ದರ್ಶನ್ ಪರ ನಿಂತ ರಕ್ಷಕ್ ಬುಲೆಟ್ ಆಡಿಯೋ ವೈರಲ್! ಏನು ಹೇಳಿದ್ದಾರೆ ನೋಡಿ?

ದರ್ಶನ್ ಪರ ನಿಂತ ರಕ್ಷಕ್ ಬುಲೆಟ್ ಆಡಿಯೋ ವೈರಲ್! ಏನು ಹೇಳಿದ್ದಾರೆ ನೋಡಿ?

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗೆ ಮಹತ್ವದ ಬೆಳವಣಿಗೆಗಳು ಹೊರಬಿದ್ದಿವೆ.  ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಪತ್ನಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ.  ರೇಣುಕಾ ಸ್ವಾಮಿ ಅವರು ಪವಿತ್ರಾ ಅವರಿಗೆ ನಿಂದನೀಯ ಸಂದೇಶಗಳನ್ನು ಕಳುಹಿಸಿದ ನಂತರ ದರ್ಶನ್ ಅವರು ತಮ್ಮ ಪ್ರಭಾವ ಮತ್ತು ಅಭಿಮಾನಿಗಳ ಸಂಘದ ಸದಸ್ಯರನ್ನು ಬಳಸಿಕೊಂಡು ಅಪರಾಧವನ್ನು ಕಾರ್ಯಗತಗೊಳಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈಗ 13ಜನ ಆರೋಪಿಗಳು ಕೊಡ ಸೆರೆವಾಸದಲ್ಲಿ ಇದ್ದು ಜೂಲೈ 4ರ ವರೆಗೂ  ಕೋರ್ಟ್ ಅವರನ್ನು ಬಂಧನಲ್ಲಿ ಇಡುವಂತೆ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ ಮಾಡಲಾಗಿದೆ.


 ರೇಣುಕಾ ಸ್ವಾಮಿ ಕೊಲೆ ಪ್ರಕರಣ-401625
 ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಅಪರಾಧದ ಸ್ಥಳದಲ್ಲಿ ದರ್ಶನ್ ಅವರ ಕಾರನ್ನು ತೋರಿಸಲಾಗುತ್ತಿದೆ ಮತ್ತು ದರ್ಶನ್ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಿರುವುದಾಗಿ ಅನೇಕ ಶಂಕಿತರು ಒಪ್ಪಿಕೊಂಡಿದ್ದಾರೆ. ಆದರೆ ಈ ವರೆಗೂ ದರ್ಶನ್ ವಿರುದ್ಧ ಯಾವ ಸಾಕ್ಷಿಯೂ ಸಿಕ್ಕಿಲ್ಲ. ದರ್ಶನ್, ಪವಿತ್ರಾ ಮತ್ತು ಹಲವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದ್ದು, ಮತ್ತಷ್ಟು ಶಂಕಿತರನ್ನು ಪೊಲೀಸರು ಹುಡುಕುತ್ತಿದ್ದಾರೆ. ಈಗ ಸೆಲೆಬ್ರಿಟಿಗಳು ಒಬ್ಬರಾಗಿ ದರ್ಶನ್ ಪರ ಹಾಗೂ ವಿರುದ್ಧದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.     

ಇನ್ನೂ ಯೋಗಾ ದಿನ ಮಾತನಾಡಿದ ಮಾಲಾಶ್ರೀ ಮಗಳು ಕೊಡ ಯಾವ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದರೆ ಇತ್ತಾ ಡಾಲಿ ಧನಂಜಯ್ ಕೊಡ ನಿರಾಕರಣೆಯನು ವ್ಯಕ್ತ ಮಾಡಿದರು. 

ಇದೀಗ ರಕ್ಷಕ್ ಬುಲೆಟ್ ಅವ್ರ ದರ್ಶನ ಬಗ್ಗೆ ಮಾತನಾಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು. ರಕ್ಷಕ ಬುಲೆಟ್  ಅವರು  ದರ್ಶನ  ತನ್ನ ಹೃದಯಕ್ಕೆ  ಹತ್ತಿರವಾಗಿದ್ದರು  ಕಷ್ಟದಲ್ಲಿ ಇದ್ದಾರೆ ಹಾಗಾಗಿ ನಾನು ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಇದೀಗ ಪತ್ರಕರ್ತನ ಜೊತೆ ಮಾತನಾಡಿರುವ ರಕ್ಷಕ್ ಬುಲೆಟ್ ಅವರು ನಾನು ಸದಾ ಡಿ ಬಾಸ್ ಜೊತೆಗೆ ನಿಲ್ಲಲು ಇಷ್ಟ ಪಡುತ್ತೇನೆ ಅವರನ್ನು ನಾನು ಬಿಟ್ಟು ಕೊಡುವ ಮಾತೆ ಇಲ್ಲ. ಆದರೆ ಈ ಬಗ್ಗೆ ನನ್ನ ಮನೆಯಲ್ಲಿ ನನಗೆ ಪರ್ಮಿಷನ್ ಸಿಗುತ್ತಿಲ್ಲ. ನಾನು ಮನೆಯವರನ್ನು ಕೊಡ ಅವರಿಗಾಗಿ ಎದುರುಹಾಕಿ ಕೊಳ್ಳಲು ಸಿದ್ಧನಿದ್ದೇನೆ  ಒಬ್ಬ ಮನುಷ್ಯ ಕೆಳಗೆ ಬಿದ್ದ ಅಂದ್ರೆ ಅವನನ್ನು ಎಷ್ಟು ತುಳಿಯೋಕೆ ಸಾಧ್ಯವೋ ಅಷ್ಟು ತುಳಿಯುತ್ತಿದ್ದಾರೆ ಇದು ಸರಿ ಇಲ್ಲ ಎಂದು ರಕ್ಷಕ್ ಹೇಳಿದ್ದಾರೆ ಆದರೆ ಇಲ್ಲಿ ಯಾರೊಬ್ಬರಿಗೂ ಕೊಡ ಯಾವ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಆ ಕಾರಣದಿಂದ ಯಾವ ಪ್ರತಿಕ್ರಿಯೆ ನೀಡಲು ಎಲ್ಲರೂ ಹಿಂಜರಿಯುತ್ತಿದ್ದಾರೆ. ಈಗ ಅದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದ್ರೆ ಅವ್ರ ಮೇಲೆ ಗೌರವ ಇಲ್ಲ ಎಂದಲ್ಲ ಸುಮ್ಮನೆ ಊಹ ಪುಹಾ ಗಳನ್ನೂ ಸೃಷ್ಟಿ ಮಾಡುವವರ ಜೊತೆ ಹೇಳಿ ಪ್ರಯೋಜನ ಇಲ್ಲ ಎಂದಷ್ಟೇ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.