ಯಾರಿಗೂ ಗೊತ್ತಿರದ ಚೈತ್ರಾ ಕುಂದಾಪುರ ಮಾಡುತ್ತಿದ್ದ ಮೊದಲ ಕೆಲಸ..! ಈಗ ಬಯಲು

ಯಾರಿಗೂ ಗೊತ್ತಿರದ ಚೈತ್ರಾ ಕುಂದಾಪುರ ಮಾಡುತ್ತಿದ್ದ ಮೊದಲ ಕೆಲಸ..! ಈಗ ಬಯಲು

ಹೌದು ಬಂಧುಗಳೇ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಹಿಂದೂ ವಿಚಾರವಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆಯೇ ಧರ್ಮ ಮತ್ತು ದೇವರ ಹೆಸರಿನಲ್ಲಿ ಮುಸ್ಲಿಂ ವಿರುದ್ಧವಾಗಿ ಹೆಚ್ಚೆಚ್ಚು ಭಾಷಣ ಮಾಡಿ ಅಪಾರ ಅನುಯಾಯಿಗಳನ್ನು ಹೊಂದಿದ್ದ ಚೈತ್ರ ಕುಂದಾಪುರ ಇದೀಗ ಸಿಸಿಬಿ ವಶದಲ್ಲಿದ್ದಾರೆ. ಅದು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿಗೆ ಮೋಸ ಮಾಡಿದ್ದು ಹಣ ತೆಗೆದುಕೊಂಡು ವಂಚಿಸಿದ ಕಾರಣಕ್ಕೆ ಎನ್ನಲಾಗಿದೆ. ಗೋವಿಂದ ಬಾಬು ಪೂಜಾರಿ ಅವರು ಏನು ಸಾಮಾನ್ಯ ವ್ಯಕ್ತಿಯಲ್ಲ, ವರ್ಷಕ್ಕೆ 50 ಕೋಟಿ ವ್ಯವಹಾರ ಮಾಡುವ ಒಬ್ಬ ದೊಡ್ಡ ಉದ್ಯಮಿಯಂತೆ. ಅಂತಹ ಚಾಣಾಕ್ಷತನದ ಉದ್ಯಮಿಗೆ ಈ ಚೈತ್ರಾ ಕುಂದಾಪುರ ಒಂದು ಗ್ಯಾಂಗ್ ಕಟ್ಟಿಕೊಂಡು ಈ ರೀತಿ ಅವರಿಗೆ ವಂಚನೆ ಮಾಡಿದ್ದಾರೆ ಎಂದರೆ ಇವರು ಕೂಡ ಅಸಮಾನ್ಯರೇ ಎನ್ನಬಹುದು.
ಆದ್ರೆ ಇದು ಸರಿ ದಾರಿಯಲ್ಲ ಎಂದು ಹೇಳಬಹುದು.

ಆದರೆ ಇಷ್ಟು ದಿನ ಕಾಪಾಡಿಕೊಂಡು ಬಂದ ಧರ್ಮ ಮತ್ತು ದೇವರ ನಂಬಿಕೆಯನ್ನು ಅವರ ಮಾತುಗಳನ್ನು ಅವರೇ ತಮ್ಮ ಕೈಯಾರೆ ಹಾಳು ಮಾಡಿಕೊಂಡರು. ಚೈತ್ರ ಕುಂದಾಪುರ ಅವರು ಕೋಟ್ಯಧಿಶ್ವರಿ ಆಗಬೇಕು ಎನ್ನುವ ಚಿತ್ತದಲ್ಲಿ ಇದ್ದವರು, ಆದರೂ ಕೂಡ ಇಂದಿಗೂ ಹಳ್ಳಿಯ ಒಂದು ಪುಟ್ಟ ಮನೆಯಲ್ಲಿಯೇ ಇವರು ವಾಸ ಮಾಡುತ್ತಿದ್ದಾರಂತೆ.. ಮಗಳ ಈ ಎಲ್ಲಾ ವಿಚಾರಗಳು ಯಾವುವು ಚೈತ್ರ ಅವರ ತಾಯಿಗೆ ಗೊತ್ತಿರಲಿಲ್ಲವಂತೆ. ನಮಗೆ ಹೆಚ್ಚು ಟೆನ್ಶನ್ ಕೊಡುತ್ತಿರಲಿಲ್ಲ ಮಗಳು ಯಾರೋ ಮಾಡಿದ ತಪ್ಪಿಗೆ ನನ್ನ ಮಗಳನ್ನು ಗುರಿ ಮಾಡಿದ್ದಾರೆ ಎಂದು ನಿನ್ನೆ ವಿಡಿಯೋದಲ್ಲಿ ಚೈತ್ರ ಅವರ ತಾಯಿ ಹೇಳಿರುವುದು ಕಂಡುಬಂದಿದೆ.

