ಮೂರು ವಾರಗಳ ಬಳಿಕ ಸ್ಪಂದನ ಸೂಟ್ಕೇಸ್ ನೋಡಿದ ರಾಘು..! ಅಸಲಿಗೆ ಅದರಲ್ಲಿ ಅಂಥದ್ದೇನಿತ್ತು

ಮೂರು ವಾರಗಳ ಬಳಿಕ ಸ್ಪಂದನ ಸೂಟ್ಕೇಸ್ ನೋಡಿದ ರಾಘು..! ಅಸಲಿಗೆ ಅದರಲ್ಲಿ ಅಂಥದ್ದೇನಿತ್ತು

ಕನ್ನಡ ಚಲನಚಿತ್ರರಂಗದ ಖ್ಯಾತ ನಟರ ಕುಟುಂಬದಲ್ಲಿ ವಿಜಯ ರಾಘವೇಂದ್ರ ಅವರ ಕುಟುಂಬ ಕೂಡ ಬರುತ್ತದೆ. ಹೌದು ವಿಜಯ್ ರಾಘವೇಂದ್ರ ಅವರ ತಂದೆ ದೊಡ್ಡ ನಿರ್ಮಾಪಕ, ಮತ್ತು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿ ಗಮನ ಸೆಳೆದಿರುವ ಕಲಾವಿದರು. ತಂದೆ ಚಿನ್ನೆ ಗೌಡ ಅವರು ಮಕ್ಕಳನ್ನು ಸಿನಿಮಾಗೆ ತರಬೇಕು ಎಂದು ಆರಂಭದಲ್ಲಿ ತುಂಬಾ ಕಷ್ಟಪಟ್ಟಿದ್ದು ಉಂಟು. ಆದರೆ ನಟ ವಿಜಯ ರಾಘವೇಂದ್ರ ಮತ್ತು ಶ್ರೀ ಮುರಳಿ ಅವರ ಸಿನಿಮಾಗಳು ಅವರು ಅಂದುಕೊಂಡಂತೆ ಅಷ್ಟು ಸುಲಭವಾಗಿ ಹೆಚ್ಚು ಜನರಿಗೆ ಆರಂಭದಲ್ಲಿ ಮುಟ್ಟಲಿಲ್ಲ.

ಶ್ರೀಮುರಳಿಯವರು ಬಹಳಷ್ಟು ವರ್ಷಗಳ ಬಳಿಕ ಉಗ್ರಂ ಮೂಲಕ ಮತ್ತೆ ಮರಳಿ ಟ್ರಾಕ್ ಗೆ ಬಂದರು. ಇತ್ತೀಚಿಗೆ ಹೆಚ್ಚು ಅಭಿಮಾನಿ ಗಳಿಸಿಕೊಂಡಿದ್ದರು. ನಟ ವಿಜಯ ರಾಘವೇಂದ್ರ ಕೂಡ ಹೆಚ್ಚು ಸಿನಿಮಾಗಳಲ್ಲಿ ಯಶಸ್ಸನ್ನು ಕಂಡಿರಲಿಲ್ಲ. ಅಂತಹ ಸಂದರ್ಭದಲ್ಲಿಯೆ ಅವರ ಪತ್ನಿ ಸ್ಪಂದನ ಬೆನ್ನೆಲುಬಾಗಿ ಪ್ರತಿ ಹಂತದಲ್ಲೂ ಧೈರ್ಯ ತುಂಬಿ ಜೊತೆಗಿದ್ದರು. ಆದ್ರೆ ಎಲ್ಲಾ ಸರಿ ಹೋಗುತ್ತೆ ಎಂದು ದೈರ್ಯ ತುಂಬುತ್ತಾ ಪ್ರೇರೇಪಿಸುತ್ತ ಬರುವ ವೇಳೆಯೆ ಅವರ ಅಗಲಿಕೆ ಆಗಿದೆ. ಇದರಿಂದ ಆ ಕುಟುಂಬದ ಸದಸ್ಯರಿಗೆ ಹಾಗೂ ರಾಘು ಅವರಿಗೆ ಹೆಚ್ಚು  ನೋವಾಗಿದೆ. ಪ್ರೀತಿಯ ಮಡದಿಯನ್ನು ಕಳೆದುಕೊಂಡು ರಾಘು ಅವರು ಅಕ್ಷರಶಃ ನಮ್ಮ ಏನು ಆಗುತ್ತಿದೆ, ನಮ್ಮ ಜೀವನದಲ್ಲಿ ಈ ರೀತಿ ಯಾಕೆ ಆಯ್ತು ಎಂದು ತುಂಬಾ ನೋವಿಗೆ ಒಳಗಾಗಿದ್ದಾರೆ.

ಹೌದು ಸ್ಪಂದನ ಅವರು ಎಲ್ಲರನ್ನು ಬಿಟ್ಟು ಹೋಗಿ 20 ದಿನಗಳು ಮುಗಿದಿದ್ದು ಎಲ್ಲರಿಗೂ ಈ ವಿಚಾರ ಗೊತ್ತು. ಅವರ ಸೂಟ್ಕೇಸ್ ವಿಚಾರವೊಂದು ಕೇಳಿ ಬಂದಿದೆ. ಹೌದು ಸ್ಪಂದನ ಅವರು ಬ್ಯಾಂಕಾಕ್ ಗೆ ಹೋಗುವಾಗ ಸುಟ್ಕೆಸ್ ತೆಗೆದುಕೊಂಡು ಹೋಗಿದ್ದರಂತೆ. ಸೂಟ್ಕೇಸ್ ಒಳಗೆ ಇರುವ ವಸ್ತುಗಳನ್ನು ಈಗ ನೋಡಿದ ರಾಘು ಕಣ್ಣೀರು ಹಾಕಿದ್ದಾರೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ..ಹೌದು ಪ್ರೀತಿಯ ಮಗನಿಗಾಗಿ ಸ್ಪಂದನ ಅವರು ಬ್ರಾಂಡೆಡ್ ಶೂಗಳ ಕೊಂಡಿದ್ದರಂತೆ. ಜೊತೆಗೆ ಪ್ರೀತಿಯ ಪತಿಗೆ ಬೆಲೆಬಾಳುವ ವಾಚ್ ಅನ್ನು ಕೂಡ ಖರೀದಿಸಿದ್ದರಂತೆ, ಇದನ್ನೆಲ್ಲಾ ನೋಡಿ ರಾಘು ಇದೀಗ ಮತ್ತೆ ನೋವಿಗೆ ಒಳಗಾಗಿದ್ದಾರೆ. ಅಷ್ಟು ಪ್ರೀತಿಯನ್ನ ನೀಡುತ್ತಿದ್ದ ನನ್ನ ಹೆಂಡತಿ ಧಿಡೀರ್ ನಮ್ಮಿಂದ ಯಾಕೆ ದೂರವಾದಳು ಎಂದು ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ನೋಡಿ ವಿಡಿಯೋ. ಹೌದು ಈ ವಿಡಿಯೋ ನೋಡಿದ ಬಳಿಕ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..