ಬ್ರೇಕಿಂಗ್ ನ್ಯೂಸ್ : ಹುಟ್ಡಬ್ಬದ ದಿನವೇ ಗೆಳೆಯ ದರ್ಶನ್ ಬಗ್ಗೆ ರಿಯಾಕ್ಷನ್ ಕೊಟ್ಟ ಸುದೀಪ್..!

ಬ್ರೇಕಿಂಗ್ ನ್ಯೂಸ್ : ಹುಟ್ಡಬ್ಬದ ದಿನವೇ ಗೆಳೆಯ ದರ್ಶನ್ ಬಗ್ಗೆ ರಿಯಾಕ್ಷನ್ ಕೊಟ್ಟ ಸುದೀಪ್..!

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಇಂದು ಭರ್ಜರಿ ಆಗಿ ಅವರ ಅಭಿಮಾನಿಗಳ ಬಳಗದಲ್ಲಿ ಜರುಗುತಿದೆ. ಹೌದು, ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಐವತ್ತನೆ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು. ಸಂದರ್ಶನದಲ್ಲಿ ಮಾಧ್ಯಮದ ಜೊತೆ ಮಾತನಾಡುವಾಗ ನಟ ಕಿಚ್ಚ ಸುದೀಪ್ ಅವರಿಗೆ, ನಟ ದರ್ಶನ್ ಅವರ ಕುರಿತು ಕೆಲವೊಂದಿಷ್ಟು ಪ್ರಶ್ನೆಗಳನ್ನು ಮಾಡಲಾಯಿತು.. ದರ್ಶನ್ ಮತ್ತು ನೀವು ಆದಷ್ಟು ಬೇಗನೆ ಒಟ್ಟಿಗೆ ಕಾಣಬೇಕು ಒಂದಾಗಬೇಕು ಎಂಬುದು ಅಭಿಮಾನಿಗಳ ಆಸೆ ಅದಕ್ಕೆ ನೀವೇನು ಉತ್ತರ ಕೊಡುತ್ತೀರಿ ಎಂಬುದಾಗಿ ಕೇಳಿದಾಗ, ಸುದೀಪ್ ಅವರು ನನಗೆ ಸುಮಲತಾ ಅವರು ತುಂಬಾನೇ ಸ್ಪೆಷಲ್ ಲೇಡಿ. ಹಾಗಾಗಿ ಅವರ ಅರವತ್ತನೆ ಹುಟ್ಟುಹಬ್ಬ ಫಂಕ್ಷನ್ ಗೆ ಹೋಗಿದ್ದೆ. ಅದಕ್ಕೂ ಮುಂಚೆ ನಿಮ್ಮ ಹಾಗೂ ದರ್ಶನ್ ನಡುವಿನ ಮುನಿಸು ಹೋಗಿ ಒಂದಾಗಿದ್ದು ನನಗೆ ಖುಷಿ ಆಯ್ತು. ಸಿನಿಮಾದಲ್ಲಿ ಮಾತ್ರ ಸೋಲು ಗೆಲುವು ಇರಬೇಕು, ಇಂತಹ ವಿಷಯಗಳಲ್ಲಿ ಅಲ್ಲ ಎಂದರು. 

