ಸ್ಪಂದನ ಅವರು ಬ್ಯಾಂಕಾಕ್ ಗೆ ಏಕೆ ಹೋಗಿದ್ದರು ಗೊತ್ತಾ..? : ನಿಜವಾದ ಕಾರಣ ಇಲ್ಲಿದೆ ನೋಡಿ

ಸ್ಪಂದನ ಅವರು ಬ್ಯಾಂಕಾಕ್ ಗೆ ಏಕೆ ಹೋಗಿದ್ದರು ಗೊತ್ತಾ..?  : ನಿಜವಾದ ಕಾರಣ ಇಲ್ಲಿದೆ ನೋಡಿ

ಕನ್ನಡದ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಸಿದ್ದಾರೆ. ಈ ವಿಚಾರ ಎಲ್ಲಾ ಕಡೆ ಹರಿದಿದ್ದು ಸ್ಪಂದನ ಅವರ ಸಾವಿಗೆ ಕುಟುಂಬಸ್ಥರು ಹಾಗೂ ಇಡೀ ಕನ್ನಡ ಜನತೆ ಕಣ್ಣೀರನ್ನು ಹಾಕುತ್ತಿದ್ದಾರೆ. ಸ್ಪಂದನ ಅವರು ಮತ್ತು ಅವರ ಕುಟುಂಬದವರು ಎಲ್ಲರೂ ಒಟ್ಟಿಗೆ ಸೇರಿ ಪ್ರವಾಸಕ್ಕೆ ತೆರಳಿದ್ದರು ಎಲ್ಲರೂ ಪ್ರವಾಸ ಕೈಗೊಂಡ ವೇಳೆಯೇ ಈ ಹೃದಯಘಾತ ಸಂಭವಿಸಿದೆ, ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಸ್ಪಂದನ ಎನ್ನುವ ಮಾಹಿತಿ ಸ್ವಲ್ಪ ಹೊತ್ತಿನ ಮುಂಚೆ ವಿಚಾರ ಲಭ್ಯವಾಗಿತ್ತು. ಆದರೆ ಪ್ರವಾಸಕ್ಕೆ ತೆರಳಿರಲಿಲ್ಲ ಎಂದು ಈಗ ಕೇಳಿ ಬಂದಿದೆ..

ಬೇರೆ ಕೆಲಸದ ನಿಮಿತ್ತ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಅವರ ಸ್ನೇಹಿತರೊಂದಿಗೆ ಬ್ಯಾಂಕಾಕ್ ಕ್ಕೆ ಹೋಗಿದ್ದರಂತೆ. ಅದು ನಾಲ್ಕು ದಿವಸದ ಹಿಂದೆಯೇ ಎನ್ನಲಾಗಿದೆ. ಸ್ಪಂದನ ಅವರು ಬ್ಯಾಂಕಾಕ್ಕೆ ತೆರಳಿದ್ದರು ಎನ್ನುವ ಮಾಹಿತಿ ತಿಳಿದುಬಂದಿದ್ದು  ಹೌದು ಸ್ಪಂದನ ಅವರು ಬ್ಯಾಂಕಾಕ್ಕೆ ಹೋಗಿದ್ದರು. ಇಂದು ಮರಳಿ ಅಲ್ಲಿಂದ ಇಲ್ಲಿಗೆ ಬರಬೇಕು ಅಂದುಕೊಂಡಿದ್ದರಂತೆ. ನಿನ್ನೆ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು ಸಾಯಂಕಾಲದ ಹೊತ್ತಿಗೆ ಹೃದಯಾಘಾತ ಸಂಭವಿಸಿದೆ. ತದನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದು ಆದರೂ ಕೂಡ ಬದುಕುಳಿಯಲಿಲ್ಲ.   

ಸ್ಪಂದನಾ ವಿಜಯ್ ರಾಘವೇಂದ್ರ ಜೊತೆ ಹೋಗಲಿಲ್ಲ ಬದಲಾಗಿ ತನ್ನ ತಾಯಿ ಕುಟುಂಬದೊಂದಿಗೆ ಹೋಗಿದ್ಧರು, ನಂತರ ವಿಜಯ್ ರಾಘವೇಂದ್ರ ಮಾತ್ರ ಶೂಟಿಂಗ್ ವೇಳಾಪಟ್ಟಿಯ ಕಾರಣ ಬ್ಯಾಂಕಾಕ್‌ ಹೋದರು.

ಎಂತಹ ವಿಧಿ ಇದು ಅಲ್ವಾ, ನೆನ್ನೆ ಸಾಯಂಕಾಲದ ವೇಳೆ ಸ್ಪಂದನ ಅವರಿಗೆ ಹೃದಯಘಾತ ಸಂಭವಿಸಿದೆ. ಸ್ವಲ್ಪ ಎದೆ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ಹೋಗಿದ್ದಾರೆ ಎಂಬ ಆ ವಿಷಯ ತಿಳಿಯುತ್ತಿದ್ದಂತೆ ನಿನ್ನೆ ಸಾಯಂಕಾಲವೇ ಅವರ ಪತಿ ವಿಜಯ್ ರಾಘವೇಂದ್ರ ಅವರು ಬ್ಯಾಂಕಾಕ್ ಗೆ ಹೋಗಿದ್ದಾರೆ. ಆದರೆ ಬೆಳಗಿನ ಜಾವ ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಸ್ಪಂದನ ಅವರು ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ.

ಈಗ ಬಂದಿರುವ ಮಾಹಿತಿ ಪ್ರಕಾರ 12 ಗಂಟೆಗೆ ಈಗ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಈಗ 12:00 ಗಂಟೆಗೆ ಬೆಂಗಳೂರು ಬಿಡುತ್ತಿದ್ದಾರೆ. ಕಾರಣ ಅಲ್ಲಿಗೆ ಹೋಗಿ ದಾಖಲೆಗಳನ್ನು ಕೊಟ್ಟು ಸ್ಪಂದನ ಅವರ ಮೃತ ದೇಹವನ್ನು ಬೆಂಗಳೂರಿಗೆ ತರಲು ಹೊರಡುತ್ತಿದ್ದಾರೆ. ಸ್ಪಂದನ ಅವರ ಮೃತದೇಹ ಇಂದು ರಾತ್ರಿ ಬೆಂಗಳೂರಿಗೆ ತಲುಪುವ ಸಾಧ್ಯತೆ ಇದ್ದು, ಇಲ್ಲವಾದಲ್ಲಿ ನಾಳೆ ಬೆಳಗ್ಗೆ ಬರಲಿದೆಯಂತೆ. ಇದನ್ನ ಯಾರು ಅರಗಿಸಿಕೊಳ್ಳಲು ಆಗುತ್ತಿಲ್ಲ. ಡಾಕ್ಟರ್ ರಾಜ್ಕುಮಾರ್ ಕುಟುಂಬದಲ್ಲಿ ಒಂದರ ಮೇಲೊಂದರಂತೆ ಬರೇಗಳು ಬೀಳುತ್ತಿವೆ. ಹಾಗೆ ಈ ನೋವನ್ನು ಹೇಗೆ ತಡೆದುಕೊಳ್ಳುತ್ತಾರೋ ಆ ಕುಟುಂಬಡವರು ಗೊತ್ತಾಗುತ್ತಿಲ್ಲ. ಆ ದೇವರು ಇವರ ಕುಟುಂಬಕ್ಕೆ ಅ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಬಹುದು ಬಿಟ್ಟರೆ ನಮ್ಮ ಬಳಿ ಯಾವ ಮಾತುಗಳು ಇಲ್ಲ.  ( video  credit : public tv )