ಭಕ್ತರಿಗೆ ದೋಸೆ ಪ್ರಸಾದ ಕೊಡುವ ವಿಷ್ಣು ದೇವಸ್ಥಾನ ಇಲ್ಲಿ ಏಷ್ಟು ಬೇಕಾದರೂ ದೋಸೆ ತಿನ್ನಬಹುದು?… ಇದು ಏಲ್ಲಿದೇ ಗೊತ್ತಾ..??

ಭಕ್ತರಿಗೆ ದೋಸೆ ಪ್ರಸಾದ ಕೊಡುವ ವಿಷ್ಣು ದೇವಸ್ಥಾನ ಇಲ್ಲಿ ಏಷ್ಟು ಬೇಕಾದರೂ ದೋಸೆ ತಿನ್ನಬಹುದು?… ಇದು ಏಲ್ಲಿದೇ ಗೊತ್ತಾ..??

ನಾವೆಲ್ಲರೂ ಚಿಕ್ಕ ವಯಸ್ಸಿನವರಿದ್ದಾಗ ಮನೆಯಲ್ಲಿ ದೇವಸ್ಥಾನಕ್ಕೆ ಹೋಗೋಣ ಎಂದರೆ ಮೊದಲಿ ನಮ್ಮ ಮನಸ್ಸಿಗೆ ಬರುತ್ತಿದ್ದ ವಿಷಯ ದೇವಸ್ಥಾನದ ಪ್ರಸಾದ. ನಾವು ಅನೇಕ ಬಾರಿ ದೇವಸ್ಥಾನಕ್ಕೆ ಪ್ರಸಾದ ತಿನ್ನದೆ ಹೋಗಿರುವ ಸಾಕಷ್ಟು ಉದಾಹರಣೆಗಳು ಇರುತ್ತದೆ. ಇಂದಿಗೂ ಸಹ ಅನೇಕರಿಗೆ ದೇವಸ್ಥಾನಗಳಲ್ಲಿ ಸಿಗುವ ಪ್ರಸಾದ ಬಹಳ ಇಷ್ಟ.

ನಾವು ಮನೆಯಲ್ಲಿ ಎಷ್ಟೇ ಪ್ರಯತ್ನಿಸಿದರೆ ಸಹ ದೇವಸ್ಥಾನದಲ್ಲಿ ಮಾಡುವ ರೀತಿ ಪ್ರಸಾದವನ್ನು ಮಾಡಲು ಸಾಧ್ಯವಾಗುವುದಿಲ್ಲ. ದೇವಸ್ಥಾನದಲ್ಲಿ ಸೇರುವ ಪ್ರಸಾದದ ರುಚಿಯೇ ಬೇರೆ. ಎಷ್ಟೇ ತಿಂದರೂ ಸಹ ಇನ್ನು ಸ್ವಲ್ಪ ತಿನ್ನಬೇಕು ಎನ್ನುವ ಆಸೆ ಆಗುತ್ತದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮೊಸರನ್ನ ಪೊಂಗಲ್ ಇತ್ಯಾದಿಗಳನ್ನು ಪ್ರಸಾದ ರೂಪದಲ್ಲಿ ಕೊಡುತ್ತಾರೆ.

ಆದರೆ ಇಲ್ಲೊಂದು ದೇವಸ್ಥಾನದಲ್ಲಿ ದೋಸೆಯನ್ನು ಪ್ರಸಾದ ರೀತಿಯಲ್ಲಿ ಕೊಡುತ್ತಾರೆ. ಕೇಳಲು ನಿಮಗೆ ವಿಚಿತ್ರ ಅನಿಸಬಹುದು, ಆದರೆ ಇದು ನಿಜ. ಹಾಗಾದರೆ ಈ ದೇವಸ್ಥಾನ ಯಾವುದು? ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ದೋಸೆ ಕೊಡಲು ಕಾರಣ ಏನು? ಈ ರೀತಿಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ..   

