ಪೀರಿಯಡ್ಸ್ ಇದ್ದರೂ ಬಿಟ್ಟಿಲ್ಲ, ಬಟ್ಟೆ ಬದಲಾಯಿಸಲು ಕಷ್ಟ ಆಗುತ್ತಿತ್ತು ಎಂದು ಕಣ್ಣೀರಿಟ್ಟ ಶುಭಾ ಪೂಂಜಾ..!

ಪೀರಿಯಡ್ಸ್ ಇದ್ದರೂ ಬಿಟ್ಟಿಲ್ಲ, ಬಟ್ಟೆ ಬದಲಾಯಿಸಲು ಕಷ್ಟ ಆಗುತ್ತಿತ್ತು ಎಂದು ಕಣ್ಣೀರಿಟ್ಟ ಶುಭಾ ಪೂಂಜಾ..!

ಕನ್ನಡದ ಮುದ್ದುಮುಖದ ಚೆಲುವೆ ನಟಿ ಶುಭಪುಂಜ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಈ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾದಂತಹ ನಟಿ ಅಂದ್ರೆ ಅದು ಶುಭ ಪುಂಜ. ಅವರು ಇತ್ತೀಚಿಗೆ ಬಿ ಗಣಪತಿ ಅವರ ಸಂದರ್ಶನದಲ್ಲಿ ಕಾಣಿಸಿದ್ದರು. ನಾವು ಸಿನಿಮಾ ಕ್ಷೇತ್ರದಲ್ಲಿ ಚಿತ್ರ ವಿಚಿತ್ರ ಜನರನ್ನು ನೋಡಿದ್ದೇವೆ..ಕೆಲವರು ಇದ್ದಾರೆ, ಅವರಿಗೆ ಸಿನಿಮಾ ಮಾಡುವ ಉದ್ದೇಶ ಕೂಡ ಇರುವುದಿಲ್ಲ, ಅಸಲಿಗೆ ಸಿನಿಮಾ ಕ್ಷೇತ್ರದಲ್ಲಿ ಇರುವುದೇ ಇಲ್ಲ. ಹಾಗೆ ಸಿನಿಮಾದ ಯಾವ ಕೆಲಸವೂ ಇರುವುದಿಲ್ಲ, ಆದರೆ ಅವರು ನಮ್ಮ ಸಂಪರ್ಕದಲ್ಲಿರಬೇಕು ಎಂದು ಅಂದುಕೊಳ್ಳುತ್ತಾರೆ. ಅಂತಹವರು ಯಾಕೆ ಆ ರೀತಿ ಮಾಡುತ್ತಾರೋ ಗೊತ್ತಿಲ್ಲ. ಹಾಗೆ ಇವತ್ತಿನ ದಿನಕ್ಕೆ ಕ್ಯಾರೇವಾನ್ ಬಂದಿದೆ.

ಆದರೆ ನಾವು ಸಿನಿಮಾದಲ್ಲಿ ನಟನೆ ಮಾಡುವಾಗ ಆಗಿನ ಸಮಯದಲ್ಲಿ ಯಾವ ಕ್ಯಾರವಾನ್ ಇರುತ್ತಿರಲಿಲ್ಲ. ಬಟ್ಟೆ ಬದಲಾಯಿಸಬೇಕು ಅಂದರೆ ಬೇರೆಯವರ ಮನೆಯಲ್ಲಿ ಅನುಮತಿ ಪಡೆದು ಶೂಟಿಂಗ್ ಬಟ್ಟೆಯನ್ನು ಹಾಕಿಕೊಳ್ಳುತ್ತಿದ್ದೇವೆ. ಹಾಗೆ ಬ್ಲಾಕ್ ಬಟ್ಟೆ ಧರಿಸಿ ರಸ್ತೆಯಲ್ಲೇ  ಕೆಲವು ಬಾರಿ ಶೂಟಿಂಗ್ ಬಟ್ಟೆಗಳನ್ನ ಹಾಕಿಕೊಂಡು ನಟನೆ ಮಾಡುತ್ತಿದ್ದೆವು. ಆದರೆ ಇಂದು ತುಂಬಾನೇ ಬದಲಾಗಿದೆ. ಜೊತೆಗೆ ನಾವು ಆ ದಿನಗಳಲ್ಲಿ ಸಿನಿಮಾದಲ್ಲಿ ಕೆಲಸ ಮಾಡಬೇಕು ಅಂದರೆ, ಚಿತ್ರದಲ್ಲಿ ನಟಸಿ ಮೂರು ತಿಂಗಳಾದ ಮೇಲೆ ನಮಗೆ ಹಣ ಬರುತ್ತಿತ್ತು.  

