ದರ್ಶನ್, ನಿಖಿಲ್, ರಾಕ್ಲೈನ್, ಜಗ್ಗೇಶ್ ನಿಮ್ಮ ಕಣ್ಣಿಗೆ ಕಾಣುತ್ತಿಲ್ವಾ ಎಂದ ನೆಟ್ಟಿಗರು..! ಹುಲಿ ಪೆಂಡೆಂಟ್ ವಿಡಿಯೋ ವೈರಲ್

ದರ್ಶನ್, ನಿಖಿಲ್, ರಾಕ್ಲೈನ್, ಜಗ್ಗೇಶ್ ನಿಮ್ಮ ಕಣ್ಣಿಗೆ ಕಾಣುತ್ತಿಲ್ವಾ ಎಂದ ನೆಟ್ಟಿಗರು..! ಹುಲಿ ಪೆಂಡೆಂಟ್ ವಿಡಿಯೋ ವೈರಲ್

ಬಿಗ್ ಬಾಸ್ ಮನೆಯಿಂದ ಸೀದಾ ಅರಣ್ಯ ಅಧಿಕಾರಿಗಳು ವರ್ತುರ್ ಸಂತೋಷ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದರು..ಹಾಗೆ ವಿಚಾರಣೆಗೆ ಕರೆತಂದಿದ್ದರು.. ಅದು ಅವರು ಹಾಕಿಕೊಂಡಿದ್ದ ಅವರ ಕೊರಳಿನಲ್ಲಿ ಹುಲಿ ಉಗುರಿನ ಪೆಂಡೆಂಟ್ ವಿಚಾರವಾಗಿ. ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸ್ಯಾಂಡಲ್ವುಡ್ ನ ಕೆಲ ನಟರುಗಳ ಕೊರಳಲ್ಲಿ ಯು ಕೂಡ ಹುಲಿಯ ಉಗುರಿನ ಪೆಂಡೆಂಟ್ ಇರುವ ದೃಶ್ಯ ಕಂಡು ಬರುತ್ತಿದೆ ಸ್ನೇಹಿತರೆ. ವರ್ತೂರು ಸಂತೋಷ ಅವರಿಗೊಂದು ನ್ಯಾಯಾನ..? ಹಾಗೇನೇ  ಸ್ಯಾಂಡಲ್ವುಡ್ನ ಈ ನಾಯಕರಿಗೊಂದು ನ್ಯಾಯನ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಟ ದರ್ಶನ್ ಅವರ ಕೊರಳಲ್ಲಿಯೂ ಕೂಡ ಹುಲಿಯ ಉಗುರಿನ ಪೆಂಡೆಂಟ್ ಒಂದಿಷ್ಟು ಕಾರ್ಯಕ್ರಮಗಳಲ್ಲಿ ಕಂಡು ಬಂದಿದ್ದು ಅದನ್ನ ನೀವೂ ಗಮನಿಸಿರಬಹುದು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಕೊರಳಲ್ಲಿಯೂ ಕೂಡ ಹುಲಿಯ ಉಗುರಿನ ಪೆಂಡೆಂಟ್ ಕಂಡು ಬಂದಿದೆಯಂತೆ ಗೆಳೆಯರೆ. ಜೊತೆಗೆ ಅವಧೂತ ಎಂದು ಖ್ಯಾತಿ ಪಡೆದಿರುವ ವಿನಯ್ ಗುರೂಜಿಯವರು ಹುಲಿ ಚರ್ಮದ ಮೇಲೆ ಕುಳಿತಿರುವ ಒಂದು ಫೋಟೋ ಕೂಡ ವೈರಲ್ ಆಗಿತ್ತು...ಇದೆಲ್ಲವನ್ನು ನೋಡಿ ಸಾಮಾಜಿಕ ಪ್ರೀಯರು ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯಾ, ಇವರ ವಿರುದ್ಧ ತನಿಖೆ ನಡೆಸುವುದಕ್ಕೆ ಆಗುವುದಿಲ್ಲವಾ, ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದಾರೆ.   

ದರ್ಶನ್ ಅವರು ಮತ್ತು ರಾಕ್ ಲೈನ್ ವೆಂಕಟೇಶ್ ಅವರು ಧರಿಸಿರುವ ಹುಲಿಯ ಉಗುರಿನ ಪೆಂಡೆಂಟ್ ಗಳು ಅಸಲಿನಾ ನಕಲೀನಾ ಅದು ಸಹ ಗೊತ್ತಾಗಬೇಕು ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಅವು ಅಸ್ಲಿ ಆಗಿದ್ದರೆ ಮಾತ್ರ ಅವರಿಗೆ ಶಿಕ್ಷೆ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ಇದು ಹಳೆಯ ಫೋಟೋಗಳ ಆದ ಕಾರಣಕ್ಕಾಗಿ ಅವುಗಳು ಸಿಗುವ ಸಾಧ್ಯತೆ ಕೂಡ ಕಡಿಮೆ ಇದ್ದು ಜೊತೆಗೆ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ಇನ್ನೂ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ, ಮತ್ತು ಇನ್ನು ಯಾರೆಲ್ಲ ಹುಲಿಯ ಉಗುರಿನ ವಿಚಾರವಾಗಿ ಕಂಡು ಬಂದಿದ್ದಾರೆ ನೋಡಿ. ಅರಣ್ಯ ಇಲಾಖೆ ಅಡಿಯಲ್ಲಿ, ಕಾನೂನಿನ ಅಡಿಯಲ್ಲಿ ಬರುವ ಅರಣ್ಯ ಜೀವಿಗಳ ಯಾವ ವಸ್ತುಗಳನ್ನು ಕೂಡ ಯಾರು ಉಪಯೋಗ ಮಾಡಬಾರದು ಎಂದು ಏಕೆ ಹೇಳುತ್ತಾರೆ. ಕಾನೂನಿನ ನಿಟ್ಟಿನಲ್ಲಿ ಈ ವಿಷಯವಾಗಿ ಏನೆಲ್ಲಾ ಅಂಶ ಅಡಗಿದೆ..ಇದೀಗ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ ಎಲ್ಲವನ್ನು ತಿಳಿಸುವ ಸಣ್ಣ ಪ್ರಯತ್ನ ಈ ವಿಡಿಯೋ..ಒಮ್ಮೆ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ, ಮತ್ತು ಈ ಹುಲಿ ಉಗುರಿನ ಉಪಯೋಗದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಮೆಂಟ್ ಸೆಕ್ಷನಲ್ಲಿ ತಿಳಿಸಿ, ಧನ್ಯವಾದಗಳು  

{ video credit : National tv )