ಸ್ಪಂದನ ಈ ಕಾರಣಕ್ಕೆ ಸಾವನ್ನಪ್ಪಿದರು ಎನ್ನುವ ಜನರಿಗೆ ರಾಘು ನೋವಿನಲ್ಲೇ ಹೇಳಿದ್ದೇನು..?

ಸ್ಪಂದನ ಈ ಕಾರಣಕ್ಕೆ ಸಾವನ್ನಪ್ಪಿದರು ಎನ್ನುವ ಜನರಿಗೆ ರಾಘು ನೋವಿನಲ್ಲೇ ಹೇಳಿದ್ದೇನು..?

ಸ್ಪಂದನ ಅವರು ಅವರ ಕುಟುಂಬದವರನ್ನು ಅಗಲಿ ತಿಂಗಳುಗಳು ಕಳೆಯುತ್ತಿದೆ. ಹೌದು ಹೇಗಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಮತ್ತು ಇವರ ಕುಟುಂಬಸ್ಥರ ಬಗ್ಗೆ ಸ್ಪಂದನ ಸಾವಿನ ಕುರಿತಾಗಿ ಮತ್ತು ಅವರು ಬದುಕಿದಂತಹ ಬದುಕಿನ ನಿಜಾಂಶ ಗೊತ್ತಿಲ್ಲದೆ, ಹಾಗಂತೆ, ಹೀಗಂತೆ ಎಂದು ಸಾಕಷ್ಟು ಸುಳ್ಳು ಸುದ್ದಿಗಳು ಕೆಲವೊಂದಿಷ್ಟು ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅದರ ಕುರಿತಾಗಿ ಇತ್ತೀಚಿಗೆ ಅವರ ಪತಿ ವಿಜಯ್ ರಾಘವೇಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.

ನನ್ನ ಹೆಂಡತಿ ತುಂಬಾನೇ ಆರೋಗ್ಯವಾಗಿ, ಹೆಚ್ಚು ಸಂತೋಷವಾಗಿ ಆರಮಾಗಿ ಇದ್ದಳು, ಕೆಲವೊಂದಷ್ಟು ಜನರು ಹೇಳುವ ಮಾತುಗಳು ನನಗೆ ಕೇಳಿದವು. ಸಣ್ಣ ಆಗಿದ್ದಳು, ಕೀಟೋ ಡಯಟ್ ಮಾಡಿದ್ದಳು, ಅದನ್ನು ಮಾಡಿದ್ದಳು, ಇದನ್ನು ಮಾಡಿದ್ದಳು ಎಂಬಂತೆ ಕೆಲವು ಮಾತುಗಳು ಕೇಳಿ ಬಂದವು. ಅವೆಲ್ಲವೂ ಶುದ್ಧ ಸುಳ್ಳು. ಕೇವಲ ಎರಡು ತಿಂಗಳಲ್ಲಿ ಅಷ್ಟು ಬದಲಾವಣೆ ಆಯಿತ. 3 ವರ್ಷದಿಂದ ಪ್ರತಿದಿನ ಅವಳು ಏನು ಮಾಡುತ್ತಿದ್ದಳು, ಅದನ್ನೇ ನಾನು ಕೂಡ ಮಾಡುತ್ತಿದ್ದೇನೆ, ಎಲ್ಲರೂ ಕೂಡ ಮಾಡುತ್ತಾರೆ, ಸಣ್ಣ ಆಗಿದ್ದು ನಿಜವೆ, ಅದೇನು ದೃಷ್ಟಿ ಆಯಿತೋ ಅದು ಗೊತ್ತಿಲ್ಲ, ಯಾರಿಗೆ ತಾನೇ ನಾನು ಉತ್ತರ ಕೊಡಲಿ, ಹಾಗಂತೆ, ಹೀಗಂತೆ ಎನ್ನುವ ಸಾಕಷ್ಟು ಮಾತುಗಳು ಕೇಳಿ ಬಂದವು ಎಂದರು.   

ಈ ಜೀವನವೇ ನನಗೆ ಉತ್ತರ ಕೊಡಲು ಆಗುತ್ತಿಲ್ಲ. ನಾನು ಬೇರೆಯವರಿಗೆ ಏನು ಉತ್ತರ ಹೇಳಲಿ ಎಂದು ಹೆಂಡತಿ ಬಗ್ಗೆ ಕೆಲವರು ಆಡಿದ ಸಾವಿನ ಕುರಿತಾಗಿಯ ಮಾತುಗಳ ಬಗ್ಗೆ ಇದೀಗ ನಟ ವಿಜಯ ರಾಘವೇಂದ್ರ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಸ್ಪಂದನ ಅವರು ಯಾವ ಕೀಟೋ ಡಯಟ್ ಮಾಡಿಲ್ಲ, ಸಣ್ಣಗಾಗಲು ಶಾರ್ಟ್ ದಾರಿಯನ್ನು ಎಂದು ಹುಡುಕಿಕೊಂಡಿರಲಿಲ್ಲ. ಅವೆಲ್ಲವೂ ಸುಳ್ಳು ಕಥೆಗಳು, ಆ ಕಥೆಯಲ್ಲಿ ನಾನು ಇದ್ದೇನೆ ಎಂಬುದು ಗೊತ್ತಾದಾಗ, ಹೌದು ಇಂತಹ ಜನರಿಗೆ ನಾನೇನು ಉತ್ತರ ನೀಡಲಿ, ಏನೋ ಹೋಗುವ ಸಂದರ್ಭ ಹತ್ತಿರ ಬಂತು ಆಯ್ತು ಅಷ್ಟೇ, ಅದಕ್ಕೆ ಬೇರೆ ಬೇರೆ ಕಾರಣಗಳ ಕೊಡಬೇಡಿ, ಎಂಬಂತೆ ರಾಘು  ಹೆಂಡತಿ ಅಗಲಿಕೆಯ ನೋವಿನಲ್ಲಿಯೂ ಕೂಡ ಈ ವಿಚಾರವನ್ನು ಹೇಳಿದ್ದಾರೆ.

ಇಲ್ಲಿದೆ ನೋಡಿ ಆ ವಿಡಿಯೋ. ಹಾಗೆ ನಟ ವಿಜಯ್ ರಾಘವೇಂದ್ರ ಅವರ ಯಾವ ಸಿನಿಮಾಗಳು ಸ್ಪಂದನ ಅವರಿಗೆ ಇಷ್ಟವಾಗುತ್ತಿದ್ದವು ಎಂಬುದಾಗಿ ವಿಜಿ ಅವರೇ ಹೇಳಿದ್ದಾರೆ. ಈ ವಿಡಿಯೋ ನೋಡಿ, ಮತ್ತು ಈ ರೀತಿ ಸುದ್ದಿಗಳನ್ನು ಯಾರ ಜೀವನದಲ್ಲಿಯೂ ಕೂಡ ನೀವೂ ಬಿತ್ತರಿಸಬೇಡಿ ಎಂದು ಈ ಲೇಖನದ ಮೂಲಕ ನಾವು ನಿಮಗೆ ಕೇಳಿಕೊಳ್ಳುತ್ತಿದ್ದೇವೆ. ಈ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ, ಮತ್ತು ವಿಡಿಯೋಗೆ ಒಂದು ಮೆಚ್ಚುಗೆ ತಿಳಿಸಿ ಧನ್ಯವಾದಗಳು...