ಅಪ್ಪಿ ತಪ್ಪಿ ಇವತ್ತು ಹೊಸ ವರ್ಷಾಚರಣೆಗೆ ನಂದಿ ಗಿರಿಧಾಮಕ್ಕೆ ಹೋಗ ಬೇಡಿ ; ಕಾರಣ ಇಲ್ಲಿದೆ ನೋಡಿ ?

ಅಪ್ಪಿ ತಪ್ಪಿ ಇವತ್ತು ಹೊಸ ವರ್ಷಾಚರಣೆಗೆ ನಂದಿ ಗಿರಿಧಾಮಕ್ಕೆ ಹೋಗ ಬೇಡಿ ; ಕಾರಣ ಇಲ್ಲಿದೆ ನೋಡಿ ?

ಹೌದು ಗೆಳೆಯರೇ ಇಂದು ಹೊಸ ವರ್ಷದ ಸ್ವಾಗತಕ್ಕೆ ಎಲ್ಲರೂ ಸುಂದರವಾದ ಪ್ರದೇಶಕ್ಕೆ ಹೋಗ ಬೇಕು ಎಂದು ಪ್ಲಾನ್ ಮಾಡಿರ ಕೊಂಡಿರುತ್ತಾರೆ . ಇದಕ್ಕೆ ನಂದಿ ಬೆಟ್ಟ ಒಂದು ಸುಂದರವಾದ ಸ್ಥಳ . ಎಲ್ಲರೂ ಹೊಸ ವರ್ಷ ಸ್ವಾಗತಕೆ ನಂದಿ ಬೆಟ್ಟಕ್ಕೆ ಹೋಗಲು ಪ್ಲಾನ್ ಮಾಡಿ ಕೊಂಡಿರುತ್ತಾರೆ . ಆದರೆ ಈ ವರ್ಷ ನಿಮ್ಮ ಆಶೆ ಈಡೇರುವುದಿಲ್ಲ .ಇದಕ್ಕೆ ಕಾರಣ ಇಲ್ಲಿದೆ ನೋಡಿ .
ಖ್ಯಾತ ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದ್ದಾರೆ.

ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ (New Year 2023) ನಿರ್ಬಂಧ ಹೇರಲಾಗಿದೆ. ನಾಳೆ ಶನಿವಾರ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆವರೆಗೂ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ  ಎನ್.ಎಂ. ನಾಗರಾಜ್ ಆದೇಶ ಹೊರಡಿಸಿದ್ದಾರೆ. 
ಇದರಿಂದಾಗಿ ನಂದಿ ಹಿಲ್ಸ್​​ಗೆ ಸಾರ್ವಜನಿಕರ ಪ್ರವೇಶ ಮತ್ತು ಹೊಸ ವರ್ಷ ನಿಮಿತ್ತ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಅಂತೆಯೇ ಡ್ರಿಂಕ್ ಆಂಡ್ ಡ್ರೈವ್ ಅಪಘಾತ ಹಾಗೂ ಕೊರೊನಾ (Covid 19) ಹರಡದಂತೆ ತಡೆಯುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.