( video credit : goli inside hit )

ತಮಿಳುನಾಡು ರಾಜ್ಯದ ಮಧುರೈನ ಜಗರ್ ಎಂಬ ಬೆಟ್ಟದಲ್ಲಿ ಕಲ್ಲಚಕರ ವಿಷ್ಣು ದೇವಸ್ಥಾನ ಇದೆ. ಈ ದೇವಸ್ಥಾನಕ್ಕೆ ಸಾವಿರಾರು ಕಿಲೋಮೀಟರ್ನಿಂದ ಪ್ರಯಾಣ ಮಾಡಿಕೊಂಡು ಭಕ್ತರು ಬರುತ್ತಾರೆ. ಈ ದೇವಸ್ಥಾನಕ್ಕೆ ಭಕ್ತರು ಬರಲು ಎರಡು ಪ್ರಮುಖ ಕಾರಣಗಳಿದೆ. ಮೊದಲನೆಯದು ಈ ವಿಷ್ಣುದೇವರ ದರ್ಶನ ಪಡೆಯುವುದು. ಮತ್ತೊಂದು ಈ ದೇವಸ್ಥಾನದಲ್ಲಿ ಸಿಗುವ ವಿಶೇಷವಾದ ಪ್ರಸಾದ.

ಹೌದು ಸಾವಿರಾರು ವರ್ಷಗಳ ಹಿಂದೆ ಮುನಿವರ್ ಎಂಬ ಅಡುಗೆಭಟ್ಟ ನದಿಗೆ ಸ್ನಾನ ಮಾಡಲೆಂದು ಹೋಗುತ್ತಾನೆ. ಈ ವೇಳೆ ಆ ಮುನಿವ ಸ್ನಾನ ಮಾಡುವಾಗ ನದಿಯ ನೀರು ಅಲ್ಲಿದ್ದ ಒಬ್ಬ ಮಹರ್ಷಿಯ ಮುಖಕ್ಕೆ ಸಿಡಿಯುತ್ತದೆ. ಇನ್ನು ಇದರಿಂದ ಕೋಪಗೊಂಡ ಮಹಾಋಷಿಯು ಮುನಿವರ್ಗೆ ಕಪ್ಪೆಯಾಗಿ ಬದಲಾಗುವಂತೆ ಶಾಪ ನೀಡುತ್ತಾನೆ. ಇನ್ನು ಶಾಪ ವಿಮೋಚನೆಯಾಗಲು ಭಗವಂತನೇ ಬರಬೇಕು ಎನ್ನುತ್ತಾನೆ.

ಇನ್ನು ಕಪ್ಪೆಯಾಗಿ ಬದಲಾಗಿದ್ದ ಮುನಿವರ್ ವರ್ಷಗಳ ಕಾಲ ತಪಸ್ಸು ಮಾಡಿ ಮಹಾವಿಷ್ಣುವನ್ನು ಒಲಿಸಿಕೊಂಡು ಶಾಪದಿಂದ ವಿಮೋಚನೆ ಪಡೆಯುತ್ತಾನೆ. ಇನ್ನು ಮಹಾವಿಷ್ಣುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅಡುಗೆ ಮಾಡಿ ಬಡಿಸುತ್ತಾನೆ. ಇನ್ನು ಮನಿವಲ್ಲ ಕೈ ರುಚಿ ಗೆ ನೆಲೆಸುತ್ತೇನೆ ಎಂದು, ಹೀಗೆ ಬರುವ ಭಕ್ತರಿಗೆ ಇದನ್ನೇ ಪ್ರಸಾದವಾಗಿ ನೀಡುವಂತೆ ಹೇಳುತ್ತಾರೆ. ಇನ್ನು ಅಂದಿನಿಂದ ಇಂದಿನವರೆಗೂ ಮಹಾ ವಿಷ್ಣುವಿಗೆ ಪ್ರಿಯವಾದ ಕಡಪೀ ಮಾಲೈ ಅನ್ನು ಪ್ರಸಾದವಾಗಿ ನೀಡುತ್ತಿದ್ದಾರೆ.

ಇದೀಗ ಈ ಹೆಸರು ದೋಸೆಯಾಗಿ ಬದಲಾಗಿದೆ. ಇನ್ನು ಈ ಪ್ರಸಾದವನ್ನು ತಿನ್ನಲು ಜನರು ಬೇರೆ ಬೇರೆ ಪ್ರದೇಶಗಳಿಂದ ಈ ಜಾಗಕ್ಕೆ ಭೇಟಿ ನೀಡುತ್ತಾರೆ. ಇನ್ನು ಈ ಪ್ರಸಾದದ ರುಚಿ ಬಹಳ ಅದ್ಬುತವಾಗಿದೆ ಎಂದು ಹಾಗೆ ಇದನ್ನು ಬಹಳ ಶ್ರೇಷ್ಠವಾದ ಪ್ರಸಾದ ಎಂದು ಪರಿಗಣಿಸಲಾಗಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…