ಅಸಲಿಗೆ ಚೈತ್ರಾ ಅವರ ಹಿನ್ನೆಲೆ ಏನು..? ಅಷ್ಟು ದೊಡ್ಡ ಮೊತ್ತದಲ್ಲಿ ವಂಚನೆ ಮಾಡಲು ಯಾವ ರೀತಿ ಪ್ಲಾನ್ ಮಾಡಿದದು, ಇವರ ಬಗ್ಗೆ ನಿಮಗೆಷ್ಟು ಗೊತ್ತು, ಇವರ ಓದು, ಕೆಲಸ, ಇವರ ಹಿನ್ನೆಲೆ ಎಲ್ಲವನ್ನ ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಮುಂದೆ ಓದಿ..
ಹೌದು ಚೈತ್ರ ಕುಂದಾಪುರ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಎನ್ನುವ ಗ್ರಾಮದಲ್ಲಿ ಜನಿಸಿದ್ದಾರೆ. ಆರಂಭದಲ್ಲಿಯ ಶಾಲಾ ಕಾಲೇಜುಗಳನ್ನು ತೆಕ್ಕಟ್ಟೆಯಲ್ಲಿ ಮುಗಿಸಿದ್ದಾರೆ. ನಂತರ ಪದವಿಯನ್ನು ಕೊಳಾಜಿ ಎಂಬಲ್ಲಿ ಮುಗಿಸಿದ್ದಾರೆ. ನಂತರ ಮುಂದಿನ ಪದವಿ ಮಂಗಳೂರಿನಲ್ಲಿ ಪೋಸ್ಟ್ ಗ್ರಾಜುಯೇಟ್ ಪಡೆದುಕೊಂಡ ಚೈತ್ರಾ ಕುಂದಾಪುರ ಅವರು ನಂತರ ಬೆಂಗಳೂರಿನ ಸಮಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇವರು ಮಂಗಳೂರಿನಲ್ಲಿ ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ವಿದ್ಯಾಭ್ಯಾಸ ಪಡೆದಿದ್ದ ಹಿನ್ನೆಲೆಯಲ್ಲಿ ಸಮಯ ಟಿವಿಯಲ್ಲಿಯೂ ಕೆಲಸ ಮಾಡುತ್ತಿದ್ದರು. ನಂತರ ಕರಾವಳಿ ಪ್ರದೇಶದ ಸ್ಪಂದನ ಟಿವಿಯಲ್ಲೂ ಕೂಡ ಚೈತ್ರ ನಿರೂಪಕಿಯಾಗಿದ್ದರಂತೆ, ಇನ್ನೊಂದು ಮುಕ್ತ ವಾಹಿನಿ, ಉದಯವಾಣಿ ಪತ್ರಿಕೆ ಹೀಗೆ ಹಂತ ಹಂತವಾಗಿ ಪತ್ರಿಕೋದ್ಯಮ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಚೈತ್ರಾ. ನಂತರ ಎಬಿವಿಪಿ ಸಂಘಟನೆಯಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ ಚೈತ್ರ ಕುಂದಾಪುರ ಅವರು ಮೊದಲೇ ಉಪನ್ಯಾಸಕಿ ಮತ್ತು ನಿರೂಪಣೆ ಮಾಡುತ್ತಾ ಕನ್ನಡದ ಭಾಷೆ ಮೇಲೆ ಹಾಗೆ ಅವರು ಮಾತನಾಡುವ ಶೈಲಿಯಲ್ಲಿ ಅತಿವ ಹಿಡಿತ ಹಿಡಿದುಕೊಂಡಿದ್ದರು.. ನಂತರ ಹೆಚ್ಚೆಚ್ಚು ಎಬಿವಿಪಿ ಸಂಘಟನೆಯಲ್ಲಿ ಕಾಣಿಸಲು ಗುರುತಿಸಿಕೊಳ್ಳಲು ಮುಂದಾದರು.

