ಲೀಲಾವತಿ ಅವರ ಆರೋಗ್ಯದ ಬಗ್ಗೆ ಹೇಳುತ್ತಾ ಅಳಲು ಶುರುಮಾಡಿದ ವಿನೋದ್ ರಾಜ್ ಕುಮಾರ್! ಯಾಕೆ ಗೊತ್ತಾ?

ಲೀಲಾವತಿ ಅವರ ಆರೋಗ್ಯದ ಬಗ್ಗೆ ಹೇಳುತ್ತಾ ಅಳಲು ಶುರುಮಾಡಿದ ವಿನೋದ್ ರಾಜ್ ಕುಮಾರ್! ಯಾಕೆ ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರು ಪೇರು ಆಗಿರುವ ಸುದ್ದಿ ಎಲ್ಲೆಡೆ ಹರಡಿದೆ. ಇನ್ನೂ ಈ ನಟಿ ಬಣ್ಣದ ರಂಗದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಗುರುತಿಸಿಕೊಂಡವರು ಆ ನಂತರ ಇವರ ನಟನೆಗೆ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಅವಕಾಶಗಳು ಇವರನ್ನು ಅರಸಿ ಬರುತಿತ್ತು. ಆದರೂ ಕೊಡ ಸೂಕ್ತ ರೆಮಿನರೇಷನ್ ಹಾಗೂ ಅವಕಾಶಗಳು ಸಿಗದೆ ಈ ನಟಿ ಬಹಳ ಬೇಗ ಚಿತ್ರ ರಂಗದಲ್ಲಿ ರಂಗ ದಿಂದ ದೂರ ಉಳಿದರು.  ಇನ್ನೂ ಇವರ ಪುತ್ರ ಕೊಡ ನಮ್ಮ ಕರ್ನಾಟಕದ ಮೈಕಲ್ ಜಾಕ್ಸನ್ ಎಂದು ಹೆಸರು ಮಾಡಿದ್ದರು ಕೊಡ ಇವರ ನಿಲುವು ಅಷ್ಟಾಗಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗಳಿಸಲು ಆಗಲಿಲ್ಲ.

ಹೀಗೆ ಇವರಿಬ್ಬರೂ ಕೊಡ ಅವಕಾಶಗಳಲ್ಲಿ ವಂಚಿತರಾಗಿ ಬಹಳ ಬೇಗ ಚಿತ್ರ ರಂಗದಿಂದ ದೂರ ಉಳಿಯುತ್ತಾರೆ. ಇನ್ನೂ ಇವರು ತಮ್ಮ ತೋಟದ ಮನೆಯಲ್ಲಿ ಪ್ರಕೃತಿ ಮಡಿಲಿನಲ್ಲಿ ರೈತರ ಜೀವನವನ್ನು ನಡೆಸುತ್ತಾ ಬದುಕು ಸಾಗಿಸುತ್ತಿದ್ದಾರೆ. ಆದ್ರೆ ವಯೋ ವೃದ್ಧರ ಕಾಯಿಲೆಗೆ ತುತ್ತಾಗಿರುವ ಲೀಲಾವತಿ ಅವರು ಸಾಕಷ್ಟು ವರ್ಷದಿಂದಲೂ ಕೊಡ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾ ಬರುತ್ತಿದ್ದಾರೆ. ಇನ್ನೂ ಇವರನ್ನು ನೋಡಲು ಸಾಕಷ್ಟು ಸೆಲಬ್ರೆಟ್ ಗಳು ಅವರ ಮನೆಯ ಬಾಗಿಲಿಗೆ ಬಂದು ಅವರನ್ನು ನೋಡಿ ಮಾತನಾಡಿಸುತ್ತಾ ಆತ್ಮ ಸ್ಥೈರ್ಯ ಕೊಡ ತುಂಬಿ ಹೋರಾಡುತ್ತಿದ್ದಾರೆ. ಇತ್ತೀಚೆಗೆ ಅರ್ಜುನ್ ಸರ್ಜಾ ಅವರು ಕೊಡ ಇವರ ಮನೆಗೆ ಭೇಟಿ ನೀಡಿದ್ದಾರೆ. 

ಇನ್ನೂ ಲೀಲಾವತಿ ಅವರ ಆರೋಗ್ಯ ಸಮಸ್ಯೆ ಯಿಂದ ಆಸ್ಪತ್ರೆಯ ವೈದ್ಯರ ವರ್ತನೆಯಿಂದ ಬೇಸತ್ತ ಇವರೇ ತನ್ನ ಅಮ್ಮನ ಹೆಸರಿನಲ್ಲಿ ಒಂದು ಸರ್ಕಾರಿ ಆಸ್ಪತ್ರೆ ತೆಗೆಯಬೇಕು ಎಂದು ನಿರ್ಧಾರ ಮಾಡಿ ತಮ್ಮ ತೋಟದಲ್ಲಿ ಒಂದು ಆಸ್ಪತ್ರೆಯ ನಿರ್ಮಾಣ ಮಾಡಿದ್ದಾರೆ. ಈಗ ಆ ಆಸ್ಪತ್ರೆಯ ಉದ್ಘಾಟನೆ ಮಾಡಲು ಎಲ್ಲಾ ತಯಾರಿ ಮಾಡಿರುವ ಈ ಸಮಯದಲ್ಲಿ ಲೀಲಾವತಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು ಈಗ ಆಕ್ಸಿಜನ್ ಮುಖಾಂತರ ಇವರು ಉಸಿರಾಡುವಂತೆ ಆಗಿದೆ. ಹಾಗಾಗಿ ವೈದ್ಯರು ಈ ಆಸ್ಪತ್ರೆಯ ಉದ್ಘಾಟನೆ ಮಾಡಲು ಲೀಲಾವತಿ ಅವರನ್ನು ಕರೆದುಕೊಂಡು ಹೋಗುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಆದಷ್ಟು ಬೇಗ ಲೀಲಾವತಿ ಅವರು ಗುಣ ಮುಖ ಅಗಲಿ ಎಂದು ನಾವೆಲ್ಲರೂ ಕೊಡ ಹಾರೈಸೋಣ.