ಬೇಬಿ ನನ್ನ ಬಿಟ್ಟು ಹೋದಳು ಎಂದು ನರೇಶ್ ಕಣ್ಣೀರು! ಕೈ ಕೊಟ್ರಾ ನಟಿ ಪವಿತ್ರಾ ಲೋಕೇಶ್?

ಬೇಬಿ ನನ್ನ ಬಿಟ್ಟು ಹೋದಳು ಎಂದು ನರೇಶ್ ಕಣ್ಣೀರು! ಕೈ ಕೊಟ್ರಾ ನಟಿ ಪವಿತ್ರಾ ಲೋಕೇಶ್?

ಪವಿತ್ರಾ ಲೋಕೇಶ್ ಭಾರತೀಯ ಚಿತ್ರನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾದವರು. ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರ ನಾಟಕೀಯ ಅಭಿನಯ ಮತ್ತು ಪ್ರಸ್ತುತಿಕೆಯಿಂದ ಪ್ರಖ್ಯಾತಿಯಾಗಿದ್ದಾರೆ. ನಟ ನರೇಶ್ ಜೊತೆಗೆ ಇತ್ತೀಚೆಗೆ ಮದುವೆಯಾದರು, ಮತ್ತು ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಬಗ್ಗೆ ಸುದ್ದಿಯಲ್ಲಿದ್ದಾರೆ. ಇನ್ನು ನಟ ನರೇಶ್ ಕೊಡ  ವಿಜಯ ಕೃಷ್ಣ, ಜನಪ್ರಿಯ ತೇಲುಗು ಚಿತ್ರನಟ ಮತ್ತು ನಿರ್ಮಾಪಕ, 1960 ರಲ್ಲಿ ಜನಿಸಿದರು. ಅವರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

 ನರೇಶ್ ಅವರ ವೃತ್ತಿಜೀವನದಲ್ಲಿ ತೇಲುಗು ಚಿತ್ರರಂಗದಲ್ಲಿ ಹೆಸರಾಗಿದ್ದಾರೆ. ಅವರ ಅಭಿನಯ ಮತ್ತು ಪಾತ್ರಗಳ ಮೂಲಕ ಅವರು ಬಹುಜನರಿಗೆ ಮೆಚ್ಚುಗೆಯಾಗಿದ್ದಾರೆ. ಇನ್ನು ಇವರು ತಮ್ಮ ಹಳೆಯ ಸಂಭಂದವನ್ನು ತೊರೆದು ಈಗ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ಸಾಕಷ್ಟು ಬಾರಿ ಸ್ವತಃ ತಾವೇ ಮಾದ್ಯಮಗಳ ಮುಂದೆ ಬಂದು ಹೇಳಿಕೆ ಕೊಡ ನೀಡಿದ್ದಾರೆ. ಇವರ ಸಂಭಂದ ಬಗ್ಗೆ 2020 ರಲ್ಲಿ ಭಾರಿ ಚರ್ಚೆಗೆ ಹುಟ್ಟಿಕೊಂಡಿತ್ತು ಎಂದೇ ಹೇಳಬಹುದು. ಇದೀಗ ಮತ್ತೆ ಈ ದಂಪತಿ ಸುದ್ದಿಯಲ್ಲಿ ಇದ್ದಾರೆ. ಅದೇನೆಂದರೆ ನೆನ್ನೆ ನರೇಶ್ ಅವರು ತನ್ನ ಬೇಬಿ ಕಾಣುತ್ತಿಲ್ಲ ದಯಮಾಡಿ ಹುಡುಕಿಕೊಡಿ ಬೇಬಿಯನ್ನು ಬಿಟ್ಟು ಬಾಳುವ ಶಕ್ತಿ ನನಗಿಲ್ಲ ಎಂದು ಅಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.  

ಇನ್ನು ಇದನ್ನು ನೋಡಿದ ಜನ ಮಿಶ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಬರುತ್ತಿದ್ದಾರೆ. ಮೊದಲಿಗೆ ಪವಿತ್ರಾ ಅವರು ಈಗ ನಿನ್ನನ್ನು ಬಿಟ್ಟು ಹೋದರಾ ಎಂದು ಜನ ಟೀಕೆ ಮಾಡುತ್ತಿದ್ದರೆ ಮತ್ತೊಂದಷ್ಟು ಜನ ಇದು ಕೊಡ ಸಿನಿಮಾ ಪ್ರಮೋಶನ್ ಎಂದು ಹೇಳಿದ್ದಾರೆ. ಏಕೆಂದ್ರೆ ಈ ಹಿಂದೆ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ಕಿಸ್ಸಿಂಗ್ ಹಾಗೂ ಮದುವೆಯ ಫೋಟೋ ವಿಡಿಯೋ ಹಂಚಿಕೊಂಡು ವೈರಲ್ ಆದ ನಂತರ ಮಲ್ಲಿ ಪೆಲ್ಲಿ ಚಿತ್ರದ ಬಗ್ಗೆ ಅನೌನ್ಸ್ ಮಾಡಿದ್ದರು. ಹಾಗೆಯೇ ಇದು ಕೊಡ ಎಂದು ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಈಗ ನರೇಶ್ ಅವ್ರು ತನ್ನ ಬೇಬಿ ಹುಡುಕಲು ನಿರ್ದೇಶಕ ಅಶ್ವಿನಿ ಅವರೇ ಸಹಾಯ ಮಾಡಬೇಕು ಎಂದಿದ್ದಕ್ಕೆ ಅವರು ಕೊಡ ಎಲ್ಲೆಡೆ ಅಲರ್ಟ್ ಘೋಷಿಸಿದ್ದಾರೆ. ಇನ್ನು ಸದ್ಯದಲ್ಲಿ ‘ವೀರಾಂಜನೆಯಲು ವಿಹಾರಯಾತ್ರ’ ಎಂಬ ಹೊಸ ಸಿನಿಮಾದಲ್ಲಿ ನಟ ನರೇಶ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