ಹಾಗೆ ಸುಮಲತಾ ಬರ್ತಡೇ ಕಾರ್ಯಕ್ರಮಕ್ಕೂ ಅಲ್ಲಿಗೆ  ಹೋಗುವ ಮುನ್ನವೇ ದರ್ಶನ್ ಸಹ ಆ ಕಾರ್ಯಕ್ರಮಕ್ಕೆ ಬರುತ್ತಿದ್ದಾನೆ ಎಂಬುದಾಗಿಯೂ ಮೊದಲೇ ಗೊತ್ತಿತ್ತು. ಆ ಒಂದು ವೇದಿಕೆ ಮೇಲೆ ಕಾಣಿಸಿಕೊಂಡರೆ ಇಬ್ಬರು ಒಂದಾಗುತ್ತಾರ ಎಂಬುದಾಗಿ ನೀವು ಕೇಳಿದರೆ ನನ್ನ ಉತ್ತರ ಅವರಲ್ಲಿಯೂ ಕೆಲವು ಪ್ರಶ್ನೆಗಳು ಇರುತ್ತವೆ, ನನ್ನಲ್ಲಿಯೂ ಕೆಲವು ಪ್ರಶ್ನೆಗಳು ಇವೆ, ಅವು ಎಲ್ಲಾ ಬಗೆ ಹರಿಯಬೇಕು, ಆನಂತರ ಒಂದಾಗುವ ವಿಚಾರ ಎನ್ನುವ ನಿಟ್ಟಿನಲ್ಲಿ ಮಾತನಾಡಿದರು ಸುದೀಪ್.   

ಅಭಿಮಾನಿಗಳು ನಿಮ್ಮನ್ನು ಆ ವೇದಿಕೆ ಮೇಲೆ ನೋಡಿ ತುಂಬಾನೇ ಖುಷಿ ಪಟ್ಟರು ಎನ್ನುವ ಪ್ರಶ್ನೆಗೆ ನಾನು ಕೂಡ ಖುಷಿ ಪಟ್ಟೆ ಎಂದರು. ಸುಮಾರು 6 ರಿಂದ 7 ವರ್ಷ ಆಯಿತು ಒಟ್ಟಿಗೆ ಇಬ್ಬರು ಒಂದೇ ವೇದಿಕೆ ಮೇಲೆ, ಜೊತೆಗೆ ಎದುರು ಬದುರು ನೋಡಿಕೊಂಡು ಹೋಗಿದ್ದು ನನಗೂ ಕೂಡ ಖುಷಿ ತಂದಿತು ಎಂದರು. ಜೊತೆಗೆ ನಟ ದರ್ಶನ್ ಅವರನ್ನು ನೋಡಿದಾಗ ಶೇಕ್ ಹ್ಯಾಂಡ್ ಕೊಟ್ಟು ಬಿಟ್ಟು ಮಾತನಾಡಿಸಬೇಕು ಅನಿಸಿತ್ತ ಸರ್ ನಿಮಗೆ ಎನ್ನುವ ಪ್ರಶ್ನೆಗೆ, ಸುದೀಪ್ ಅವರು ಶೇಕ್ ಹ್ಯಾಂಡ್ ಕೊಡುವುದು ತುಂಬಾ ದೊಡ್ಡ ವಿಷಯ ಅಲ್ಲ,

ಆದ್ರೆ ಕೆಲವೊಂದಿಷ್ಟು ಪ್ರಶ್ನೆಗಳಿವೆ, ಅದಕ್ಕೆ ಉತ್ತರ ಸಿಗಬೇಕು, ಆನಂತರ ಎಲ್ಲವೂ ಎಂಬುದಾಗಿ ದರ್ಶನ್ ಬಗ್ಗೆ ಸುದೀಪ್ ಅವರು ತುಂಬಾ ಸಮಾಧಾನವಾಗಿ ಉತ್ತರವನ್ನು ನೀಡಿದ್ದಾರೆ. ಅಸಲಿಗೆ ನಟ ದರ್ಶನ್ ಬಗ್ಗೆ ಪ್ರಶ್ನೆ ಮಾಡಿದ ಮೇಲೆ ಸುದೀಪ್ ಅವರು ಯಾವ ರೀತಿ ಅಚ್ಚುಕಟ್ಟಾಗಿ ಎಲ್ಲರಿಗೂ ಸಹ ಇಷ್ಟವಾಗುವಂತೆ ಉತ್ತರ ನೀಡಿದರು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಇವರಿಬ್ಬರ ಕುರಿತು ನಿಮ್ಮದೇ ಆದ ಮಾತಿನಲ್ಲಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು...