ದರ್ಶನ್ ಮೇಲೆ ಚಾರ್ಜ್ ಶೀಟ್ ಹಾಕಲು ನಡೆಸಿರುವ ಪೊಲೀಸರು! ಜೀವಾವಧಿ ಶಿಕ್ಷೆ ಫಿಕ್ಸ್ ?

ದರ್ಶನ್ ಮೇಲೆ ಚಾರ್ಜ್ ಶೀಟ್ ಹಾಕಲು ನಡೆಸಿರುವ ಪೊಲೀಸರು! ಜೀವಾವಧಿ ಶಿಕ್ಷೆ ಫಿಕ್ಸ್ ?

ಕನ್ನಡ ನಟ ದರ್ಶನ್ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾ ಸ್ವಾಮಿ, ದರ್ಶನ್ ಅಭಿಮಾನಿಯಾಗಿದ್ದು, ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಆರೋಪವಿದೆ. ಪವಿತ್ರಾ ಗೌಡ ಅವರು ದರ್ಶನ್  ಅವರಿಗೆ ಈ ವಿಚಾರ ತಿಳಿಸಿದ್ದಾಗಿ ತಿಳಿದುಬಂದಿದೆ. ನಂತರ, ದರ್ಶನ್ ಅವರ ಸಹಾಯಕರಿಗೆ ರೇಣುಕಾ ಸ್ವಾಮಿ ಅವರನ್ನು ಹತ್ಯೆ ಮಾಡಲು ಸೂಚನೆ ನೀಡಿದ್ದು, ಇದು ಘಟನೆಯೆಂದು ಪೊಲೀಸರು ತಿಳಿಸಿದ್ದಾರೆ. ರೇಣುಕಾ ಸ್ವಾಮಿ ಅವರನ್ನು ಬೆಂಗಳೂರು ನಗರಕ್ಕೆ ಕರೆತಂದು, ದರ್ಶನ್ ಅವರ ಅಭಿಮಾನಿ ಕ್ಲಬ್ ಅಧ್ಯಕ್ಷ ರಘವೇಂದ್ರ ಅವರಿಂದ ಹಲ್ಲೆ ಮಾಡಲಾಯಿತು ಮತ್ತು ಕೊಲೆ ಮಾಡಲಾಯಿತು. 

ದರ್ಶನ್ ಮತ್ತು ಮತ್ತೋರ್ವ ಪವಿತ್ರಾ ಗೌಡ  ಸೇರಿದಂತೆ ಇತರ ಹದಿನೇಳು ಆರೋಪಿಗಳು ಜುಲೈ 4ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಾಳೆ ಇವರ ಕೋರ್ಟ್ ತೀರ್ಮಾನ ಇದ್ದು ಪೊಲೀಸರು ಸಿದ್ದ ಪಡಿಸಿರುವ ಚಾರ್ಜ್ ಶೀಟ್ ನಲ್ಲಿ ಯಾರೆಲ್ಲ ಹೆಸರು ಹಾಗೂ ಹೆಸರುಗಳ ಜೊತೆ ಅವರ ವಿರುದ್ಧ ಸಾಕ್ಷಿ ಸಮೇತ ಪ್ರಕರಣಗಳ ಬಗ್ಗೆ ತಿಳಿಸುವ ನಂತರ ಅದಕ್ಕೆ ತಕ್ಕಂತೆ ಶಿಕ್ಷೆಯನ್ನು ವಿಧಿಸಲಾಗುವುದು. ಇನ್ನೂ ದರ್ಶನ್ ಅವರ ವಿರುದ್ಧ ಈ ಕೇಸ್ ನಲ್ಲಿ ಸಿಲುಕಿಕೊಂಡರೆ ಈಗ ಜೂಲೈ ಒಂದರಿಂದ ಜಾರಿಯಲ್ಲಿ ಇರುವ ಹೊಸ ರೂಲ್ಸ್ ಪ್ರಕಾರ ಇವರಿಗೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ವಿಧಿಸಲಾಗುವುದು. ಆಕಸ್ಮಾತ್ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿ ಹೊರ ಬಂದರು ಕೊಡ ಅವರ ಪಾಸ್ ಪೋರ್ಟ್ ರದ್ದು ಮಾಡಲಾಗುವುದು.  

ಇನ್ನೂ ಮುಂದೆ ದರ್ಶನ್ ಸಿನಿಮಾ ನಿರ್ಮಾಪಕರಿಗೆ ನಿರ್ದೇಶಕರಿಗೆ ಇದೆಲ್ಲವೂ ತಲೆ ಬಿಸಿಯಾಗಿದ್ದು ಮುಂದೆ ಬರುವ ಎಲ್ಲಾ ಚಿತ್ರಗಳು ಕೊಡ ಭಾರತದಲ್ಲಿ ಮಾಡಬೇಕು ಹಾಗೆಯೇ ವಿದೇಶಕ್ಕೆ ಹೋಗುವ ಮುನ್ನ ಸಾಕಷ್ಟು ಷರತ್ತುಗಳ ನಡುವೆ ಹೋಗಬೇಕು. ಇನ್ನೂ ದರ್ಶನ್ ಭವಿಷ್ಯ ನಾಳೆ ನಿರ್ಧಾರ ಆಗಲಿದ್ದು ಎಲ್ಲರೂ ಕೊಡ ಅಷ್ಟೇ ಕಾತುರತೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಈಗ ಒಬ್ಬರಾಗಿ ದರ್ಶನ್ ಅವರನ್ನು ನೋಡಲು ಅವರ ಆಪ್ತರು ಹಾಗೂ ನೆನ್ನೆ ಅವರ ತಾಯಿ ಹಾಗೂ ತಮ್ಮ ಕೊಡ ಬಂದಿದ್ದು 45ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈಗ ದರ್ಶನ್ ಅವರು ಅಲ್ಲಿ ಇರುವ ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದಾರೇ ಎಂದು ಹೇಳಲಾಗುತ್ತಿದೆ.

 ( video credit : Insight Kannada )