ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕೋಡಿಶ್ರೀ..! ಎಲ್ರೂ ಶಾಕ್

ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕೋಡಿಶ್ರೀ..! ಎಲ್ರೂ ಶಾಕ್

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿಚಾರಗಳಿಗೆ ಕೋಡಿಮಠದ ಖ್ಯಾತ ಗುರುಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಹೆಚ್ಚು ಭವಿಷ್ಯ ನುಡಿಯುತ್ತಾರೆ. ಮಳೆ ವಿಚಾರವಾಗಿ, ಬೆಳೆ ವಿಚಾರವಾಗಿ ಹಾಗೆ ರೈತರ ವಿಚಾರವಾಗಿ ಭವಿಷ್ಯ ನುಡಿಯುತ್ತಾರೆ. ಜೊತೆಗೆ ರಾಜ್ಯದ ರಾಜಕೀಯ ವಿಚಾರವಾಗಿಯೂ ನಮ್ಮ ದೇಶದ ರಾಜಕೀಯ ವಿಚಾರವಾಗಿಯೂ ಕೂಡ ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ವಿಚಾರಗಳನ್ನು ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಅವುಗಳು ನಿಜ ಆಗುವಂತೆ ಮಾಡುತ್ತಾರೆ.

ಹಾಗೇನೆ ಅವರು ಆಡಿದ ಮಾತುಗಳು, ಕೆಲವುಗಳು ಸತ್ಯ ಕೂಡ ಆಗಿವೆ. ನುಡಿದಂತೆ ಆ ಭವಿಷ್ಯಗಳೆಲ್ಲವೂ ನಿಜ ಆಗಿವೆ ಎಂದು ಹೇಳಬಹುದು. ಹೌದು ರೈತರ ಮತ್ತು ರಾಜಕೀಯ ವಲಯದಲ್ಲಿ ಕೋಡಿಮಠದ ಶ್ರೀಗಳನ್ನು ಹೆಚ್ಚು ನಂಬಲಾಗುತ್ತದೆ. ಅವರು ಆಡುವ ಪ್ರತಿಯೊಂದು ಮಾತುಗಳು ಎಲ್ಲವೂ ಸಹ ಸತ್ಯವೇ ಆಗಿರುತ್ತವೆ ಎಂದು ಅವರು ನಂಬುತ್ತಾರೆ. ಈ ವರ್ಷದ ಮಳೆ ಬಗ್ಗೆ ಕೊಡಿ ಶ್ರೀಗಳು ಆರಂಭದಲ್ಲಿಯೆ ಭವಿಷ್ಯ ನುಡಿದಿದ್ದರು..ಶ್ರಾವಣ ಮಧ್ಯಂತರದಿಂದ ಕಾರ್ತಿಕ ಮಾಸದವರೆಗೆ ಹೆಚ್ಚು ಮಳೆ ಆಗಲಿದೆ ಎಂಬುದಾಗಿ ಹೇಳಿದ್ದು, ಇದೀಗ ಕೆಲವು ಕಡೆ ಹೆಚ್ಚು ಮಳೆ ಬರುತ್ತಿದೆ.

ಹಾಸನದಲ್ಲಿ ನಿನ್ನೆ ಸಂದರ್ಶನದಲ್ಲಿ ಕಾಣಿಸಿದ ಕೋಡಿ ಶ್ರೀಗಳು ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಒಂದು ಭವಿಷ್ಯ ನುಡಿದಿದ್ದಾರೆ. 

ಅದು ಏನೆಂದರೆ, ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತಿದೆ ಎಂಬುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಕೋಡಿಶ್ರೀಗಳು ಹೇಳಿದ ಹಾಗೆ, 'ಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗುತ್ತಿದೆ, ಅದನ್ನ ಅಲ್ಲಿ ನೋಡುವವರಿಲ್ಲ, ಕೇಳುವವರಿಲ್ಲ, ಕನಿಷ್ಠ ಪಕ್ಷ ಅದನ್ನ ಅನುಭವಿಸುವವರೂ ಇಲ್ಲ' ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಏನು ತೊಂದರೆ ಇಲ್ಲ ಎಂದರು ಹಾಗೇನೆ ಎಲ್ಲರು ನನಗೆ ಬೇಕಾಗಿರುವವರೇ ಇನ್ನೇನು ನಾನು ಹೇಳುವುದಿಲ್ಲ ಸಹ ಎಂದು ಅತ್ತ ಮಾಧ್ಯಮದವರ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ ಕೋಡಿ ಶ್ರೀಗಳು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಈ ರೀತಿ ಭವಿಷ್ಯ ನುಡಿದಿರುವ ಸ್ವಾಮೀಜಿಯ ಒಳಾರ್ಥದ ಬಗ್ಗೆ ನಿಮ್ಮ ಗಮನಕ್ಕೆ ಏನು ಬಂದಿದೆ ಅದನ್ನು ಕೂಡ ಕಮೆಂಟ್ ಮಾಡಿ, ಧನ್ಯವಾದಗಳು...