ಹೆಂಡ್ತಿ ನೆನಪಿನಲ್ಲೇ ಜೀವನ ಮಾಡುತ್ತೇನೆ ಎಂದ ರಾಘು..! ಒಬ್ಬರೇ ಇದ್ದಾಗ ಮಾತ್ರ ಅಳುತ್ತಾರಂತೆ

ಹೆಂಡ್ತಿ ನೆನಪಿನಲ್ಲೇ ಜೀವನ ಮಾಡುತ್ತೇನೆ ಎಂದ ರಾಘು..! ಒಬ್ಬರೇ ಇದ್ದಾಗ ಮಾತ್ರ ಅಳುತ್ತಾರಂತೆ

ಕನ್ನಡ ಚಲನಚಿತ್ರರಂಗದ ಖ್ಯಾತ ನಟರ ಪಟ್ಟಿಯಲ್ಲಿ ವಿಜಯ ರಾಘವೇಂದ್ರ ಅವರು ಕೂಡ ಒಬ್ಬರು. ಹೌದು ಅವರ ಮುಂದಿನ ಸಿನಿಮಾ ಕದ್ದ ಚಿತ್ರ ಒಂದು ವಿಭಿನ್ನ ಅನುಭವ ನೀಡುವುದಂತೂ ಪಕ್ಕ ಆಗಿದೆ. ಇಷ್ಟು ದಿನ ಬಂದಂತಹ ಇವರ ಅಭಿನಯದ ಸಿನಿಮಾಗಳೇ ಬೇರೆ, ಈಗ ಬರುತ್ತಿರುವ ಇವರ ಕದ್ದ ಚಿತ್ರ ಸಿನಿಮಾದ ಜಲಕ್ಕೆ ಬೇರೆ ಎಂಬಂತೆ ಟ್ರೈಲರ್ ಭರ್ಜರಿಯಾಗಿ ಯಶಸ್ವಿಯಾಗಿ ಮುನ್ನುಗುತಿದೆ. ಹೌದು ಮೊದಲ ಬಾರಿ ಸಂದರ್ಶನದಲ್ಲಿ ತಮ್ಮ ಪ್ರೀತಿಯ ಪತ್ನಿ ಸ್ಪಂದನ ಅವರ ಅಗಲಿಕೆ ನಂತರ ಕಾಣಿಸಿಕೊಂಡಿದ್ದಾರೆ ರಾಘು.

ಸ್ಪಂದನ ಅವರಿಲ್ಲದ ಜೀವನ ಹೇಗಿದೆ ಎಂಬುದಾಗಿ ಪ್ರಶ್ನೆ ಮಾಡಲಾಗಿದ್ದು, ನಿಜಕ್ಕೂ ನಾನು ಹಾಗೆ ಅಂದುಕೊಂಡೆ ಇಲ್ಲ. ನಾನು ಎಲ್ಲರ ಮುಂದೆ ನಟನೆ ಮಾಡಲು ನಿಜಕ್ಕೂ ಸಾಧ್ಯವಿಲ್ಲ. ಹಾಗಾಗಿ ಒಬ್ಬನೇ ಕುಳಿತಾಗ ತುಂಬಾ ಅಂದ್ರೆ ತುಂಬಾ ಅಳುತ್ತೇನೆ, ಅದೇ ನನ್ನ ಶಕ್ತಿ ಅನ್ಸುತ್ತೆ. ನನ್ನ ತಾಯಿಗೆ ನನ್ನ ಹೆಂಡತಿಯೆ ತಾಯಿ ಆಗಿದ್ದಳು. ನನ್ನ ಅವರು ಹೆಚ್ಚು ಕರೆಯುತ್ತಲೆ ಇರಲಿಲ್ಲ. ಸ್ಪಂದನ ಒಬ್ಬಳು ಇದ್ರೆ ಸಾಕು ಎನ್ನುತ್ತಿದ್ದರು. ಅಷ್ಟು ಕೇರ್ ಮಾಡುತ್ತಿದ್ದಳು ನನ್ನ ತಂದೆ ತಾಯಿಯನ್ನು. ನಿಜಕ್ಕೂ ಈಗ ಆಕೆಯ ನಗು ಎಲ್ಲರನ್ನ ಕಾಡುತ್ತಿದೆ. ಸ್ಪಂದನೆಗೆ ಮೂಗಿನ ಮೇಲೆಯೇ ಕೋಪ ಇರುತ್ತಿತ್ತು. ಚಿತ್ರದಲ್ಲಿ ಸಿಗರೇಟ್ ಹೊಡೆಯುವ ದೃಶ್ಯಗಳಿಗೆ ಅದರಿಂದ ಆಕೆ ಹೆದರುತ್ತಿದ್ದಳು, ಅಭ್ಯಾಸ ಮಾಡಿಕೊಳ್ಳಬೇಡಿ ಎಂದು ಸದಾ ನನ್ನನ್ನ ತಿದ್ದುತಿದ್ದಳು. ನಾನು ಕೂಡ ಎಂದಿಗೂ ಸಿಗರೇಟ್ ಹೊಡೆದಿಲ್ಲ. ಅದು ನನಗೆ ಅಭ್ಯಾಸ ಆಗಿಲ್ಲ. ಹೆಚ್ಚು ಕಾಫಿ ಕುಡಿಯುತ್ತೆನೆ ಎಂದರು. ಆದರೆ ಸಿನಿಮಾದಲ್ಲಿ ಹೊಡೆಯಬೇಕಾಯಿತು ಎಂದು ಮಾದ್ಯಮ ಮುಂದೆ ಹೇಳಿಕೊಂಡರು.  

