ದರ್ಶನ್ ಮೇಲೆ ಬೀಳುತ್ತಾ ರೌಡಿ ಶೀಟರ್ ಕೇಸ್ ! ಈ ಕೇಸ್ ಬಗ್ಗೆ ರಂಗಣ್ಣ ಹೇಳೋದು ಏನು ಗೊತ್ತಾ?

ದರ್ಶನ್ ಮೇಲೆ ಬೀಳುತ್ತಾ ರೌಡಿ ಶೀಟರ್ ಕೇಸ್ ! ಈ ಕೇಸ್ ಬಗ್ಗೆ ರಂಗಣ್ಣ ಹೇಳೋದು ಏನು ಗೊತ್ತಾ?

ಕನ್ನಡದ ನಟ ದರ್ಶನ್ ಸದ್ಯ ಮಹತ್ವದ ಕಾನೂನು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆ.  ಜೂನ್ 2024 ರಲ್ಲಿ, ರೇಣುಕಾ ಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಅವರನ್ನು ಬಂಧಿಸಲಾಯಿತು.  ದರ್ಶನ್ ಮತ್ತು ಇತರ ಹತ್ತು ಮಂದಿ ಪಟ್ಟಣಗೆರೆಯ ಶೆಡ್‌ನಲ್ಲಿ ಸ್ವಾಮಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ, ಇದು ಸ್ವಾಮಿಯ ಸಾವಿಗೆ ಕಾರಣವಾಯಿತು.  ವರದಿಗಳ ಪ್ರಕಾರ, ಈ ಕೃತ್ಯದ ಹಿಂದಿನ ಉದ್ದೇಶವೆಂದರೆ, ದರ್ಶನ್ ಅವರ ಎರಡನೇ ಪತ್ನಿ  ಪವಿತ್ರ ಗೌಡ ಅವರಿಗೆ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು ಎನ್ನಲಾಗುತ್ತಿದೆ. ಹಿಂದಿನ ಆರೋಪಗಳನ್ನು ಒಳಗೊಂಡಂತೆ ನಟನನ್ನು ಒಳಗೊಂಡ ವಿವಾದಗಳ ಸರಣಿಯಲ್ಲಿ ಈ ಘಟನೆ ಎಲ್ಲದಕ್ಕಿಂತ ಹೆಚ್ಚು ಸದ್ದು ಮಾಡುತ್ತಿದೆ ಎಂದು ಹೇಳಬಹುದು. 

ಈಗ ಕೊಲೆ ಆಗಿರುವ ರೇಣುಕಾ ಸ್ವಾಮಿ ಅವರ ಕುಟುಂಬ ಕೊಡ ಬಹಳ ಸಿಡಿದೆದಿದ್ದು ನಮಗೆ ಪರಿಹಾರ ಎಂದು ಯಾವ ಹಣವು ಬೇಡ ಅದ್ರ ಬದಲಿಗೆ ಈ ಪ್ರಕರಣದಲ್ಲಿ ಭಾಗಿ ಆಗಿರುವ ಎಲ್ಲರಿಗೂ ಕೊಡ ಸರಿಯಾದ ಶಿಕ್ಷೆ ಆಗುಬೇಕು ಎಂದು ಮಾದ್ಯಮಗಳಲ್ಲಿ ಮನವಿ ಮಾಡಿದ್ದಾರೆ. ಇನ್ನೂ ಮನೆಯ ಆಧಾರ ಸ್ತಂಭವಾಗಿ ಇದ್ದ ರೇಣುಕಾ ಸ್ವಾಮಿ ಅಪೋಲೋ ಆಸ್ಪತ್ರೆಯಲ್ಲಿ ಮೆಡಿಕಲ್ ನಲ್ಲಿ ಕೆಲ್ಸ ಮಾಡುತ್ತಿದ್ದನು ಇನ್ನೂ ಆತನಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು ಇನ್ನೂ ಇದೆ ತಿಂಗಳ 28ಕ್ಕೇ ತನ್ನ ಮೊದಲನೇ ವಾರ್ಷಿಕೋತ್ಸವ ಕೊಡ ಆಚರಿಸಿಕೊಳ್ಳಬೇಕಿತ್ತು. ಈಗ ಹೆಂಡತಿ 3ತಿಂಗಳ ಗರ್ಭಿಣಿ ಆಗಿದ್ದು ಈ ಸಮಯದಲ್ಲಿ ಈ ಕುಟುಂಬ ತನ್ನ ಆಧಾರ ಸ್ತಂಭವನ್ನು ಕಳೆದುಕೊಂಡು ದುಃಖದ ಮಡಿಲಿನಲ್ಲಿ ಇದೆ ಎಂದು ಹೇಳಬಹುದು.

