ಬಾಡಿಗೆ ಕಟ್ಟಲು ಹಣವಿಲ್ಲ ಎಂದ ರಕ್ಷಿತ್ ಶೆಟ್ಟಿ! ಇವರ ಈ ಪರಿಸ್ಥಿತಿಗೆ ಕಾರಣ ಏನು ಗೊತ್ತಾ?

ಬಾಡಿಗೆ ಕಟ್ಟಲು ಹಣವಿಲ್ಲ ಎಂದ ರಕ್ಷಿತ್ ಶೆಟ್ಟಿ! ಇವರ ಈ ಪರಿಸ್ಥಿತಿಗೆ ಕಾರಣ ಏನು ಗೊತ್ತಾ?

ಸ್ಯಾಂಡಲ್ ವುಡ್ ನ "ಸಿಂಪಲ್ ಸ್ಟಾರ್" ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು ರಕ್ಷಿತ್ ಶೆಟ್ಟಿ. ಇನ್ನೂ "ರಕ್ಷಿತ್ ಶೆಟ್ಟಿ" ಅವರು ನಿರ್ದೇಶಕ ಹಾಗೂ ನಟ ಎಂದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಈ ನಟ ನಮ್ಮ ಗಾಂಧಿ ನಗರಕ್ಕೆ ನೀಡಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳು ಆಗಿದ್ದರು ಕೂಡ ಅವರ ಕೊಟ್ಟಿರುವ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಎನ್ನುವ ಹೆಸರು ಪಡೆದುಕೊಂಡಿದೆ. ಇನ್ನೂ ಇತ್ತೀಚೆಗೆ ತೆರೆಕಂಡ ಇವರ "ಚಾರ್ಲಿ 777" ಸಿನಿಮಾ ಫ್ಯಾನ್ ಇಂಡಿಯಾ ಸಿನಿಮಾ ಆಗಿ ಗುರುತಿಸಿಕೊಂಡು ದೊಡ್ಡ ಹಿಟ್ ಪಡೆದಿತ್ತು. ಇದೀಗ ಮೊನ್ನೆಯಷ್ಟೇ ಬಿಡುಗಡೆ ಆದ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಕೂಡ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇದೀಗ ಒಳ್ಳೆಯ ಸಕ್ಸಸ್ ಹಾದಿಯಲ್ಲಿ ಇರುವ ರಕ್ಷಿತ್ ಅವರು ಗಾಂಧಿ ನಗರಕ್ಕೆ ಬಂದಿರುವ ಹಾದಿಯನ್ನು ಒಮ್ಮೆ ತಿರುಗಿ ನೋಡಿದರೆ ಅದರಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು. ಯಾರ ಬೆಂಬಲ ಇಲ್ಲದೆ ಇಂದು ಬಣ್ಣದ ಲೋಕದಲ್ಲಿ ಉನ್ನತ ಸ್ಥಾನವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ ಆ ಕ್ಲಿಷ್ಟ ಹಾದಿಯನ್ನು ದಾಟಿ ಇಂದು ಯಶಸ್ಸಿನ ಹಾದಿಯನ್ನು ಹಿಡಿದಿದ್ದಾರೆ. ಆದರೆ ಅವರ ರಿಲೇಶನ್ ಶಿಪ್ ವಿಷಯಕ್ಕೆ ಬಂದ್ರೆ ಮುಂಚೆ ಕಾಲೇಜ್ ಸಮಯದಲ್ಲಿ ಪ್ರೀತಿಸಿದ ಹುಡುಗಿ ಹಾಗೋ ಎಂಗೇಜ್ ಮೆಂಟ್ ಆಗಿದ್ದ ನ್ಯಾಷನಲ್ ಕ್ರಶ್ ಕೂಡ ಇವರನ್ನು ಅರ್ಧಕ್ಕೆ ಕೈ ಬಿಟ್ಟಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಸಿನಿಮಾ ಹೊರತು ಪಡಿಸಿ ಹೇಳುವ ವಿಷಯ ಎಂದರೆ ಸಾಕಷ್ಟಿದೆ. ನೀವು ಕೂಡ ನಮ್ಮ ಸ್ಯಾಂಡಲ್ ವುಡ್ ನ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಇನ್ನಷ್ಟು ವಯಕ್ತಿಕ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.    