ಆಕೆ ಇಲ್ಲದ ಜೀವನವನ್ನು ನಾವು ನೆನೆಸಿಕೊಳ್ಳಲು ಕೂಡ ಅಸಾಧ್ಯ, ಆಕೆಯ ನೆನಪಿನಲ್ಲಿ ಜೀವನ ಸಾಗಿಸಬೇಕು. ಪ್ರತಿದಿನ ಅವಳು ನಮ್ಮ ಜೊತೆಗೆ ಇದ್ದಾಳೆ ಎಂಬಂತೆ ಪ್ರತಿ ಹಂತದಲ್ಲೂ ನಾನು ಆಕೆಯನ್ನು ನೆನೆದುಕೊಂಡೆ ಪ್ರತಿದಿನ ಆರಂಭ ಮಾಡುತ್ತಿದ್ದೇನೆ. ನಿಜವಾಗಿ ತುಂಬಾ ಕಷ್ಟ ಆಗುತ್ತದೆ, ಹಾಗೆ ಮಾತು ಮುಂದುವರೆಸಿ ಕದ್ದ ಚಿತ್ರದ ಬಗ್ಗೆ ಮಾತನಾಡಿದ ವಿಜಯ ಅವರು ಈ ಕದ್ದ ಚಿತ್ರದ ಬಗ್ಗೆ ಸ್ಪಂದನ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಳು. ಈ ತಂಡದ ಮೇಲೆ ಹೆಚ್ಚು ಒಲವು ಆಕೆಗೆ ಇತ್ತು. ನಿಜ ಈಗಲೂ ನಾನು ಒಬ್ಬನೇ ಇರುವಾಗ ಅಳುತ್ತೇನೆ. ನನ್ನ ಮಗನ ಮುಂದೆ ನನಗೆ ಅಳಲು ಆಗುವುದಿಲ್ಲ. ಭಯ ಆಗುತ್ತದೆ ಎಂದರು. ಹಾಗೆ ಸ್ಪಂದನ ಬಗ್ಗೆ ಇನ್ನೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುವ ವಿಜಯ ರಾಘವೇಂದ್ರ ಅವರು ಯಾವೆಲ್ಲ ವಿಚಾರಗಳನ್ನು ಇಂದು ಪತ್ನಿ ತೀರಿದ ಬಹಳಷ್ಟು ದಿನಗಳ ಬಳಿಕ ಹೇಳಿದ ವಿಚಾರಗಳೆಲ್ಲವೂ ನಿಜಕ್ಕೂ ಕಣ್ಣೀರು ತರಿಸುವಂತಿವೆ.. ಒಮ್ಮೆ ನೀವು ಕೂಡ ಈ ವಿಡಿಯೋ ನೋಡಿ..ನಿಮ್ಮ ಅನಿಸಕೆಗಳ ತಿಳಿಸಿ...

VIDEO CREDIT : TV 9 KANNADA