ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣ ಅವರ ಗಂಡ ಯಾರು ಗೊತ್ತಾ?

ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣ ಅವರ ಗಂಡ ಯಾರು ಗೊತ್ತಾ?

ಕನ್ನಡ ದೂರದರ್ಶನದ ಪ್ರಮುಖ ನಿರೂಪಕಿ ಮತ್ತು ನಟಿ ಆಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದ  ಅಪರ್ಣಾ ಅವರು 14 October 1966 ರಂದು  ಕರ್ನಾಟಕದ ಪಂಚನಹಳ್ಳಿ, ಚಿಕ್ಕಮಗಳೂರು, ನಲ್ಲಿ , ಜನಿಸಿದರು.  ಅವರು 1993 ರಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಯನ್ನು ಶುರುಮಾಡಿದವರು. ಇನ್ನೂ ರೇಡಿಯೋ ಜಾಕಿ ಆಗಿ ಮನರಂಜನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಕ್ರಮೇಣ ದೊಡ್ಡ ಮಟ್ಟದ ಯಶಸ್ಸನ್ನು ಕೊಡ ಪಡೆದುಕೊಂಡರು. ಹಾಗೆಯೇ ಅವರ ಯಶಸ್ಸಿನ ಹಾದಿ ಅತಿ ಶೀಘ್ರದಲ್ಲೇ ದೂರದರ್ಶನಕ್ಕೆ ಪರಿವರ್ತನೆಗೊಂಡರು, 1990 ರಿಂದ ಡಿಡಿ ಚಂದನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅವರು 1985 ರ ಚಲನಚಿತ್ರ "ಮಸಣದ ಹೂವು" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದರು. 

ಇನ್ನು ಚಂದನ ಟೀವಿ ನಿರೂಪಕಿ ಅಪರ್ಣಾ ಅವರು 1989ರಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅವರು ಕನ್ನಡದ ದೂರದರ್ಶನದಲ್ಲಿ ಬಹುಮುಖ ಪ್ರತಿಭೆ ಎಂದು ಗುರುತಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು ಟಿವಿ ನಿರೂಪಣೆ, ರೇಡಿಯೋ ಜಾಕಿ, ಮತ್ತು ನಟನೆಯಲ್ಲಿಯೂ ತಮ್ಮದೇ ಆದ ಸ್ಥಳವನ್ನು ಹೊಂದಿದ್ದಾರೆ. ವ್ಯಕ್ತಿಗತವಾಗಿ, ಅವರು ಬಹಳ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಸಂಗೀತ ಕೇಳುವುದು, ಓದುವುದು, ಮತ್ತು ಮನೆಯಲ್ಲಿ ಕೆಲಸ ಮಾಡುವುದು ಅವರ ಹವ್ಯಾಸಗಳಲ್ಲಿ ಸೇರಿವೆ. ಕೊಂಚ ಬ್ರೇಕ್ ತೆಗೆದುಕೊಂಡ ಈಕೆ ಕಲರ್ಸ್ ಕನ್ನಡ ಮಜಾ ಟಾಕೀಸ್ ಮೂಲಕ ಬಣ್ಣದ ರಂಗಕ್ಕೆ ರಿ ಎಂಟ್ರಿ ಕೊಟ್ಟರು.

ಕನ್ನಡದಲ್ಲಿ ಬಹಳ ಸ್ಪಷ್ಟವಾಗಿ ಮಾತನಾಡುತ್ತಿದ್ದ ಈಕೆಗೆ ಸಾಕಷ್ಟು ಸನ್ಮಾನ ಪುರಸ್ಕಾರಗಳು ಕೊಡ ಸಿಕ್ಕಿವೆ. ಹೀಗೆ ತನ್ನ ಅಚ್ಚುಕಟ್ಟು ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದ ಈಕೆ ತನ್ನ ಆರೋಗ್ಯ ಸಮಸ್ಯೆಯ ಕಾರಣದಿಂದ ಕ್ರಮೇಣ ತನ್ನ ವೃತ್ತಿ ಜೀವನದಿಂದ ದೂರದರೂ. ಇನ್ನು ಈ ಅಪರ್ಣಾ ಅವರ ಇಷ್ಟು ಯಶಸ್ವಿ ಜರ್ನಿಯಲ್ಲಿ  ಸ್ನೇಹಿತನಾಗಿ ಇದಿದ್ದು ಅವರ ಪತಿ ನಾಗೇಶ್ ವಸ್ತಾರೆ ಎಂದು ಹೇಳಬಹುದು.

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಆದ್ರೆ ಇಂದು ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಇಂದು ಕೊನೆ ಉಸಿರು ಎಳೆದಿದ್ದು ಈಕೆ ಇನ್ನೂ ಮುಂದೆ ಕೇವಲ ನೆನಪು ಮಾತ್ರ ಎಂದು ಹೇಳಲು ಬಹಳ ದುಃಖ ಎನ್ನಿಸುತ್ತಿದೆ. ಈಕೆಗೆ ಇದ್ದ ಕನ್ನಡದ ಅಭಿಮಾನ ಆಕೆಯ ಮಾತುಗಳಲ್ಲಿ ನಾವು ಕಾಣಬಹುದಿತ್ತು. .ಇನ್ನು ಕನ್ನಡದ ಮಗಳಾಗಿದ್ದ ಅಪರ್ಣಾ ಅವ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಕೊಡ ಹಾರೈಸೋಣ.