ಕಾಲಿ ಕುಳಿತಿರುವುದನ್ನು ಕೂಡ ನಾವು ನೋಡಿದ್ದೇವೆ. ಹೀಗಿರುವಾಗ ಇರುವಷ್ಟು ಸಮಯ ಕೂಡ ಎಷ್ಟು ಮಿಂಚಲು ಸಾದ್ಯ ಅಷ್ಟು ಮಿಂಚುವ ಪ್ರಯತ್ನದಲ್ಲಿ ಇರುತ್ತಾರೆ. ಹಾಗೆಯೇ ಜೊತೆಗಿದ್ದ ಸ್ನೇಹಿತರೇ ಕೂಡ ಸಿನಿಮಾ ವಿಚಾರಕ್ಕೆ ಬಂದರೆ ಕಾಂಪಿಟೇಶನ್ ಕೂಡ ಇರುತ್ತದೆ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಆಗುವುದು ತುಂಬಾ ಕಡಿಮೆ. ಆದರೆ ಕೆಲ ಮನಸ್ತಾಪದ ಕಾರಣದಿಂದ ಈ ಸ್ಟಾರ್ ವಾರ್ ಹುಟ್ಟುಹಾಕಿಕೊಳ್ಳುತ್ತದೆ. ಕಳೆದ ಏಳು ವರ್ಷದಿಂದಲೂ ಕೂಡ ಸ್ಟಾರ್ ವಾರ್ ಎಂದ ಕೂಡಲೇ ನೆನಪಾಗುತ್ತಿದೆ ಹೆಸರು ಎಂದರೆ ಅದು "ಕಿಚ್ಚ ಸುದೀಪ್" ಹಾಗೂ "ಚಾಲೆಂಜಿಂಗ್ ಸ್ಟಾರ್ ದರ್ಶನ್".

ಇನ್ನೂ ಇವರಿಬ್ಬರ ಮನಸ್ತಾಪ ಬಗೆ ಹರಿಯುವುದಿಲ್ಲ ಎನ್ನುವ ಸತ್ಯ ಕೂಡ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆ ಆಗಿದೆ. ಆ ಹೆಸರೇ "ದ್ರುವ ಸರ್ಜಾ" ಹಾಗೂ ದರ್ಶನ್. ಹೌದು ಈ ಮುಗ್ದ ಮನಸ್ಥಿತಿಯ ದ್ರುವ ಅವರು ಕೋಪ ಮಾಡಿಕೊಳ್ಳಲು ಸಾಧ್ಯಾನಾ ಎಂದು ನಿಮಗೆಲ್ಲರಿಗೂ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ಕಾವೇರಿ ಗಲಾಟೆಯಲ್ಲಿ ಒಂದಾಗಿ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಇದ್ದರೂ ಕೊಡ ಒಬ್ಬರನೊಬ್ಬರು ಮಾತನಾಡದೆ ಇರುವುದು ಎಲ್ಲರಿಗೂ ಅನುಮಾನ ಮೂಡಿಸಿತ್ತು. ಅದಾದ ಬಳಿಕ ದ್ರುವ ಅವರಿಗೆ ಮಾಧ್ಯಮದವರು ಕೊಡ ನಿಮ್ಮಿಬ್ಬರ ಈ ವರ್ತನೆಗೆ ಕಾರಣ ಏನು ಎಂದು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ದ್ರುವ ಅವರು ನನಗೆ ದರ್ಶನ್ ಅವರ ಬಗ್ಗೆ ಬಹಳಷ್ಟು ಈಗಾಗಲು ಕೊಡ ಗೌರವ ಇದೆ. ಆದ್ರೆ ನನ್ನಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಸಿಗುವ ವರೆಗೂ ನಾನೂ ಅವರ ಜೊತೆಗೆ ಮುಂಚಿನಂತೆ ಇರಲು ಸಾಧ್ಯವಾಗುತ್ತಿಲ್ಲ ಎಂದರು. ಇನ್ನೂ ದರ್ಶನ್ ಅವರು ದ್ರುವ ಅವರು ಬಹಿರಂಗವಾಗಿ ಈ ಹೇಳಿಕೆ ನೀಡಿದ್ದರು ಕೊಡ ಯಾವ ಪ್ರತಿಕ್ರಿಯೆ ಕೊಡ ನೀಡಿಲ್ಲ. ಆದರೆ ಮೊನ್ನೆಯಷ್ಟೇ ಬಿಡುಗಡೆ ಆದ ಚಿರು ಅವರ ಸಿನಿಮಾ ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಈ ಸಿನಿಮಾವನ್ನು ನೋಡಿ ಎಂದು ಬರೆದುಕೊಂಡಿದ್ದಾರೆ. ಇನ್ನೂ ಇವರಿಬ್ಬರ ಮಸ್ತಾಪ ಹೀಗೆ ಮುಂದುವೆರೆಯುತ್ತಾ ಅಥವಾ ಇಬ್ಬರು ಕುಳಿತು ಮಾತಾಡಿ ಬಗೆಹರಿಸಿಕೊಂಡು ಮುಂಚಿನಂತೆ ಆಗುತ್ತಾರ ಎಂದು ಕಾದು ನೋಡಬೇಕಿದೆ.