ಆರಂಭದಲ್ಲಿ ಹಿಂದೂ ಧರ್ಮದ ಕುರಿತು ಮಾತನಾಡುತ್ತಾ ಗಮನ ಸೆಳೆದ ಚೈತ್ರ ಕುಂದಾಪುರ ಅವರು ಆನಂತರದಲ್ಲಿ ಮುಸ್ಲಿಂ ವಿರುದ್ಧವಾಗಿ ಮಾತನಾಡಲು ಶುರು ಮಾಡಿದ್ದಾರೆ. ಈ ಮುಸ್ಲಿಂ ಬಾಂಧವರನ್ನು, ಮುಸ್ಲಿಂ ಧರ್ಮದವರನ್ನು, ಮುಸ್ಲಿಂ ಧರ್ಮವನ್ನು ವಿರೋಧಿಸುತ್ತಾ ಭಾಷಣಕಾರ್ತಿಯಾಗಿ ಮಾರ್ಪಾಡಾಗಿದ್ದರು. ಕರಾವಳಿ ಪ್ರದೇಶದಲ್ಲಿ ಬಿಜೆಪಿ ಮತ್ತು ಹಿಂದು ವೇದಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಷಣ ಮಾಡುತ್ತಾ ತುಂಬಾನೇ ಪ್ರಸಿದ್ಧಿ ಪಡೆದವರು ಈ ಚೈತ್ರಾ. ಆದರೆ ಇತ್ತೀಚಿಗೆ ಇವರ ಪ್ರಸಿದ್ಧಿ ಕಡಿಮೆಯಾಗಿತ್ತು... ಕಾರಣ ಸುಬ್ರಹ್ಮಣ್ಯದಲ್ಲಿ ನಡೆದ ಒಂದು ಘಟನೆಯಿಂದ ಇವರ ಬೇಡಿಕೆ ಕಡಿಮೆ ಆಗಿತ್ತು ಎಂದು ತಿಳಿದುಬಂದಿದೆ.

ಹಾಗಾಗಿ ಉತ್ತರ ಕರ್ನಾಟಕದ ಕಡೆ ಮತ್ತೆ ಪ್ರಸಿದ್ಧಿ ಪಡೆಯಲು ಚೈತ್ರ ಕುಂದಾಪುರ ಅಲ್ಲಿ ಕಾಣಿಸಿಕೊಳ್ಳಲು ತೊಡಗಿದರು..ಇದೆಲ್ಲ ಚೈತ್ರ ಕುಂದಾಪುರ ಅವರ ಹಿನ್ನೆಲೆ. ಅಸಲಿಗೆ ಗೋವಿಂದ ಪೂಜಾರಿ ಬಾಬು ಅವರಿಂದ ಚೈತ್ರ ಒಟ್ಟು ಪಡೆದ ಹಣ ಎಷ್ಟು? ಸ್ವಾಮೀಜಿಗೆ ಈ ಹಣದಲ್ಲಿ ಹೋಗಿರುವುದೆಷ್ಟು.?? ಅಸಲಿಗೆ ಈ ಚೈತ್ರಾ ಅವರು ತೆಗೆದುಕೊಂಡ ಹಣ ಎಷ್ಟು..?? ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಈ ರೀತಿ ಧರ್ಮದ ವಿಚಾರದಲ್ಲಿಯೇ ಮಾಡುವ ಅನ್ಯಾಯ ಮತ್ತು ವಂಚಿಸುವ ವ್ಯಕ್ತಿಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ವಿಡಿಯೋ ನೋಡಿ ಧನ್ಯವಾದಗಳು...