ದರ್ಶನ್ ಕೂತು ಸಿಗರೇಟ್ ಸೇದಿದ್ರೆ ತಪ್ಪೇನಿದೆ..? ಎಂದು ದರ್ಶನ ಪರ ನಿಂತ ಸಂಜನಾ ಗರ್ಲಾನಿ

ದರ್ಶನ್ ಕೂತು ಸಿಗರೇಟ್ ಸೇದಿದ್ರೆ ತಪ್ಪೇನಿದೆ..? ಎಂದು ದರ್ಶನ ಪರ ನಿಂತ ಸಂಜನಾ ಗರ್ಲಾನಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಎಲ್ಲಾ ಖೈದಿಗಳಂತೆ ಜೈಲಲ್ಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಟ ದರ್ಶನ್ ಗೆ ಜೈಲಿನಲ್ಲಿ ಎಲ್ಲಾ ರೀತಿಯ ಫೆಸಿಲಿಟಿ ಕೊಡುತ್ತಿರುವುದು ಸಾಬೀತಾಗುತ್ತಿದೆ. ಕೊಲೆ ಕೇಸಲ್ಲಿ ಜೈಲು ಸೇರಿಸುವ ದಾಸ ತನ್ನ ಆತ್ಮೀಯರ ಜೊತೆ ಹರಟೆ ಹೊಡೆಯುತ್ತ ಕುಳಿತಿರುವ ಫೋಟೋ ಫುಲ್ ವೈರಲ್ ಆಗುತ್ತಿದೆ.

ಈ ಫೋಟೋವನ್ನು ಗಮನಿಸಿದಾಗ ಇದು ಪರಪ್ಪನ ಅಗ್ರಹಾರ ಜೈಲೋ ಅಥವಾ ಗೆಸ್ಟ್ ಹೌಸಾ ಎಂಬ ಅನುಮಾನ ವ್ಯಕ್ತವಾಗುತ್ತೆ. ಹೌದು... ನಟ ದರ್ಶನ್ ಜೈಲಲ್ಲಿ ಬಿಂದಾಸ್ ಆಗಿ ಕಾಲ‌ ಕಳೆಯುತ್ತಿದ್ದಾರೆ ಎಂಬ ಅಂಶ ಈ ಫೋಟೋದಿಂದ ಬಯಲಾಗುತ್ತಿದೆ. ಫೋಟೋದಲ್ಲಿ ನಟ ದರ್ಶನ್ ಜೊತೆ ಜೈಲಿನಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್, ನಾಗರಾಜ್, ಕುಳ್ಳ ಸೀನಾ ಕುಳಿತುಕೊಂಡಿದ್ದಾರೆ.

ರೆಸಾರ್ಟ್ ನ ಲಾನ್ ಒಂದರಲ್ಲಿ ನಾಲ್ಕು ಚೇರು ಟೇಬಲ್ ಹಾಕಿ ಟೀ ಮಗ್ ಹಿಡಿದುಕೊಂಡು ಸಿಗರೇಟ್ ಸೇದಿಕೊಂಡು ಮಜಾ ಮಾಡುತ್ತಿರೋದು ಕಂಡು ಬಂದಿದೆ. ಜೈಲಲ್ಲಿ ಸಿಗರೇಟ್ ಮಾರಾಟ ಮಾಡಲಾಗುತ್ತದೆ. ಆದರೆ ಎಲ್ಲಾ ಖೈದಿಗಳಿಗೂ ಇದೇ ರೀತಿ ಚೇರು ಟೇಬಲ್ ಹಾಕಿ ಸಿಗರೇಟ್ ಸಿದೋಕೆ ಬಿಡ್ತಾರ. ಇಲ್ಲ ಈ ಚೇರು ಟೇಬಲ್ ವ್ಯವಸ್ಥೆಗೆ ಎಷ್ಟು ಹಣ ಸಂದಾಯವಾಗಿದೆ ಅಥವಾ ಪ್ರಭಾವಿ ವ್ಯಕ್ತಿಗಳ ಮಾತಿಗೆ ಮಣಿದು ಈ ರೀತಿ ಫೆಸಿಲಿಟಿ ನೀಡಲಾಗಿದೆಯಾ ಎಂಬುದಕ್ಕೆ ಜೈಲಾಧಿಕಾರಿಗಳೇ ಉತ್ತರ ಕೊಡಬೇಕಿದೆ.

ಈ ವಿಷಯದಲ್ಲಿ ಸಂಜನಾ ಗರ್ಲಾನಿ ಇತ್ತೀಚಿಗೆ ಮಾದ್ಯಮಕ್ಕೆ ಕೊಟ್ಟ ಸಂದರ್ಶನ್ ಒಂದಲ್ಲಿ ಅವರು ದರ್ಶನ್ ಕೂತು ಸಿಗರೇಟ್ ಸೇದಿದ್ರೆ ತಪ್ಪೇನಿದೆ  ಅವರು ವಿಚಾರಣಾದಿ ಕೈದಿ ಅಷ್ಟೇ . ಅವರು ಅಪರಾಧಿ ಎಂದು ಇನ್ನು ನಿರ್ಧರಿಸಿಲ್ಲ .ಅಪರಾಧಿ ಅಂದ್ರೆ  ಚೇರ್ ಮೇಲೆ ಕುಳಿತುಕೊಳ್ಳ ಬಾರದು ಅಂತ ಕಾನೂನು ಇದೆಯಾ ಅವರು ಭೂಮಿ ಅಗೆದು ಅದರಲ್ಲಿ ಕುಳಿತುಕೊಳ್ಳ ಬೇಕಾ  ಅಂತ ವಾದಿಸಿದ್ದಾರೆ . ಮತ್ತು ಸಿಗರೇಟ್ ಅಲ್ಲಿ ಲೀಗಲ್ ಆಗಿ ಸಿಗುತ್ತೆ ಅಂತ್ಯೆಲ್ಲಾ ವಾದಿಸಿದ್ದಾರೆ . ಒಟ್ಟಿನ್ನಲ್ಲಿ ಅವರು ಸಹ ಜೈಲ್ ಮುಖ ನೋಡಿದ್ದಾರೆ ಅಲ್ಲವಾ . 
 ಇದಕ್ಕೆ ನೆಟ್ಟಿಗರು ತುಂಬಾ ಖಾರವಾಗಿ ಸಂಜನಾ ಗರ್ಲಾನಿ ವಿರುದ್ಧವಾಗಿ ಕಾಮೆಂಟ್ ಮಾಡಿದ್ದಾರೆ . ಅಲ್ಲ ಪಾಪ ಅಲ್ಲಿ ಒಬ್ಬ ಹೆಣ್ಣು ತನ್ನ ಗಂಡನ ಜೀವ ಕಳೆದು ಕೊಂಡಿದ್ದಾಳೆ . ಅವಳ ಬಗ್ಗೆ ನಿಮಗೆ ಯಾವ ಕನಿಕರವು ಇಲ್ಲವ ಎಂದು ಪ್ರಶ್ನೆ ಮಾಡಿದ್ದಾರೆ 

( video credit : Republic Kannada )