ದರ್ಶನ್ ಭವಿಷ್ಯ , ಜಾತಕದಲ್ಲಿ ಕಂಟಕ ಇದೆ ಎಂದ ಆರ್ಯ ವರ್ಧನ್! ಇವರು ಹೇಳೋದು ಏನು ಗೊತ್ತಾ?

ದರ್ಶನ್ ಭವಿಷ್ಯ , ಜಾತಕದಲ್ಲಿ ಕಂಟಕ ಇದೆ ಎಂದ  ಆರ್ಯ ವರ್ಧನ್! ಇವರು ಹೇಳೋದು ಏನು ಗೊತ್ತಾ?

ಈಗ ದರ್ಶನ್ ಅವರಿಗೆ ಬಂದಿರುವ ಸಂಕಷ್ಟಗಳು ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಈ ಸಂಕಷ್ಟದಲ್ಲಿ ವಿಚಾರಗಳಿಗೆ ಹಾಗೂ ಅವರಿಗೆ ಬಂದಿರುವ ಗ್ರಹಗತಿಗಳು ಎಲ್ಲದಕ್ಕೂ ಅವರ ಜಾತಕವೇ  ಕಾರಣ ಎಂದು ಎಲ್ಲೆಡೆ ಈಗ ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.  ಈ ಬಗ್ಗೆ ಆರ್ಯ ವರ್ಧನ್ ಅವರು ಏನು ಹೇಳೀದ್ದಾರೆ ನೋಡಿ ಈಗ ದರ್ಶನ್ ಅವರಿಗೆ ಜಾತಕದಲ್ಲಿ ಶನಿ ದೋಷ ಇದ್ದು ಇದರಿಂದಲೇ ದರ್ಶನ್ ಅವರಿಗೆ ಸಾಕಷ್ಟು ಕಷ್ಟಗಳು ಬಂದೆರಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ದರ್ಶನ್ ಅವರ ಜಾತಕದ ಪ್ರಕಾರ  ಕುಂಭ ಲಗ್ನದಲ್ಲಿ ಜನಿಸಿರುವ ಇವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಯೋಗವು ಕೊಡ ಇದ್ದು ಇದರಿಂದಲೇ ಈತನಿಗೆ ಹೆಚ್ಚು ಯಶಸ್ಸು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಜ್ಯೋತಿಷ್ಯದ ಪ್ರಕಾರ ಕುಂಭ ಲಗ್ನದಲ್ಲಿ ಜನ್ಮ ತಾಳಿದವರಿಗೆ ಸಹಜವಾಗಿ ಕೆಲವು ಸವಾಲುಗಳು ಮತ್ತು ಕಂಟಕಗಳು ಎದುರಾಗಬಹುದು.

 ಶನಿ ಲಗ್ನಾಧಿಕಾರಿಯಾಗಿರುವುದರಿಂದ, ಅದರ ದಶಾ-ಅಂತರದ ಸಮಯದಲ್ಲಿ ದೀರ್ಘಕಾಲದ ಶ್ರಮ, ವಿಘ್ನಗಳು, ದೈಹಿಕ ಮತ್ತು ಮಾನಸಿಕ ಹೊರೆಗಳ ಅನುಭವವಾಗಬಹುದು. ಶನಿ 8ನೇ ಅಥವಾ 12ನೇ ಮನೆಯಲ್ಲಿ ಇರುವಾಗ ನಿರಂತರ ಕಷ್ಟಗಳು, ಆರೋಗ್ಯದ ಸಮಸ್ಯೆಗಳು. ರಾಹು 7ನೇ ಮನೆಯಲ್ಲಿ ಅಥವಾ ಲಗ್ನದಲ್ಲಿ ಇರುವುದು, ವೈವಾಹಿಕ ಜೀವನದಲ್ಲಿ ಅಸಮಾಧಾನ, ವಿರೋಧ, ಅನಿವಾರ್ಯ ಪರ್ಯಾಯಗಳು. ಕೆತು 1ನೇ ಮನೆಯಲ್ಲಿ ಇರುವುದು, ಆತ್ಮವಿಶ್ವಾಸದ ಕೊರತೆ, ನಿರಾಶೆ. ಮಂಗಳ 1, 4, 7, 8, 12ನೆ ಮನೆಗಳಲ್ಲಿ ಇರುವುದು (ಮಂಗಳ ದೋಷ), ವೈವಾಹಿಕ ಸಮಸ್ಯೆಗಳು, ದೈಹಿಕ ಅಪಾಯಗಳು. ಶಾರೀರಿಕ ಗಾಯಗಳ ಅಥವಾ ಅಪಘಾತಗಳ ಸಂಭವ. ಧನನಷ್ಟ, ಅಪರಿಚಿತ ಸ್ಥಳಗಳಲ್ಲಿ ದುಡುಕು ಪ್ರಯತ್ನಗಳು, ಆರ್ಥಿಕ ನಷ್ಟ. ಈ ರೀತಿಯ ಸಂಕಷ್ಟಗಳು ದರ್ಶನ್ ಅವರಿಗೆ ಈ ರೀತಿಯ ಸಂಕಷ್ಟಗಳನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.   

ಹಾಗೆಯೇ ದರ್ಶನ್ ಅವರ ವಾಸವಾಗಿರುವ ಸ್ಥಳ ಕೊಡ ವಾಸ್ತು ದೋಷವು ಹೆಚ್ಚಾಗಿಯೇ ಇದೆ. ಇನ್ನೂ RR ನಗರದಲ್ಲಿ ಸಾಕಷ್ಟು ಸೆಲೆಬ್ರಿಟಿ ಹಾಗೂ ದೊಡ್ಡ ದೊಡ್ಡ ಅಸ್ತಿವಂತರು  ಕೊಡ ಅಲ್ಲೆಯೇ ಇದ್ದು ಅವರಿಗೆ ಎಷ್ಟು ಆಸ್ತಿ ಹಣ ಏನೇ ಇದ್ದರೂ ಕೊಡ ನೆಮ್ಮದಿ ಎನ್ನುವುದು ಅವರು ಆ ಜಾಗದಲ್ಲಿ ಇರುವ ವರೆಗೂ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ. ಏಕೆಂದರೆ RR ನಗರ ಎಂದರೆ ರಾಜ ರಾಜೇಶ್ವರಿ ನಗರವನ್ನು ಕೂಡಿದಾಗ ಅಂಕಿ ಅಂಶ ಅಷ್ಟು ಒಳ್ಳೆಯ ಅಂಕಿ ಬಾರದ ಕಾರಣ ಅಲ್ಲಿ ಏನೇ ಇದ್ದರೂ ಕೊಡ ಕೆಲವೊಂದರ ಕೊರತೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.  ಹಾಗೆಯೇ ಅಂಕಿ ಅಂಶದ ಪ್ರಕಾರ ದರ್ಶನ್ ಹೆಸರನ್ನು ಕೊಡಿದಾಗ 21 ಅಂಕಿ ಬರುತ್ತದೆ ಅವರ ಹುಟ್ಟಿದ ದಿನಕ್ಕೆ ವಿರುದ್ಧವಾಗಿ ಬರುವುದರಿಂದ ಆ ಹೆಸರು ಅವರ ಜೊತೆ ಇರುವವರೆಗೂ ಇವರಿಗೆ ಕಷ್ಟದ ಹಾಗೂ ದ್ವೇಷದ ವಾತಾವರಣ ಇದ್ದೆ ಇದೆ.