ಇಂದಿಗೂ ಬೈಟು ಶೇರ್ ಮಾಡಿ ಊಟ ಮಾಡುವ ಪರಿಸ್ಥಿತಿ ನಮ್ಮದು ಎಂದ ಖ್ಯಾತ ನಟ! ಆ ನಟ ಯಾರು ಗೊತ್ತಾ?

ಇಂದಿಗೂ ಬೈಟು ಶೇರ್ ಮಾಡಿ ಊಟ ಮಾಡುವ ಪರಿಸ್ಥಿತಿ ನಮ್ಮದು ಎಂದ ಖ್ಯಾತ ನಟ! ಆ ನಟ ಯಾರು ಗೊತ್ತಾ?

ಕಲಾವಿದರ ಬದುಕು ತೆರೆಯ ಮೇಲೆ ತೋರಿಸುವಷ್ಟು ಸುಂದರವಾಗಿ ಇರುವುದಿಲ್ಲ. ಈ ಬಣ್ಣದ ಲೋಕದಲ್ಲಿ ಕೆಲ್ಸ ಮಾಡುತ್ತಿದ್ದ ಅದೆಷ್ಟು ಜನರ ಬಾಳಿನಲ್ಲಿ ಬಣ್ಣವೇ ಇಲ್ಲದಂತೆ ಕತ್ತಲಿನಲ್ಲಿ ಕವಿದು ಕಪ್ಪು ಬಣ್ಣದಲ್ಲಿ ನರಳುವಂತೆ ಆಗಿರುತ್ತದೆ. ಆದ್ರೆ ಅವರ ಜೀವನದಲ್ಲಿ  ಅದೆಷ್ಟೋ ಕಷ್ಟ ಬಂದರೂ ಕೂಡ ತೆರೆಯ ಮೇಲೆ ತಮ್ಮ ಎಲ್ಲಾ ನೋವನ್ನು ಮರೆತು ನಕ್ಕು ನಗಿಸುತ್ತಾ ಇರುತ್ತಾರೆ ಎನ್ನುವುದು ಅಕ್ಷರಸರ ಸತ್ಯ ಎಂದರೆ ತಪ್ಪಾಗಲಾರದು. ಇನ್ನು ನಮ್ಮ ಬಣ್ಣದ ಲೋಕದಲ್ಲಿ ಇರುವ ಸಾಕಷ್ಟು ಕಲಾವಿದರು ತಮ್ಮ ದಿನ ನಿತ್ಯದ ಜೀವನದಲ್ಲಿ ಇಂದಿಗೂ ಸಂಕಷ್ಟದಲ್ಲಿ ಮೇಳುಗಿದ್ದಾರೆ  ಆದರೆ ತೆರೆಯ ಮೇಲೆ ತಮ್ಮ ನಿಚ್ಚಿನ ಪ್ರೇಕ್ಷಕರನ್ನು ನಗಿಸುವದರಲ್ಲಿ ಕೊಂಚವೂ ವಿಫಲವಾಗುವುದಿಲ್ಲ. ಇಂದು ವಾರದ ಅಂತ್ಯದಲ್ಲಿ "ಪಾಪ ಪಾಂಡು" ಖ್ಯಾತಿಯ "ಚಿದಾನಂದ" ಅವರು ಹೇಳಿದ ಮಾತು ಅದೆಷ್ಟೋ ಜನರ ಕಣ್ಣಂಚಲ್ಲಿ ನೀರು ತರಿಸುವಂತೆ ಮಾಡಿತ್ತು.

