ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಭಾರಿ ಸಮಸ್ಯೆ ಇರತ್ತೆ! ಪವಿತ್ರಾ ಗೌಡ ಅವರ ಸ್ಥಿತಿ ಏನು ಗೊತ್ತಾ?

ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಭಾರಿ ಸಮಸ್ಯೆ ಇರತ್ತೆ! ಪವಿತ್ರಾ ಗೌಡ ಅವರ ಸ್ಥಿತಿ ಏನು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ದರ್ಶನ್ ತೂಗುದೀಪ, ಅವರ ಸಹವರ್ತಿ ಪವಿತ್ರಾ ಗೌಡ ಮತ್ತು ಇತರ 15 ಮಂದಿಯ ನ್ಯಾಯಾಂಗ ಬಂಧನವನ್ನು ಆಗಸ್ಟ್ 14, 2024 ರವರೆಗೆ ವಿಸ್ತರಿಸಲಾಗಿದೆ. ಸಂತ್ರಸ್ತೆ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳು ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.  ಆರೋಪಿಗಳು ಬೇರೆ ಬೇರೆ ಹೆಸರುಗಳಲ್ಲಿ ಸಿಮ್ ಕಾರ್ಡ್ ಬಳಸಿದ್ದು, ಅವರಿಂದ 83.55 ಲಕ್ಷ ರೂ.ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  ದರ್ಶನ್ ಮತ್ತು ಪವಿತ್ರಾ ಜೈಲಿನಲ್ಲಿ ಭೇಟಿಯಾಗದಂತೆ ಜೈಲು ಅಧಿಕಾರಿಗಳಿಗೆ ದರ್ಶನ್ ಕುಟುಂಬ ಮನವಿ ಮಾಡಿದೆ ಎಂದು ಕೊಡ ತಿಳಿಸಿದೆ.

ಈಗ ಪವಿತ್ರ ಗೌಡ ಅವರು ಕೊಡ ಎಲ್ಲರಂತೆ ಎರಡು ತಿಂಗಳಿಂದ ಜೈಲಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊದಲಿಗೆ ಜೈಲು ನಿರ್ಮಾಣ ಮಾಡುವಾಗ ಪುರುಷ ಸದಸ್ಯರನ್ನು ತಲೆಯಲ್ಲಿ ಇಟ್ಟುಕೊಂಡು ನಿರ್ಮಾಣ ಮಾಡಲಾಗಿತ್ತು. ಆದರೆ ದಿನ ಕಳೆಯುತ್ತಿದ್ದಂತೆ ಮಹಿಳೆಯ ಸದಸ್ಯರು ಕೊಡ ಹೆಚ್ಚಾದರೂ. ಆಗ ಜೈಲಿನಲ್ಲಿ ಎರಡು ರೀತಿಯ ಮಹಿಳೆಯರ ಜೈಲನ್ನು ನಿರ್ಮಾಣ ಮಾಡಲಾಗಿತ್ತು. ಮೊದಲಿಗೆ ಸಾಧಾರಣ ಜೈಲು ಅಲ್ಲಿ ಒಂದು ಸೆಲ್ ನಲ್ಲಿ 20ಮಹಿಳೆಯರು ಇರುವಂತೆ ಜಾಗ ನಿರ್ಮಾಣ ಮಾಡಲಾಯಿತು. ಅದಾದ ಬಳಿಕ ಅಲ್ಲಿಗೆ ಬಹಳ ಪ್ರಭಾವ ಮಹಿಳೆಯರು ಕೊಡ ಆರೋಪಿಯ ಕಾರಣದಿಂದ ಪಿರಮಿಡ್ ಸೆಲ್ ನಿರ್ಮಾಣ ಮಾಡಾಯಿತು. ಅಲ್ಲಿಗೆ ಬಹಳ ಪ್ರಭಾವಿ ಹಾಗೂ ಪ್ರಾಮುಕ್ಯತೆ ಇಡುವ ಮಹಿಳೆಯರ ಆರೋಪಿಯನ್ನು ಇರಸಲು ನಿರ್ಧಾರ 
ಮಾಡುತ್ತಾರೆ.

ಇನ್ನು ಈ ಪಿರಮಿಡ್ ಸೆಲ್ ನಲ್ಲಿ ಇಬ್ಬರು ಆರೋಪಿ ಮಹಿಳೆಯರು ಇರಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಅಲ್ಲಿ ಇರುವ ಆರೋಪಿಗಳಿಗೆ ಕೇವಲ 4 ಸ್ನಾನದ ಮನೆ ವ್ಯವಸ್ಥೆ ಇದ್ದು ಎಲ್ಲರೂ ಕೊಡ ಅದೇ ಬಳಸಬೇಕು. ಇನ್ನು ಊಟಕ್ಕೆ ದಿನಕ್ಕೆ ಒಂದು ಹೊತ್ತು ತಿಂಡಿ ಹಾಗೂ ಮುದ್ದೆ ಊಟ ಮತ್ತು ಚಪಾತಿ ಊಟವನ್ನು ಕಲಿಸಿಕೊಡಲಾಗುವುದು. ವಾರದ ಒಂದು ದಿನದಲ್ಲಿ ಮಾಂಸಾಹಾರ ಹಾಗೂ ಎರಡು ದಿನ ಮೊಟ್ಟೆ ಕೊಡಲಾಗುವುದು. ಅಲ್ಲಿ ಮಹಿಳೆಯರು ಕೊಡ ದುಡಿಮೆ ಮಾಡಿ ಹಣ ಸಂಪಾದನೆ ಮಾಡಿಕೊಳ್ಳಬಹುದು. ಈಗ ಪವಿತ್ರ ಗೌಡ ಅವರು ಕೊಡ ಈ ಪಿರಮಿಡ್ ಸೆಲ್ ನಲ್ಲಿ ಇದ್ದು, ಈ ಮೊದಲು ಶಶಿಕಲಾ,ಚಿನಮ್ಮ, ಸಂಜನಾ ಗಲ್ ರಾಣಿ ಹಾಗೂ ರಾಗಿಣಿ ಅವರು ಇದ್ದ ಸೆಲ್ ನಲ್ಲಿ ಎಂದಿನಂತೆ ಬದುಕುತ್ತಿದ್ದಾರೆ. ಇಲ್ಲಿ ಸ್ವಚ್ಚತೆ ಹಾಗೂ ಊಟದ ಬಹಳ ಕೆಟ್ಟ ವ್ಯವಸ್ಥೆ ಇದೆ ಎಂದು ಇಲ್ಲಿನ ಸೆಲ್ ನಲ್ಲಿ ಇದ್ದ ಕೈದಿಗಳು ಹೇಳುತ್ತಾರೆ.