ವರ್ತೂರು ಸಂತೋಷ್ ರೈತನೇ ಅಲ್ಲ..; ಅವ್ನು ನನ್ನ ಮಗಳ ಜೀವನ ಹಾಳು ಮಾಡಿದ ಎಂದು ಕಣ್ಣೀರು ಸುರಿಸಿದ ವಿಡಿಯೋ ವೈರಲ್

ವರ್ತೂರು ಸಂತೋಷ್ ರೈತನೇ ಅಲ್ಲ..; ಅವ್ನು ನನ್ನ ಮಗಳ ಜೀವನ ಹಾಳು ಮಾಡಿದ ಎಂದು ಕಣ್ಣೀರು ಸುರಿಸಿದ ವಿಡಿಯೋ ವೈರಲ್

ಕನ್ನಡದ ಬಿಗ್ ಬಾಸ್ ಸೀಸನ್ 10 ದಿನದಿಂದ ದಿನಕ್ಕೆ ತುಂಬಾನೇ ಹೊಸ ಹೊಸ ಟಾಪಿಕ್ ಗಳಿಗೆ ಸಕತ್ ಸುದ್ದಿ ಆಗುತ್ತಿದೆ. ಆರಂಭದಲ್ಲಿ ವರ್ತೂರ್ ಸಂತೋಷ ಅವರು ಅಷ್ಟಾಗಿ ಜನಗಳಿಗೆ ಹತ್ತಿರ ಆಗಿರಲಿಲ್ಲ. ಆದರೆ ಅವರ ಅಭಿಮಾನಿಗಳು ಹೆಚ್ಚಾಗಿಯೇ ಇದ್ದಾರೆ..ಈ ಐದನೇ ವಾರದಲ್ಲಿ ಟಾಕ್ ಆಫ್ ದ ವೀಕ್ ಎಂಬಂತೆ ವರ್ತೂರು ಸಂತೋಷ್ ಅವರು ತುಂಬಾನೇ ಸುದ್ದಿ ಆಗುತ್ತಿದ್ದಾರೆ.. ಹುಲಿ ಉಗುರು ಧರಿಸಿದ ವಿಚಾರಕ್ಕಾಗಿ ಬಿಗ್ ಬಾಸ್ ಮನೆಯಿಂದ ಸೀದಾ ಜೈಲಿಗೆ ಹೋಗಿ ಒಂದು ವಾರ ಅಲ್ಲಿ ಇದ್ದು ಮತ್ತೆ ಬಿಗ್ಬಾಸ್ ಮನೆಗೆ ವರ್ತೂರು ಸಂತೋಷ್ ಸೇರಿದರು. 

ಇದಾದ ಬಳಿಕ ಇತ್ತೀಚಿಗೆ ಅವರ ಮನಸ್ಸಿನ ಮೇಲೆ ಆ ವಿಚಾರ ತುಂಬಾನೇ ಪರಿಣಾಮ ಬೀರಿತ್ತು. ಅದರಂತೆ ಅವರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿದ್ದು, ನಾನು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು ಎಂಬಂತೆ ಹೇಳಿದ್ದು ಕಳೆದ ಎರಡು ಮೂರು ದಿನದಿಂದ  ನೀವು ಸಹ ಆ ದೃಶ್ಯಗಳ ನೋಡಿದ್ದೀರಿ. ಹೌದು ಅವರ ಮನವರಿಸಲು ಸುದೀಪ್ ಅವರು ಪ್ರಯತ್ನ ಪಟ್ಟರೂ ಹಾಗೆ ಇಡೀ ಬಿಗ್ ಬಾಸ್ ಮನೆ ಮಂದಿ ಪ್ರಯತ್ನಪಟ್ರು ಅವರು ಒಪ್ಪಲಿಲ್ಲ. ಬದಲಿಗೆ ಅವರ ತಾಯಿ ಬಂದ ಬಳಿಕ ಈಗ ಗೇಮ್ ಆಡೋಣ ಎಂದು ತುಂಬಾನೇ ಖುಷಿಯಾಗಿ ಎಲ್ಲ ನೋವನ್ನು ನಾನು ಇಲ್ಲಿ ತಡೆದು ಮತ್ತೆ ಆಟ ಆಡುತ್ತೇನೆ ಎಂದು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ವೈರಲಾಗುತ್ತಿದೆ ಗೆಳೆಯರೇ. ಹೌದು ಈ ವರ್ತೂರು ಸಂತೋಷ್ ಅವರಿಗೆ ಈಗಾಗಲೇ ಮದುವೆ ಆಗಿದೆ ಎನ್ನಲಾದ ಒಂದು ಸುದ್ದಿಯ ಫೋಟೋಸ್ ಬಾರಿ ವೈರಲ್ ಆಗುತ್ತಿವೆ..ಸೋಶಿಯಲ್ ಮೀಡಿಯಾದಲ್ಲಿ ಯೂಟ್ಯೂಬ್ ನಲ್ಲಿ ಕೆಲವರು ಇವರ ಮದುವೆ ಸುದ್ದಿಯನ್ನು ಹೆಚ್ಚಾಗಿ ಹಬ್ಬಿಸುತ್ತಿದ್ದಾರೆ. ಅದರ ಜೊತೆ ಮತ್ತೊಂದು ವಿಡಿಯೋ ಕಂಡು ಬಂದಿದೆ ಸ್ನೇಹಿತರೆ. ಇದರಲ್ಲಿ ಹುಡುಗಿಯ ತಂದೆ ಎನ್ನಲಾದ ಒಬ್ಬ ವ್ಯಕ್ತಿ ತನ್ನ ಮಗಳು ಎಂದು ಹೇಳಿಕೊಂಡು ತನ್ನ ಮಗಳ ಮತ್ತು ವರ್ತುರ್ ಸಂತೋಷ ಮದುವೆ ಫೋಟೋಗಳನ್ನು ತೋರಿಸುತ್ತಾ ಕಣ್ಣೀರು ಹಾಕುತ್ತಿದ್ದಾರೆ.

