ಶೂಟಿಂಗ್ ನಲ್ಲಿ ನನ್ನನ್ನು ನೆಕ್ಕಿದ ನಟ,ಬೇಡ ಎಂದರು ಬಿಡದೇ ನೆಕ್ಕಿದ್ದಾನೆ,ಯಾವ ಜಾಗ ಗೊತ್ತಾ

ಶೂಟಿಂಗ್ ನಲ್ಲಿ ನನ್ನನ್ನು ನೆಕ್ಕಿದ ನಟ,ಬೇಡ ಎಂದರು ಬಿಡದೇ ನೆಕ್ಕಿದ್ದಾನೆ,ಯಾವ ಜಾಗ ಗೊತ್ತಾ

ನಟಿ ಸದಾ ಯಾರಿಗೆ ನೆನಪಿಲ್ಲ ಹೇಳಿ. ಮೊನಲಿಸ ಸಿನಿಮಾದಲ್ಲಿ ನಟ ಧ್ಯಾನ್ ಜೊತೆ ಅಭಿನಯಿಸಿದ್ದ ಈ ಚೆಲುವೆ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾಳೆ.ಸಿನಿಮಾ ಅವಕಾಶ ಸಿಗುವುದೇ ಕಷ್ಟ. ಒಮ್ಮೆ ನಟಿಸಲು ಒಪ್ಪಿ ಸಹಿ ಮಾಡಿದ ಮೇಲೆ ಮುಗೀತು. ನಟಿಯರು ನಿರ್ದೇಶಕರು ಹೇಳಿದಂತೆ ನಟಿಸಲೇ ಬೇಕಾಗಿರುತ್ತದೆ.ಒಲ್ಲದ ಮನಸ್ಸಿನಿಂದ ಅಂತಹ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವಂತಾಗುತ್ತದೆ. ಕೆಲವೊಮ್ಮೆ ರೊಮ್ಯಾಂಟಿಕ್‌ ಅಥವಾ ಅಸಭ್ಯಕರ ಸನ್ನಿವೇಶಗಳಲ್ಲಿ ಒತ್ತಾಯ ಪೂರ್ವಕವಾಗಿ ನಟಿಸುವಂತೆ ಮಾಡಲಾಗುತ್ತದೆ. ಬಹುಭಾಷಾ ನಟಿ ಸದಾ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತಮಗೆ ಎದುರಾದ ಇಂತಹ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.


ನನಗೆ ಈಗಲೂ ಆ ಸನ್ನಿವೇಶವನ್ನು ನೆನಪಸಿಕೊಂಡರೆ ಇರಿಸುಮುರಿಸು ಎನಿಸುತ್ತದೆ” ಎಂದಿದ್ದಾರೆ. 20 ವರ್ಷಗಳ ಹಿಂದೆ ಬಂದ ‘ಜಯಂ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದು ಸದಾ ನಟಿಸಿದ ಮೊದಲ ಸಿನಿಮಾ. ರಾತ್ರೋರಾತ್ರಿ ಸ್ಟಾರ್ ನಟಿಯ ಪಟ್ಟಕ್ಕೇರಿದ ಸದಾ ಆ ಬಳಿಕ ಹಿಂತಿರುಗಿ ನೋಡಲೇಯಿಲ್ಲ. ತಮಿಳು, ತೆಲುಗಿನ ಸ್ಟಾರ್ ನಟರ ಜೊತೆಗೆ ನಟಿಸಿ ಸೈ ಎನಿಸಿಕೊಂಡರು.ಸದ್ಯ ನಾಯಕಿಯಾಗಿ ಸದಾಗೆ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಕಿರುತೆರೆ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಮಿಂಚುತ್ತಿದ್ದಾರೆ. ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ತಮ್ಮ ಜೀವನದ ಬಗ್ಗೆ ತಾವು ನಟಿಸಿದ ಸಿನಿಮಾಗಳನ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.   

