ಎರಡು-ಮೂರು ಪ್ರಧಾನಿಗಳ ಸಾವು, ದೊಡ್ಡ ದೊಡ್ಡವರಿಗೆ ನೋವು! ಕೋಡಿಮಠ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ?

ಎರಡು-ಮೂರು ಪ್ರಧಾನಿಗಳ ಸಾವು, ದೊಡ್ಡ ದೊಡ್ಡವರಿಗೆ ನೋವು! ಕೋಡಿಮಠ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ?

ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಾ ಬರುತ್ತಿದ್ದೇವೆ. ಇನ್ನೂ ಕಾಲ ಬದಲಾದರೂ ಕೊಡ ಕೆಲವೊಂದು ಆಚರಣೆಗಳು ಬದಲಾಗಿಲ್ಲ ಎಂದೇ ಹೇಳಬಹುದು. ಹಾಗೆಯೇ ನಮ್ಮಲ್ಲಿ ಇರುವ ಕಾಲೇಜ್ಞಾನಿಗಳು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿನ ಭವಿಷ್ಯವನ್ನು ತಮ್ಮ ಕಾಲೇಜ್ಞಾನದ ಮೂಲಕ ತಿಳಿದು ಬರೆದಿದ್ದಾರೆ. ಇನ್ನೂ ಹಾಗೆಯೇ ಕೆಲವೊಬ್ಬರು ತನ್ನಲ್ಲಿ ಇರುವ ದೈವಾಗುಣಗಳಿಂದ ಮುದಾಗುವ ಘಟನೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಕೊಡ ಬಾರಿಸುತ್ತಾ ಇದ್ದಾರೆ. ಅದ್ರಲ್ಲಿ ಮುಂಚೂಣಿಯಲ್ಲಿ ಇರುವ ಹೆಸ್ರು ಎಂದ್ರೆ ಅದು ಕೊಡಿ ಮಠದ ಡಾಕ್ಟರ್ ಶಿವಾನಂದ ಸ್ವಾಮೀಜಿ.
ಇನ್ನೂ ಅವರು ಈ ರೀತಿಯ ಮುಂದಿನ ಭವಿಷ್ಯ ಹೇಳುವುದರಲ್ಲಿ ಅತ್ಯಂತ ಪ್ರಖ್ಯಾತ ವ್ಯಕ್ತಿಗಳು ಎಂದು ಹೇಳಬಹುದು. ಅವರು ವೇದಾಂತ ಸಂನ್ಯಾಸಿ ಮತ್ತು ಧಾರ್ಮಿಕ ಗುರುಗಳು ಆಗಿದ್ದರು. 

ಇನ್ನೂ ಇವರ ಭವಿಷ್ಯವನ್ನು ನಮ್ಮ ಹಿಂದೂ ಧರ್ಮದ ಜನರು ಬಹಳ ನಂಬುತ್ತಾರೆ ಎಂದು ಹೇಳಬಹುದು. ಏಕೆಂದರೆ ಇವರು ಹೇಳಿರುವ ಭವಿಷ್ಯ ಈ ವರೆಗೂ ಎಲ್ಲವು ಕಾಲ ರೂಪಕ್ಕೆ ಬಂದಿದೆ. ಇದೀಗ ಮತ್ತೆ ಶ್ರೀಗಳು ಮಾದ್ಯಮಗಳ ಮುಂದೆ ಬಂದು ತಮ್ಮ ಜಗತ್ತಿನ ಭವಿಷ್ಯವನ್ನು ನುಡಿದ್ದಾರೆ ಅದ್ರಲ್ಲೂ ರಾಜಕೀಯದಲ್ಲಿ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ಮತ್ತೆ ಕೊಡಿ ಮಠದ ಸ್ವಾಮೀಜಿಗಳು ಭಾರತೀಯ ಪದ್ಧತಿಯಲ್ಲಿ ಸಂವತ್ಸರಗಳಿಗೆ ಮಹತ್ವದ ಭವಿಷ್ಯ ಕಾದಿದೆ. ಈಗ ಕ್ರೋಧಿ ನಾಮ ಸಂವತ್ಸರದ ವರ್ಷ ಆಗಿರುವುದರಿಂದ ಕ್ರೋಧಗಳೇ ಹೆಚ್ಚು. ಈ ವರ್ಷ ಹೆಚ್ಚು ಸುರಿದಲ್ಲಿಯೇ ಮಳೆ ಸುರಿಯುತ್ತಿದೆ ಮುಂದಿನ ದಿನಗಳಲ್ಲಿ ಹೆಚ್ಚು ಆಗಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಭೂ ಕುಸಿತ, ಜಲಪ್ರಳಯ ಆಗುವ ಲಕ್ಷಣಗಳು ಹೆಚ್ಚಾಗಿಯೇ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ ಅಂತ ಕೋಡಿಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಈ ಬಾರಿ ಮಾತನಾಡಿರುವ ಕೊಡಿ ಮಠದ ಭಯಾನಕ ಭವಿಷ್ಯ ಮತ್ತೊಂದು ಸ್ಫೋಟಕ ಭವಿಷ್ಯ ಹೇಳಿದ್ದಾರೆ. ಈ ಬಾರಿ ರಾಜಕೀಯಕ್ಕೆ “ಅಭಿಮನ್ಯುವಿನ ಹೆಂಡತಿ ಸಂಸತ್ ಪ್ರವೇಶ ಮಾಡಲಿದ್ದಾಳೆ, ಹಾಗೆ ದುರ್ಯೋಧನನ ತೊಡೆ ಮುರಿಸಿದ ಕೃಷ್ಣ ಈಗಿಲ್ಲ, ಹೀಗಾಗಿ ದುರ್ಯೋಧನನಿಗೆ ಜಯವಾಗಲಿದೆ” ಅಂತ ನಿಗೂಢವಾಗಿ ಹೇಳಿದ್ದಾರೆ. ಈ ಮುಂಚೆಯೇ ರಾಜಕಾರದಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದರು. ಹೆಣ್ಣು ಮಗುವಿನ ಆಳ್ವಿಕೆಯ ಪ್ರವೇಶ ಆಗಿ ರಾಜಕಾರಣದಲ್ಲಿ ಕುರುಕ್ಷೇತ್ರ ಆಗಿ ಬದಲಾಗಲಿದೆ. ಎಂದು ಎಚ್ಚರಿಕೆ ನೀಡಿದ್ದರು. ಈಗ ಅಭಿಮನ್ಯುವಿನ ಹೆಂಡತಿ ಸಂಸತ್ಗೆ ಪ್ರವೇಶ ಮಾಡುತ್ತಾಳೆ. ಆದರೆ ದುರ್ಯೋಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಅಂತ ನಿಗೂಢವಾಗಿ ಭವಿಷ್ಯ ಹೇಳಿದ್ರು, ಜಗತ್ತಿನಲ್ಲಿ ಎರಡು ಮೂರು ಪ್ರಧಾನಿಗಳ ಸಾವು ಸಂಭವಿಸಲಿದೆ. ದೊಡ್ಡ ದೊಡ್ಡವರಿಗೆ ನೋವು, ತಾಪ, ದುಃಖ ಆಗಲಿದೆ ಅಂತ ಕೋಡಿಮಠದ ಸ್ವಾಮೀಜಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.