ದರ್ಶನ್ ಬಗ್ಗೆ ಟ್ವಿಟ್ ಮಾಡಿದ ರಚಿತಾ ರಾಮ್! ಈ ನಟಿ ಹೇಳಿದ್ದೇನು ಗೊತ್ತಾ?

ದರ್ಶನ್ ಬಗ್ಗೆ ಟ್ವಿಟ್ ಮಾಡಿದ ರಚಿತಾ ರಾಮ್! ಈ ನಟಿ ಹೇಳಿದ್ದೇನು ಗೊತ್ತಾ?

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಪತ್ನಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ.  ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಉದ್ಯೋಗಿಯಾಗಿರುವ 33 ವರ್ಷದ  ರೇಣುಕಾ ಸ್ವಾಮಿ ಪವಿತ್ರಾ ಅವರಿಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದರು, ಇದು ಅವರ ಕೊಲೆಗೆ ಕಾರಣವಾಯಿತು ಎಂದು ವರದಿಯಾಗಿದೆ. ಇನ್ನೂ ಈವರೆಗೂ ಸಿಕ್ಕಿರುವ ಮಾಹಿತಿಯ ಪ್ರಕಾರ ರೇಣುಕಾ ಸ್ವಾಮಿ ಅವರನ್ನು ಚಿತ್ರ ದುರ್ಗದಿಂದ ಕಿಡ್ನಾಪ್ ಮಾಡಿ ಮೈಸೂರಿಗೆ ಕರೆ ತರಲಾಯಿತು. ಇನ್ನೂ ದರ್ಶನ್ ಹಾಗೂ ಪವಿತ್ರ ಅವರು ಅವರನ್ನು ಬೆದರಿಸಿ ಮುಂದೆ ಈ ರೀತಿ ಮಾಡದಂತೆ ಮಾತ್ರ ವಾರ್ನ್ ಮಾಡಿ ಬಿಟ್ಟಿದ್ದರು. 

ಇನ್ನೂ ದರ್ಶನ್ ಆಪ್ತರಾಗಿ ಅವರ ಹತ್ತಿರದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಅವ್ರು ಸಹಚರರು ಮಾಡಿರುವ ಎಡವಟ್ಟಿನಿಂದ ಆತನ ಪ್ರಾಣ ಹೋಗಿದೆ ಎಂದು ಹೇಳಲಾಗುತ್ತಿದೆ. ಆತ ಸತ್ತ ನಂತರ ಬೆಂಗಳೂರಿನ ಸುಮನಹಳ್ಳಿ ಸೇತುವೆ ಬಳಿ ಸ್ವಾಮಿ ಅವರ ಮೃತದೇಹ ಪತ್ತೆಯಾಗಿದ್ದು, ಭಾರೀ ಗಾತ್ರದ ವಸ್ತುವಿನಿಂದ ಹಲ್ಲೆಗೆ ಒಳಗಾದ ಹಲವು ಗಾಯಗಳಿರುವ ಘಟನೆ ಬೆಳಕಿಗೆ ಬಂದಿದೆ.  ಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಕೊಲೆ ಮಾಡಲಾಗಿದ್ದು, ದರ್ಶನ್ ಮತ್ತು ಆತನ ಸಹಚರರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  

ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಮೂವರು ಶಂಕಿತರು ಒಪ್ಪಿಕೊಂಡಿದ್ದಾರೆ.

ಈಗ ಸದ್ಯದಲ್ಲಿ ಸ್ಥಳ ಮಹಜರು ಕೊಡ ನಡೆಯುತ್ತಿದ್ದು ಮುಂದೆ ಈ ಪ್ರಕರಣಕ್ಕೆ ಯಾವ ತಿರುವು ಸಿಗಲಿದೆ ಎಂದು ಕಾದು ನೋಡಬೇಕಿದೆ. ಇದೀಗ ರಚಿತಾ ರಾಮ್ ಅವರು ಈ ಪ್ರಕರಣಕ್ಕೆ ಟ್ವಿಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಈಗ ವೈರಲ್ ಆಗಿದ್ದಾರೆ. ಇನ್ನೂ ತಮ್ಮ ಟ್ವಿಟರ್ ನಲ್ಲಿ ನಾನು ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ನೂವನ್ನು ಭರಿಸುವ ಶಕ್ತಿ ಕೊಡಲಿ ಎಂದು ಕೋರಿಕೊಳ್ಳುತ್ತೇನೆ. ಹಾಗೆಯೇ ನನ್ನ ಗುರುಗಳಾಗಿ ನನ್ನನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿದ ದರ್ಶನ್ ಸರ್ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎಂದು  ನಂಬಲು  ಸಾಧ್ಯವಿಲ್ಲ  ಆದ್ರೆ ಈ ವಿಚಾರದಲ್ಲಿ ಪೊಲೀಸರು ನಿಷ್ಠೆಯಿಂದ ಕೆಲಸ ಮಾಡಿ ಯಾವ ಒತ್ತಡಕ್ಕೂ ಸಿಲುಕದೆ ನ್ಯಾಯ ನೀಡಬೇಕು ಎಂದು ತಿಳಿಸಿದ್ದಾರೆ.