ಇನ್ನೂ ಪಾಪ ಪಾಂಡು ಹೆಸರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಈ ಹೆಸರು ಕೇಳಿದರೆ ಇಂದಿಗೂ ಎಲ್ಲರ ಮುಖದಲ್ಲಿ ಒಂದು ಸಂತೋಷ ವ್ಯಕ್ತ ವಾಗುವಂತ ಧಾರಾವಾಹಿ ಎಂದ್ರೆ ತಪ್ಪಾಗಲಾರದು . ಇನ್ನೂ ಈ ತಮಾಷೆಯ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ 2010 ರಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ. ಇನ್ನೂ ಈ ಧಾರಾವಾಹಿಯನ್ನು ಎಲ್ಲಾ ವಯೋಮಿತಿ ಇಲ್ಲದೆ ನೀಡುತ್ತಿದ್ದ ಏಕೈಕ ಧಾರಾವಾಹಿ ಎಂದರೆ ತಪ್ಪಾಗಲಾರದು. ಇನ್ನೂ ಇಂದಿಗೂ ಕೂಡ ಈ ಧಾರಾವಾಹಿಯನ್ನು ಮರಿ ಪ್ರಸಾರ ಮಾಡಿದರು ಕೂಡ ಮನೆ ಮಂದಿ ಎಲ್ಲರೂ ಬೇಸರವಿಲ್ಲದೆ ನೋಡುವಂಥ ಅದ್ಬುತ ಮನೋರಂಜನೆ ತುಂಬಿದ್ದ ಧಾರಾವಾಹಿ. ಈ ಧಾರಾವಾಹಿ ಆದ ಬಳಿಕ ಚಿದಾನಂದ ಅವರು ಆಗಾಗ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆ ಬಳಿಕ ಅವರ ನಟನೆಗೆ ಛಾಪು ಕಳೆದುಕೊಂಡು ಅವರ ಬೇಡಿಕೆ ಕೂಡ ಕುಗ್ಗಿತ್ತು.    

ಅದೇಷ್ಟೋ ವರ್ಷಗಳ ಬಳಿಕ ಚಿದಾನಂದ ಅವರು ಮತ್ತೆ ಕಿರುತೆರೆಯ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕಳೆದ ವಾರದಲ್ಲಿ ಶುರುವಾದ ಜೋಡಿ ನಂಬರ್ ಒನ್ ಸೀಸನ್ 2 ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಇನ್ನೂ ಇದರಲ್ಲಿ ಚಿದಾನಂದ ಅವರು ತಮ್ಮ ವಯಕ್ತಿಕ ಜೀವನದ ಬಗ್ಗೆ ತಿಳಿಸಿದ ವೇಳೆ ಎಲ್ಲರಲ್ಲೂ ಕಣ್ಣಂಚಲ್ಲಿ ನೀರು ತುಂಬಿಸಿತ್ತು. ಇನ್ನೂ ಚಿದಾನಂದ ಅವರು ತಮ್ಮ ಜೀವನವನ್ನು ನಡೆಸಲು ತಮಗೆಂದು ಇದ್ದ ಸ್ವಂತ ಮನೆಯನ್ನು ಕೊಡ ಮಾರಿದ್ದಾರೆ. ಇಂದಿಗೂ ಕೂಡ ತಮ್ಮ ಸಂಪಾದನೆಯಲ್ಲಿ ಊಟ ಮಾಡಲು ಹಿಂದೂ ಮುಂದು ನೋಡುತ್ತಾರೆ. ಈ ಬಾರಿಯೂ ಕೂಡ ತಮ್ಮ ಹೆಂಡತಿ ತಮ್ಮ ಕೈಯಾರೆ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಮಾರಿ ಜೀವನ ನಡೆಸುತ್ತೇವೆ ಎಂದು ತಿಳಿಸಿದರು. ತೆರೆಯ ಮೇಲೆ ಎಲ್ಲರನ್ನೂ ನಕ್ಕು ನಗಿಸುವ ಚಿದಾನಂದ ಅವರ ಬಾಳು ಎಷ್ಟು ದುಖಮಯವಾಗಿ ತುಂಬಿದೆ ಎಂದು ಎಲ್ಲರೂ ಕೂಡ ಮರುಗಿದರು. ( videocredit ; mast cinema )