ನನ್ನ ಕನಸಿನಲ್ಲಿ ಬಂದಿದ್ದಳು ಸ್ಪಂದನ..! ನಟ ರಾಘು ನೋವಿನಲ್ಲೇ ಆ ಕನಸಿನ ಬಗ್ಗೆ ಹೇಳಿದ್ದಿಷ್ಟು

ನನ್ನ ಕನಸಿನಲ್ಲಿ ಬಂದಿದ್ದಳು ಸ್ಪಂದನ..! ನಟ ರಾಘು ನೋವಿನಲ್ಲೇ ಆ ಕನಸಿನ ಬಗ್ಗೆ ಹೇಳಿದ್ದಿಷ್ಟು

ಹೌದು ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಬ್ಯಾಂಕಾಕ್ ಗೆ ತೆರಳಿದ ವೇಳೆಯೇ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಇದರಿಂದ ಅವರ ಕುಟುಂಬ ಇನ್ನೂ ಹೊರಬಂದಿಲ್ಲ. ಈಗಲೂ ಸಹ ಹೆಚ್ಚು ನೋವಿನಲ್ಲಿಯೇ ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದೊದಗಿದೆ. ದೇವರನ್ನು ದೂಷಿಸುವುದಕ್ಕೆ ಆಗುವುದಿಲ್ಲ. ಅದರ ಬದಲು ನಮಗೆ ಆ ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡು, ಮುಂದೆ ಜೀವನವನ್ನು ಸಾಗಿಸುವುದಕ್ಕೆ ಬಲವನ್ನ ಕೊಡು ದೇವರೇ ಎಂದು ಕೇಳಿಕೊಳ್ಳಬಹುದು ಅಷ್ಟೇ ಎಂದು ನಟ ವಿಜಯ ರಾಘವೇಂದ್ರ ಅವರು ನಿನ್ನೆ ಮಾಧ್ಯಮದ ಎದುರು ಹೆಂಡತಿ ನೆನೆದು ಕೆಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.  

ವಿಜಯ್ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರು ಅಗಲಿ 20 ರಿಂದ 30 ದಿನಗಳು ಕಳೆಯುತ್ತಾ ಬಂದಿವೆ. ಹೀಗಿರುವಾಗ ಮೊಟ್ಟಮೊದಲಬಾರಿ ವಿಜಯ ರಾಘವೇಂದ್ರ ಅವರು ನಿನ್ನೆಯಷ್ಟೇ ಮಾಧ್ಯಮದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು. ಹಾಗೆ ಅವರ ಮತ್ತು ಸ್ಪಂದನ ಅವರ ನಡುವಿನ ಕೌಟುಂಬಿಕ ಜೀವನ ಹೇಗಿತ್ತು ಈಗ ಸ್ಪಂದನರನ್ನ ಹೇಗೆ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬುದಾಗಿಯೂ ಸಹ ಹೇಳಿದರು. ಹೌದು ಸ್ಪಂದನ ಅವರು ಮೊನ್ನೆ ಮೊನ್ನೆಯಷ್ಟೇ ವಿಜಯ ರಾಘವೇಂದ್ರ ಅವರ ಕನಸಿಗೆ ಬಂದಿದ್ದರಂತೆ. ಅದನ್ನು ರಾಘು ಅವರು ನೋವಿನಲ್ಲೇ ತಿಳಿಸಿದ್ದಾರೆ. ಮೊನ್ನೆ ಬೆಳಗಿನ ಜಾವ ನನ್ನ ಹೆಂಡತಿ ಸ್ಪಂದನ ನನ್ನ ಕನಸಿಗೆ ಬಂದಿದ್ದಳು, ನನಗೆ ಫೋನ್ ಮಾಡಿ ಶೌರ್ಯ ಹೋಂ ವರ್ಕ್ ಮಾಡಿದ್ದಾನೆ ಎಂಬುದಾಗಿ ಪ್ರಶ್ನೆ ಮಾಡಿದಳು, ಇಲ್ಲ ಎಂದರೆ ನನ್ನನ್ನು ಬಯ್ಯುತ್ತಾಳೆ, ಹೌದು ಎಂದರೆ ಶೌರ್ಯ ಬೈಸಿಕೊಳ್ತಾನೆ ಎಂಬುದಾಗಿ ತಿಳಿದು ಒಂದು ನಿಮಿಷ ಇರು ಚಿನ್ನ ಎಂದು ಫೋನ್ ಕಟ್ ಮಾಡಿ ಶೌರ್ಯನನ್ನ ವಿಚಾರಿಸಿದೆ..

ಯಾವುದಾದರೂ ಹೋಂ ವರ್ಕ್ ಇದೆಯೇನೋ  ಎಂಬುದಾಗಿ ಕೇಳಿದಾಗ, ಅವನು ಇಲ್ಲ ಎಂದನು. ಅದನ್ನ ನಾನು ಯಾರಿಗೆ ಉತ್ತರಿಸಲಿ ಎಂದು ಹೆಂಡತಿ ಸ್ಪಂದನ ಅವರ ನೋವಿನಲ್ಲೇ ತಮ್ಮ ಮಡದಿಯ ಕನಸಿನ ವಿಚಾರವನ್ನು ವಿಜಯ ರಾಘವೇಂದ್ರ ಅವರು ಬಿಚ್ಚಿಟ್ಟರು. ಜೊತೆಗೆ ಮಗನನ್ನು ಬಾಸ್ಕೆಟ್ ಬಾಲ್ ಪ್ಲೇಯರ್ ಮಾಡಬೇಕು, ಸಿನಿಮಾ ಕುರಿತಾಗಿ ಅವನಿಗೆ ನಟನೆ ಕಲಿಸಬೇಕು ಎನ್ನುವ ಆಶಯವನ್ನು ಆಕೆ ಇಟ್ಟುಕೊಂಡಿದ್ದಳು ಎಂದು ನೋವ ವ್ಯಕ್ತಪಡಿಸಿದ್ದಾರೆ. ವಿಜಯ್ ರಾಘವೇಂದ್ರ ಅವರ ಕನಸಿನಲ್ಲಿ ಬಂದು ಸ್ಪಂದನ ಅವರು ಕೇಳಿದ ವಿಚಾರವನ್ನು ಬಿಚ್ಚಿಟ್ಟ ವಿಜಯ ರಾಘವೇಂದ್ರ ಅವರ ಈ ವಿಡಿಯೋ ನೋಡಿ. ಮತ್ತು ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿ, ಧನ್ಯವಾದಗಳು..