ಈಗಾಗಲೇ ದರ್ಶನ್ ಅವ್ರ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇತ್ತ ರಮ್ಯಾ ಕೊಡ ದರ್ಶನ್ ತಪ್ಪಿತಸ್ಥ ಎಂದು ಸಾಭೀತು  ಆದ್ರೆ ಆತನಿಗೆ ಹಾಗೂ ಆತನ ಜೊತೆ ಕೈ ಜೋಡಿಸಿ ಇರುವವರಿಗೆಲ್ಲಾ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆಯನ್ನು ವಿಧಿಸಬೇಕು ಎಂದು ಟ್ವಿಟ್ ಮಾಡಿದ್ದನ್ನು ರಮ್ಯಾ ಕೊಡ ಮರು ಟ್ವಿಟ್ ಮಾಡಿದ್ದಾರೆ. ಇನ್ನೂ ಕೆಲವರು ದರ್ಶನ್ ಅವರ ಮೇಲೆ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದ್ದು ಈಗ ಕೊಲೆಯ ಮಟ್ಟಿಗೆ ಹೋಗಿದೆ ಎಂದ್ರೆ ಅವರನ್ನು ಸಿನಿಮಾ ರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ಸಂಘಗಳು ಪ್ರತಿಭಟನೆ ಮಾಡಲಾಗುತ್ತಿದೆ. ಇನ್ನೂ ಅಭಿಮಾನಿಗಳು ಹಾಗೂ ಸಹಚರರು ಇದು ಕೇವಲ ಆರೋಪ ಅಷ್ಟೇ ಅವರಿನ್ನೂ ಅಪರಾಧಿ   ಎಂದು ಸಾಭೀತು ಆಗಿಲ್ಲ ಎಂದು ವಹಿಸಿಕೊಂಡು ಮಾತನಾಡುತ್ತಿದ್ದಾರೆ.   

ಇದುವರೆವಿಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೆ ಹಿಂದೆ ಇವರು ಯಾವೆಲ್ಲ ಅಪರಾಧ ಮಾಡಿದ್ದಾರೆ ಅಂತ ಪೊಲೀಸರು ಪರಿಶೀಲಿಸುತ್ತಿದ್ದಾರೆ ಅಂತ ತಿಳಿದು ಬಂದಿದೆ . ಒಂದು ವೇಳೆ ಇವರು ಪದೇ ಪದೇ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿ ಕೊಂಡಿದ್ದರೆ ಅಂತಹವರ ವಿರುದ್ಧ ರೌಡಿ ಶೀಟರ್ ಅಂತ ಕೇಸ್ ಹಾಕುತ್ತಾರೆ ಅಂತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ

ನ್ಯೂಸ್ ಚಾನಲ್ ಗಳಲ್ಲಿ ಕೊಡ ಸಾಕಷ್ಟು ವಿಭಿನ್ನ ಮಾದರಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ದರ್ಶನ್ ಅವರಿಗೆ ಯಾವ ತಿರುವು ಸಿಗಲಿದೆ ಎಂದು ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ದರ್ಶನ್ ಅವರ ಪರ ವಾದ ಮಾಡುತ್ತಿರುವ ವಕೀಲರು ಕೊಡ ಅವರಿಗೆ ಪೊಲೀಸರು ಬಂದು ಹೇಳಿದಾಗ ಆತನ ಕೊಲೆಯ ಬಗ್ಗೆ ತಿಳಿದಿದ್ದು ಎಂದು ಮಾದ್ಯಮಗಳ ಮುಂದೆ ತಿಳಿಸಿದ್ದಾರೆ. ಇನ್ನೂ ಮಾದ್ಯಮಗಳ ಆತನ ಮೇಲೆ 15ಬಾರಿ ದಾಳಿ ಮಾಡಿದ್ದು ಎಂದಾಗ ಅವರು ತೊಟ್ಟಿಯ ಬಳಿ ಇದ್ದ ಕಾರಣ ಅಲ್ಲಿರುವ ನಾಯಿಗಳಿಂದಲು ಕೊಡ ದಾಳಿ ಆಗಿದೆ ಇನ್ನೂ ಯಾರಾದ್ರೂ ಕೊಡ ಹೊಡೆದು ತಂದು ಹಾಕಿರಬಹುದು ಈ ಇಷ್ಟೇ ಸಾಕ್ಷಿಗಳನ್ನು ನೀವು ಇಟ್ಟು ಕೊಂಡು ದರ್ಶನ್  ಅವರನ್ನು ಅಪರಾಧಿ ಮಾಡಬೇಡಿ ಎಂದು ತಿಳಿಸಿದ್ದಾರೆ. ಇತ್ತ ದರ್ಶನ್ ಮನೆಯವರು ಮೌನಕ್ಕೆ ಶರಣಾಗಿದ್ದಾರೆ.