ಮದುವೆ ಮಾಡಿಕೊಂಡ ಮರುದಿನ ನನ್ನ ಮಗಳು ನನ್ನ ಹತ್ತಿರ ಬಂದು ನನ್ನನ್ನು ತೂಫಾನ್ ಮಾಡಿ ಅಪ್ಪ, ಅವರು ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಕಣ್ಣೀರು ಹಾಕಿದ್ದರಂತೆ. ಜೊತೆಗೆ ಅವನು ಒಬ್ಬ ರೈತನೇ ಅಲ್ಲ, ಅಪ್ಪನ ದುಡ್ಡಲ್ಲಿ ಶೋಕಿ ಮಾಡುವವನು, ಮಧ್ಯದ ವ್ಯಸನಿ, ಪತ್ನಿ ಪೀಡಕ, ಡ್ರಗ್ಸ್ ಸೇವಿಸುತ್ತಾನೆ ಹಾಗೆ ಹೀಗೆ ಎಂದು ಇನ್ನೂ ಕೆಲವು ಆರೋಪಗಳು ಕೆಲ ವಿಡಿಯೋ ಮೂಲಕ ಸಾಕಷ್ಟು ಹರಿದಾಡುತ್ತಿವೆ. ಅಸಲಿಗೆ ಹುಡುಗಿ ತಂದೆ ಎನ್ನಲಾದ ಈ ವ್ಯಕ್ತಿ ಸಂತೋಷ ಅವರ ಬಗ್ಗೆ ಇನ್ನೂ ಏನೆಲ್ಲಾ ಹೇಳಿದರು ಗೊತ್ತಾ..? ಈ ವಿಡಿಯೋ ನೋಡಿ..ಅಸಲಿಗೆ ಈ ವಿಡಿಯೋನ ಅಸಲಿಯತ್ತೇನು..?ಅವರನ್ನು ಇನ್ನಷ್ಟು ಕುಗ್ಗಿಸಲು ಮಾಡಿರುವ ಪ್ರಯತ್ನವಾ, ಅಥವಾ ಅವರು ಇವರು ಹೇಳುತ್ತಿರುವುದು ಎಲ್ಲವೂ ನಿಜವ..? ಅದಕ್ಕೆ ವರ್ತೂರು ಸಂತೋಷ್ ಅವರೇ ಉತ್ತರ ನೀಡಬೇಕು.. ಜೊತೆಗೆ ಸುದೀಪ್ ಅವರು ಕೂಡ ಈ ವಿಚಾರವಾಗಿ ಅಭಿಮಾನಿಗಳಿಗೆ ಈ ವೀಕೆಂಡ್ ಅಲ್ಲಿ ಕ್ಲಾರಿಟಿ ಕೊಟ್ಟರೆ ತುಂಬಾನೇ ಚೆನ್ನಾಗಿರುತ್ತೆ ಎಂದು ಇನ್ನೂ ಕೆಲವರು ವಿಡಿಯೋ ನೋಡಿದ ಮೇಲೆ ಕೇಳಿಕೊಳ್ಳುತ್ತಿದ್ದಾರೆ.. ಈ ವಿಡಿಯೋ ನೋಡಿ ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಧನ್ಯವಾದಗಳು..