ರಜನಿ ಕಾಂತ್ ಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್! ಕಾರಣ ಏನೂ ಗೊತ್ತಾ?

ರಜನಿ ಕಾಂತ್ ಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್! ಕಾರಣ ಏನೂ ಗೊತ್ತಾ?

ಕಳೆದ ಒಂದು ವಾರದಿಂದ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಕಾವೇರಿ ಸಮರ. ಇನ್ನೂ ಈ ಯುದ್ದ ಈಗಿನದ್ದು ಏನಲ್ಲ. ಕಾವೇರಿ ಅಣೆಕಟ್ಟು ನಿರ್ಮಾಣ ಆದ ವರ್ಷದಿಂದಲೂ ಕೂಡ ಈ ಸಮರ ನಡೆಯತ್ತಲೆ ಬಂದಿದೆ. ನಮ್ಮ ಕರ್ನಾಟಕದಲ್ಲಿ ತುಂಬಿ ಹರಿಯುವ ಕಾವೇರಿ ತನ್ನ ಅಣೆಕಟ್ಟು ತುಂಬಿದ ಸಂಧರ್ಭದಲ್ಲಿ ನಮ್ಮ ಪಕ್ಕದ ರಾಜ್ಯಕ್ಕೆ ಹರಿಸುವುದಾಗಿ ಒಪ್ಪಂದ ಆಗಿತ್ತು. ಆದ್ರೆ ಈಗ ನಮ್ಮಲ್ಲಿ ನೀರು ಇಲ್ಲವಾದರು ತಮಿಳು ನಾಡಿಗೆ ನೀರು ನೀಡುವುದಾಗಿ ಪ್ರತಿ ವರ್ಷ ಜಗಳಗಳು ಸರ್ವೇ ಸಾಮಾನ್ಯ ಆಗಿದೆ. ಆದ್ರೆ ಈ ಬಾರಿಯ ಅಣೆಕಟ್ಟು ಕನಿಷ್ಠ ರೀತಿಯೂ ಕೂಡ ತುಂಬಿಲ್ಲ ಹಾಗಾಗಿ ನಮ್ಮ ಕರ್ನಾಟಕದ ಸಾಕಷ್ಟು ಜಿಲ್ಲೆಯಲ್ಲಿ ಬರ ಕೊಡ ಸಂಭವ ಆಗಿದೆ. ಹೀಗಿರುವ ಸಮಯದಲ್ಲಿ ತಮಿಳುನಾಡಿನ ಜನ ತಮಗೂ ನೀರು ಬಿಡಬೇಕೆಂದು ಪ್ರತಿಭಟನೆ ಶುರು ಮಾಡಿದ್ದಾರೆ. ಹಾಗಾಗಿ ನಮ್ಮ ಕರ್ನಾಟಕದ ಸಾಕಷ್ಟು ಸಂಘಟನೆಗಳು ಕೊಡ ಪ್ರತಿಭಟನೆಗಳಿಗೆ ಮುಂದಾಗಿದೆ.

ಇನ್ನೂ ಕಳೆದ ಭಾನುವಾರ ಮಂಡ್ಯ ಜಿಲ್ಲೆಗೆ ಬಂದ್ ಗೆ ಕರೆ ನೀಡಿತ್ತು. ಈ ಪ್ರಕಾರ ಸರ್ಕಾರಿ ಬಸ್ ಒಳಗೊಂಡು ಎಲ್ಲವು ಮಂಡ್ಯ ಜಿಲ್ಲೆಯಲ್ಲಿ ಬಂದ್ ಆಗಿತ್ತು. ಇನ್ನೂ ಇದೆ ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಿತ್ತು. ಹಾಗೆಯೇ ಸಾಕಷ್ಟು ಅಂಗಡಿ ಮುಂಗಟ್ಟು ಹಾಗೂ ಕಚೇರಿಗಳು ಕೊಡ ಬಂದ್ ಆಗಿ ಯಶಸ್ವಿಯಾಗಿತ್ತು. ಇದೀಗ ನಾಳೆ ಇಡೀ ಕರ್ನಾಟಕ ಬಂದ್ ಕರೆ ನೀಡಿದೆ. ಇನ್ನೂ ಮಾದ್ಯಮಗಳ ವರದಿಗಳ ಪ್ರಕಾರ 2000ಸಾವಿರಕ್ಕೂ ಹೆಚ್ಚು ಸಂಘಟನೆಗಳು ಈ ಕರ್ನಾಟಕ ಬಂದ್ ಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಇನ್ನೂ ಈ ಶುಕ್ರವಾರ ಬಂದ್ ಆಗಿ ಈ ಬಂದ್ ಗೆ ನಮ್ಮ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ. ಇದೇ ಸಮಯದಲ್ಲಿ ಬಂದ್ ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ಅವರು ನಮ್ಮ ಕರ್ನಾಟಕದ ಕಲಾವಿದ ತಮಿಳು ಚಿತ್ರ ರಂಗದಲ್ಲಿ ಉನ್ನತ ಸ್ಥಾನದಲ್ಲಿ ಇರುವ ನಟನಿಗೆ ಎಚ್ಚರಿಕೆ ನೀಡಿದ್ದಾರೆ.  

ಹೌದು ಈ ಶುಕ್ರವಾರ ಬರೋಬ್ಬರಿ 2000 ಸಾವಿರ ಸಂಘಟನೆಗಳ ಬೆಂಬಲ ಪಡೆದುಕೊಂಡು ಹೋರಾಟ ಮಾಡುತ್ತಿರುವ ವಾಟಾಳ್ ನಾಗರಾಜ್ ಅವರು ಇದೀಗ ರಜನಿ ಕಾಂತ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ವಾಟಾಳ್ ನಾಗರಾಜ್ ಅವರು ಹೇಳಿರುವ ಪ್ರಕಾರ ರಜನಿ ಕಾಂತ್ ಅವರು ಮೂಲತಃ ಕರ್ನಾಟಕದವರು ಆದರೆ ತಮಿಳು ಚಿತ್ರರಂಗದಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ ನಟ. ಹಾಗಾಗಿ ನೀವು ಕೊಡ ನಿಮ್ಮ ಧ್ವನಿ ಏರಿಸಬೇಕು. ನೀವು ಯಾರ ಪರ ಬೆಂಬಲ ನೀಡುತ್ತೀರಿ ಎಂದು ತಿಳಿಸಬೇಕು. ನೀವು ನಮ್ಮ ನೀರು ಕುಡಿದು ಬೆಳೆದವರು ಹೀಗಿರುವಾಗ ತಮಿಳು ನಾಡಿಗೆ ಬೆಂಬಲ ನೀಡಿದೆ ಆಗಿದ್ದಲ್ಲಿ ಆಗ ನೀವು ನಮ್ಮ ಕರ್ನಾಟಕದವರು ಎನ್ನುವ ಹಕ್ಕನ್ನು ಕಳೆದುಕೊಳ್ಳುತ್ತೀರಿ. ಆ ನಂತರ ನಿಮ್ಮ ಸಿನಿಮಾಗಳು ಕೂಡ ನಮ್ಮ ಕರ್ನಾಟಕದಲ್ಲಿ ನಿಷೇಧ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ರಜನಿ ಕಾಂತ್ ಅವರು ವಾಟಾಳ್ ನಾಗರಾಜ್ ಅವರ ಹೇಳಿಕೆಗೆ ಯಾವ ಪ್ರತಿಕ್ರಿಯೆ ನೀಡಿಲ್ಲ ಮುಂದಿನ ದಿನದಲ್ಲಿ ರಜನಿ ಕಾಂತ್ ಅವರು ಏನೂ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.