ಆದರೆ ಇವತ್ತಿಗೆ ಒಂದು ಇವೆಂಟಿಗೆ ಹೋದರೆ ಹಣ ಪಡೆದು ದುಡಿಮೆ ಮಾಡುತ್ತಿದ್ದೇವೆ..ನಾನು ಸಾಕಷ್ಟು ಕಾರ್ಯಕ್ರಮಗಳಿಗೆ ಆಗ ಭೇಟಿ ಕೊಟ್ಟಿದ್ದೇನೆ, ಆದರೆ ಕೆಲವರು ಕಷ್ಟ ಎಂದು ತಕ್ಷಣ ದುಡ್ಡು ಪಡೆದುಕೊಂಡಿಲ್ಲ. ಹಾಗೆ ನಮಗೆ ಈಗ ಬೇಸರವಾಗುತ್ತದೆ ನಾವು ಕಷ್ಟಪಟ್ಟು ದುಡಿದ ಹಣವನ್ನು ತೆಗೆದುಕೊಳ್ಳಲಿಲ್ಲ ಎಂದು, ಜೊತೆಗೆ ಪಿರಿಯಡ್ಸ್ ಆದರೂ ಕೂಡ ನಟನೆ ಮಾಡುವುದನ್ನು ಬಿಟ್ಟಿರಲಿಲ್ಲ, ಈಗ ಅದನ್ನ ನೆನೆಸಿಕೊಂಡರೆ ಬೇಸರ ಆಗುತ್ತೆ. ಅಷ್ಟು ಕಷ್ಟಪಟ್ಟು ನಟನೆ ಮಾಡುತ್ತಿದ್ದೆವು. ಲೈಫ್ ಅನ್ನುವುದು ತುಂಬಾನೇ ಚಾಲೆಂಜ್, ಆಗಿನ ಸಮಯಕ್ಕೂ ಈಗಿನ ಸಮಯಕ್ಕೂ ತುಂಬಾನೇ ವ್ಯತ್ಯಾಸ ಇದೆ ಎಂದರು.

ಜೊತೆಗೆ ನಾವು ಹೆಣ್ಣು ಮಕ್ಕಳು ಯಾವುದೇ ಕೆಲಸಕ್ಕೂ ಹಿಂಜರಿಯದೆ ಮಾಡಬೇಕು, ಅದು ಕೂಡ ದೊಡ್ಡ ಸವಾಲು ಹಾಗೆ ನಗು ನಗುತ್ತಾ ಜೀವನ ಮಾಡಬೇಕು ಎಂದು ನಟಿ ಶುಭಪುಂಜ ಅವರು ಹೇಳಿಕೆ ನೀಡಿದ್ದಾರೆ ಏಎನ್ನಲಾಗಿ ತಿಳಿದು ಬಂದಿದೆ. ಸ್ನೇಹಿತರೆ ನಟಿ ಶುಭ ಪುಂಜ ಅವರು ಹೇಳಿರುವ ಈ ಕೆಲವು ಮಾತುಗಳ ಪ್ರಕಾರ ಈ ಕುರಿತು ನಿಮ್ಮ ಅನಿಸಿಕೆ ತಿಳಿಸಿ, ಮತ್ತು ಅವರು ಹೇಳಿರುವ ಆಗಿನ ಅವರ ಸಿನಿಮಾ ಶೂಟಿಂಗ್ ಸಮಯ ಮತ್ತು ಈಗಿನ ಸಿನಿಮಾದ ಶೂಟಿಂಗ್ ಬಗ್ಗೆಯ ನಿಮ್ಮ ಅಭಿಪ್ರಾಯವನ್ನು ಹೇಳಿ, ಧನ್ಯವಾದಗಳು...