ರಕ್ಷಿತ್ ಶೆಟ್ಟಿ ಅವರು ಮೂಲತಃ "ಉಡಿಪಿ" ಯವರು. "ಶ್ರೀಧರ್ ಶೆಟ್ಟಿ ಹಾಗೂ ರಂಗಮ್ಮ ಶೆಟ್ಟಿ" ಅವರ ಏಕೈಕ ಪುತ್ರ. ಇವರದ್ದು ಕೂಡ ಮದ್ಯಮ ವರ್ಗದ ಕುಟುಂಬ. ಕೆಲವೊಮ್ಮೆ ಬಾಡಿಗೆ ಕಟ್ಟಲು ಪರದಾಡಿದ ಸಂಭವವೂ ಉಂಟು ಎಂದು ರಕ್ಷಿತ್ ಅವರು ಬಹಿರಂಗವಾಗಿ ತಿಳಿಸಿದ್ದಾರೆ. ಇವ್ರು ಸಿನಿಮಾ ಜೀವನವನ್ನು ಹೊರತು ಪಡಿಸಿ ವೃತ್ತಿಯಲ್ಲಿ "ಸಾಫ್ಟ್ ವೇರ್ ಎಂಜಿನಿಯರ್" ಆಗಿ ಖಾಸಗಿ ಕಂಪನಿಯಲ್ಲಿ ಕೊಡ ಕೆಲ್ಸ ಮಾಡಿ ಇನ್ನುನು ವಿದೇಶಕ್ಕೆ ತೆರಳುವ ಸಮಯದಲ್ಲಿ ಇವರು ಆಯ್ಕೆ ಮಾಡಿಕೊಂಡಿದ್ದು ಗಾಂಧಿ ನಗರ. ಆ ಸಮಯದಲ್ಲಿ ಗಾಂಧಿ ನಗರಕ್ಕೆ ಬಂದ ರಕ್ಷಿತ್ ಅವರಿಗೆ ಮೊದಲ ದಿನಗಳಲ್ಲಿ ಸಿಕ್ಕದ್ದು ಕೇವಲ ನಿರಾಸೆ ಹಾಗೂ ಅವಮಾನ. ಹಾಗೂ ಹೀಗೂ ಸಿನಿಮಾ ಅವಕಾಶಗಳು ಕೈ ಸೇರಿ ಸಿನಿಮಾ ಬಿಡುಗಡೆ ಮಾಡಿದರು ಕೊಡ ಪ್ರೇಕ್ಷಕರು ಇವರನ್ನು ಒಪ್ಪುತ್ತಿರಲಿಲ್ಲ. ಅದೆಷ್ಟೋ ವರ್ಷ ಸೈಕಲ್ ಹೊಡೆದು ಇನ್ನೇನು ಗಾಂಧಿ ನಗರವನ್ನು ತೊರೆಯುವ ಸಮಯದಲ್ಲಿ ರಕ್ಷಿತ್ ಅವರ ಕೈ ಸೇರಿದ್ದು "ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ". ಈ ಸಿನಿಮಾ ರಕ್ಷಿತ್ ಅವರನ್ನು ಸಿಂಪಲ್ ಸ್ಟಾರ್ ಅನ್ನಾಗಿ ಮಾಡಿತ್ತು. ಅಂದು ಹಿಡಿದ ಯಶಸ್ಸಿನ ಹಾದಿ ಇಂದಿಗೂ ಸಾಗುತ್ತಲೇ ಬಂದು ತಮ್ಮ ಬೆಳವಣಿಗೆಯ ಗ್ರಾಫ್ ಹೆಚ್ಚಿಸುತ್ತಲೆ ಇದ್ದಾರೆ. ( video credit :focus )