ಇನ್ನು ಸದಾ ಮದುವೆ ಯಾವಾಗ? ಎನ್ನುವ ಪ್ರಶ್ನೆಗಳು ಕು ಎದುರಾಗುತ್ತಿರುತ್ತದೆ.ಅದಕ್ಕೆ ಖಡಕ್ ಆಗಿಯೇ ಆಕೆ ಉತ್ತರ ನೀಡುತ್ತಿದ್ದಾರೆ. ‘ಜಯಂ’ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅದರಲ್ಲೂ ‘ರಾನು ರಾನಂಟುಂದೆ ಚಿನ್ನದೋ’ ಸಾಂಗ್ ಸೂಪರ್ ಹಿಟ್ ಆಗಿತ್ತು. ‘ವೆಳ್ಳವಯ್ಯ ವೆಳ್ಳು’ ಎನ್ನುವ ಸದಾ ಸ್ಟೈಲ್ ವೈರಲ್ ಆಗಿತ್ತು. ಇನ್ನು ಆ ಚಿತ್ರದ ಒಂದು ಸನ್ನಿವೇಶದ ಬಗ್ಗೆ ಇವತ್ತಿಗೂ ಆಕೆಗೆ ಬೇಸರವಿದೆಯಂತೆ. ನಾಯಕ ನಿತಿನ್‌ನನ್ನು ಭೇಟಿಯಾಗಲು ಆಕೆ ದೇವಸ್ಥಾನಕ್ಕೆ ಬರುವ ಸನ್ನಿವೇಶ ಅದು. ಯಾರಿಗೂ ಗೊತ್ತಾಗದಂತೆ ನಿತಿನ್ ಅವಳನ್ನು ಭೇಟಿಯಾಗುತ್ತಾನೆ.

ಆದರೆ ಇಬ್ಬರು ವಿಲನ್ ಗೋಪಿಚಂದ್ ಎದುರು ಸಿಕ್ಕಿ ಬೀಳ್ತಾರೆ. ಆ ಸನ್ನಿವೇಶದಲ್ಲಿ ರಾಕ್ಷಸಾನಂದ ಪಡುವ ಗೋಪಿಚಂದ್ ನಾಯಕಿ ಸದಾ ಕೆನ್ನೆಯನ್ನು ತನ್ನ ನಾಲಿಗೆಯಿಂದ ಅಸಹ್ಯವಾಗಿ ನೆಕ್ಕುತ್ತಾರೆ. ಆದರೆ ಈ ಸನ್ನಿವೇಶ ಚಿತ್ರೀಕರಣದ ವೇಳೆ ನಟಿ ಸದಾ ಬಹಳ ಇರಿಸು ಮುರಿಸು ಅನುಭವಿಸಿದ್ದರಂತೆ. ನಾನು ನಟಿಸೋದಿಲ್ಲ ಎಂದರಂತೆ. ನಾನು ಈ ಸಿನಿಮಾದಲ್ಲಿ ನಟಿಸೋದಿಲ್ಲ ಎಂದರು ನಿರ್ದೇಶಕ ತೇಜಾ ಕೇಳಲಿಲ್ಲವಂತೆ.

ನೀನು ಈ ಸನ್ನಿವೇಶದಲ್ಲಿ ನಟಿಸಿದ್ರೆ ಅದು ಹೈಲೆಟ್ ಆಗುತ್ತದೆ ಎಂದು ಒತ್ತಾಯ ಮಾಡಿದ್ದರಂತೆ. ಮನೆಗೆ ಹೋಗಿ ಬಹಳ ಅತ್ತಿದ್ದ ಸದಾ ಸಾಕಷ್ಟು ಬಾರಿ ಮುಖ ತೊಳೆದುಕೊಂಡಿದ್ದರಂತೆ. ಇವತ್ತಿಗೂ ಆ ಸಿನಿಮಾ ನೋವುವಾಗ ಆ ಸನ್ನಿವೇಶವನ್ನು ಸ್ಕಿಪ್‌ ಮಾಡಿಬಿಡುತ್ತಾರಂತೆ. ಒಟ್ನಲ್ಲಿ ಸದಾ ಹೇಳಿಕೆ ಸಖತ್ ವೈರಲ್ ಆಗ್ತಿದೆ.