ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ರಾಘವೇಂದ್ರ ! ಎಲ್ಲರೂ ಶಾಕ್

ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ರಾಘವೇಂದ್ರ ! ಎಲ್ಲರೂ ಶಾಕ್

ರಾಘವೇಂದ್ರ ಹಾಗೂ ಸ್ಪಂದನ ಅವರು ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ, ಪತಿಯೇ ಪರ ದೈವ ಎಂಬಂತೆ ಸ್ಪಂದನ ಅವರು ವಿಜಯ್ ಅವರನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದರು. ಹಾಗೆ ಪೂಜೆ ಕೂಡ ಮಾಡುತ್ತಿದ್ದರು...ಪ್ರತಿದಿನ ನನ್ನ ರಾಘು ಅವರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಕ್ಷಣಕ್ಷಣಕ್ಕೂ ಕೂಡ ಅವರ ಜೊತೆಗೆ ಫೋನಿನಲ್ಲಿ ಮಾತನಾಡುತ್ತಿದ್ದಂತವರು ಸ್ಪಂದನ..ಆದ್ರೆ ವಿಧಿ ಇವರ ಬಾಳಲ್ಲಿ ತುಂಬಾ ಕೆಟ್ಟ ನಿರ್ಧಾರ ಮಾಡಿತು. ಹೌದು, ವಿಜಯ್ ಅವರು ಕೂಡ ಅಷ್ಟೇ ಸ್ಪಂದನ ಅವರನ್ನು ತುಂಬಾನೇ ಇಷ್ಟಪಟ್ಟು ಮದುವೆಯಾದಂತಹ ನಟ. ಇನ್ನು ಹೇಳಬೇಕು ಈ ಜೋಡಿ ಬಗ್ಗೆ ಅಂದರೆ, ಸಾಕಷ್ಟು ಜನರು ಈ ಜೋಡಿ ನೋಡಿ ದಾಂಪತ್ಯ ಜೀವನ ಮಾಡಿದರೆ ಇವರಂತೆಯೇ ಮಾಡಬೇಕು ಎನ್ನುತ್ತಿದ್ದರು.   

ಇನ್ನೊಬ್ಬರಿಗೆ ಆದರ್ಶ ಆಗುವಂತಹ ಈ ಜೋಡಿ ಇವರದು. ನಿಜಕ್ಕೂ ತುಂಬಾನೇ ಮುದ್ದಾಗಿದೆ ಇವರ ಜೋಡಿ ಎಂದು ಕೆಲವರು ಹೇಳುತ್ತಿದ್ದರು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ವಿಜಯ್ ಅವರ ಬದುಕಿನಲ್ಲಿ ಈಗ ಬರಸಿಡಲು ಬಡಿದಂತಾಗಿದೆ. ಇದೀಗ ಕತ್ತಲೆ ಆವರಿಸಿ ಬಿಟ್ಟಿತು ಎಂದು ಹೇಳಬಹುದು. ಹೌದು ಮುದ್ದಾದ ಮಗ ಶೌರ್ಯ ಅತಿ ಸಣ್ಣ ವಯಸ್ಸಿಗೆ ತನ್ನ ತಾಯಿಯನ್ನು ಕಳೆದುಕೊಂಡನಲ್ಲ ಎಂದು ಒಂದು ಕಡೆ ವಿಜಯ್ ಅವರಿಗೆ ನೋವಾದರೆ, ತಾವು ಇಷ್ಟಪಟ್ಟ ಹಾಗೂ ಒಳ್ಳೆ ಮನಸ್ಸಿನ ಹೆಂಡತಿಯ ಕಳೆದುಕೊಂಡನಲ್ಲ ಎಂದು ರಾಘು ಕೂಡ ಕಣ್ಣೀರು ಸುರಿಸುತ್ತಿದ್ದಾರೆ.

ಸಂದರ್ಶನದಲ್ಲಿ ಹೆಂಡತಿ ಬಗ್ಗೆ ಇತ್ತೀಚಿಗೆ ತಮಗೆ ಮತ್ತು ಅವರ ಹೆಂಡತಿ ಸ್ಪಂದನ ಅವರ ಕುರಿತಾದ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಡೆ ವಿಜಯ ಅವರಿಗೆ ಸ್ಪಂದನ ಅವರಿಲ್ಲದೆ ನಿಮಗೆ ಹೆಚ್ಚು ನೋವು ಆಗಬಹುದು. ಆ ನೋವುವಿನಿಂದ ನೀವೂ ಹೊರ ಬರಬೇಕು ಎಂದರೆ ನೀವು ಏಕೆ ಇನ್ನೊಂದು ಮದುವೆ ಆಗಬಾರದು ಎನ್ನುವ ಮಾತುಗಳು ಕೂಡ ಕೆಲವರಿಂದ ಕೇಳಿ ಬಂದಿವೆ. ಅದರ ಬೆನ್ನಲ್ಲೇ ವಿಜಯ್ ಅವರು ತಮ್ಮ ಇನ್ಸ್ತಗ್ರಂ ಪೇಜ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನನಗೆ ಸ್ಪಂದನ ಅವರೇ ಎಲ್ಲಾ, ಅವರನ್ನು ಬಿಟ್ಟು ಬೇರೆ ಯಾರು ಕೂಡ ಆ ಜಾಗಕ್ಕೆ ಬರಲು ಸಾಧ್ಯವಿಲ್ಲ, ನನ್ನ ಜೀವ, ಜೀವನ ಸ್ಪಂದನ ಅವರೇ ಇಂದಿಗೂ, ಎಂದಿಗೂ, ಮುಂದೆಯೂ ಕೂಡ ಎಂದು ಹೇಳಿ ನನ್ನ ಮಗನ ನೋಡಿಕೊಂಡು ಅವನನ್ನ ಚೆನ್ನಾಗಿ ಬೆಳೆಸುತ್ತಾ ಜೀವನ ಮಾಡುತ್ತೇನೆ ಎನ್ನುವ ನಿಟ್ಟಿನಲ್ಲಿ ಹೇಳಿದ್ದು, ಇನ್ನೊಂದು ಮದುವೆ ನಿರ್ಧಾರವನ್ನು ವಿರೋಧಿಸಿದ ವಿಜಯ ಅವರ ಪೋಸ್ಟ್ ಈಗ ವೈರಲಾಗುತ್ತಿದೆ..ಇಲ್ಲಿದೆ ನೋಡಿ ವಿಡಿಯೋ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ ಮತ್ತು ನೀವು ಕೂಡ ರಾಘು ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ, ಧನ್ಯವಾದಗಳು.