2024 ರೈತರಿಗೆ ಸುಗ್ಗಿಕಾಲ ಎಂದು ಸಿಹಿ ಸುದ್ದಿ ಕೊಟ್ಟ ಕೊಡಿ ಮಠದ ಸ್ವಾಮೀಜಿ! ಯಾಕೆ ಗೊತ್ತಾ?

2024 ರೈತರಿಗೆ ಸುಗ್ಗಿಕಾಲ ಎಂದು ಸಿಹಿ ಸುದ್ದಿ ಕೊಟ್ಟ ಕೊಡಿ ಮಠದ ಸ್ವಾಮೀಜಿ! ಯಾಕೆ ಗೊತ್ತಾ?

ನಮ್ಮ ಹಿಂದೂ ಸನಾತನದ ಧರ್ಮದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣುತ್ತಾ ಬರುತ್ತಿದ್ದೇವೆ. ಇನ್ನೂ ಕಾಲ ಬದಲಾದರೂ ಕೊಡ ಕೆಲವೊಂದು ಆಚರಣೆಗಳು ಬದಲಾಗಿಲ್ಲ ಎಂದೇ ಹೇಳಬಹುದು. ಹಾಗೆಯೇ ನಮ್ಮಲ್ಲಿ ಇರುವ ಕಾಲೇಜ್ಞಾನಿಗಳು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿನ ಭವಿಷ್ಯವನ್ನು ತಮ್ಮ ಕಾಲ  ಜ್ಞಾನದ ಮೂಲಕ ತಿಳಿದು ಬರೆದಿದ್ದಾರೆ. ಇನ್ನೂ ಹಾಗೆಯೇ ಕೆಲವೊಬ್ಬರು ತನ್ನಲ್ಲಿ ಇರುವ ದೈವಾಗುಣಗಳಿಂದ ಮುದಾಗುವ ಘಟನೆಗಳ ಬಗ್ಗೆ ಎಚ್ಚರಿಕೆಯ ಗಂಟೆ ಕೊಡ ಬಾರಿಸುತ್ತಾ ಇದ್ದಾರೆ. ಅದ್ರಲ್ಲಿ ಮುಂಚೂಣಿಯಲ್ಲಿ ಇರುವ ಹೆಸ್ರು ಎಂದ್ರೆ ಅದು ಕೊಡಿ ಮಠದ ಡಾಕ್ಟರ್ ಶಿವಾನಂದ ಸ್ವಾಮೀಜಿ.

ಇನ್ನೂ ಅವರು ಈ ರೀತಿಯ ಮುಂದಿನ ಭವಿಷ್ಯ ಹೇಳುವುದರಲ್ಲಿ ಅತ್ಯಂತ ಪ್ರಖ್ಯಾತ ವ್ಯಕ್ತಿಗಳು ಎಂದು ಹೇಳಬಹುದು. ಅವರು ವೇದಾಂತ ಸಂನ್ಯಾಸಿ ಮತ್ತು ಧಾರ್ಮಿಕ ಗುರುಗಳು ಆಗಿದ್ದರು. 

ಇನ್ನೂ ಇವರ ಭವಿಷ್ಯವನ್ನು ನಮ್ಮ ಹಿಂದೂ ಧರ್ಮದ ಜನರು ಬಹಳ ನಂಬುತ್ತಾರೆ ಎಂದು ಹೇಳಬಹುದು. ಏಕೆಂದರೆ ಇವರು ಹೇಳಿರುವ ಭವಿಷ್ಯ ಈ ವರೆಗೂ ಎಲ್ಲವು ಕಾಲ ರೂಪಕ್ಕೆ ಬಂದಿದೆ. ಇದೀಗ ಮತ್ತೆ ಶ್ರೀಗಳು ಮಾದ್ಯಮಗಳ ಮುಂದೆ ಬಂದು ತಮ್ಮ ಜಗತ್ತಿನ ಭವಿಷ್ಯವನ್ನು ನುಡಿದ್ದಾರೆ. ಇನ್ನೂ ಫೆಬ್ರವರಿ 19ರಂದು ಮಾದ್ಯಮಗಳ ಮುಂದೆ ಬಂದ ಸ್ವಾಮೀಜಿ ಈ ಬಾರಿ ಯುಗಾದಿ ಕಳೆದ ಬಳಿಕ ಸಾಕಷ್ಟು ಬದಲಾವಣೆಯನ್ನು ನಮ್ಮ ಜಗತ್ತು ಕಾಣಲಿದೆ. ಈ ಹೊಸ ಸಂವಸ್ತರದಲ್ಲಿ ನಮ್ಮ ಜಗತ್ತಿನಲ್ಲಿ ಆಗುವ ಬದಲಾವಣೆಗಳಿಂದ ಒಂದಿಷ್ಟು ಭಾಗಕ್ಕೆ ಒಳಿತು ಆದರೆ ಇನ್ನೊಂದಿಷ್ಟು ಭಾಗಕ್ಕೆ ಕಪ್ಪು ಕವಿದಂತೆ ಆಗಲಿದೆ ಎಂದು ತಿಳಿಸಿದ್ದಾರೆ.  

ಇನ್ನೂ ಶ್ರೀಗಳ ಪ್ರಕಾರ ಯುಗಾದಿಯ ನಂತರದ ದಿನಗಳಲ್ಲಿ ನಮ್ಮ ಪ್ರಪಂಚದಲ್ಲಿ ಒಂದಿಷ್ಟು ಭಾಗಕ್ಕೆ ಬರಗಾಲ ಹಾಗೂ ಭೂಕಂಪ ಆಗುವ ಸಾದ್ಯತೆ ಇದೆ. ಹಾಗೆಯೇ ಪ್ರಕೃತಿ ವಿಕೋಪದಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನೂ ಕೆಲವೊಂದು ಕಡೆ ಬಾಂಬ್ ಸ್ಪೋಟ ಆಗಿ ಯುದ್ಧದ ವಾತಾವರಣ ಸೃಷ್ಟಿ ಆಗಲಿದೆ. ಈಗಾಗಲೇ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ದ ಈ ವರೆಗೂ ಅಂತ್ಯ ಆಗಿಲ್ಲ. ಇನ್ನೂ ಇವರೆ ಹೇಳಿರುವ ಪ್ರಕಾರ ಈ ಎರಡು ದೇಶಗಳಲ್ಲಿ ಒಂದು ದೇಶ ಸಂಪೂರ್ಣ ನಶಿಸಿ ಹೋಗುವ ಎಲ್ಲಾ ಸಾದ್ಯತೆ ಇದೆ ಎಂದು ಹೇಳಲಾಗಿದೆ.

ಇದೆಲ್ಲದರ ಜೊತೆಗೆ ರೈತರಿಗೆ ಶ್ರೀಗಳು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ ಈ ವರ್ಷದಲ್ಲಿ ರೈತರಿಗೆ ತಮ್ಮ ಬೆಳೆಗೆ ತಕ್ಕಂತೆ ಮಳೆ ಬಂದು ಫಸಲು ಕೊಡ ಉತ್ತಮವಾಗಿ ಬರಲಿದೆ. ರೈತರಿಗೆ ಈ ವರ್ಷ ಯಾವ ಸಂಕಷ್ಟಗಳು ಕೊಡ ಎದುರಾಗುವುದಿಲ್ಲ ಎಂದು ಸಿಹಿ ಸುದ್ದಿ ನೀಡಿದ್ದಾರೆ.