ಬಾಡಿಗೆ ಮನೆಯಲ್ಲಿ ಇದ್ದಾ ಪವಿತ್ರ ಗೌಡ ಈಗ ಕೋಟ್ಯಾಧಿಪತಿ! ಈಕೆಗೆ ಈ ಯೋಗ ಬಂದಿದ್ದು ಹೇಗೆ ಗೊತ್ತಾ?

ಬಾಡಿಗೆ ಮನೆಯಲ್ಲಿ ಇದ್ದಾ ಪವಿತ್ರ ಗೌಡ ಈಗ ಕೋಟ್ಯಾಧಿಪತಿ! ಈಕೆಗೆ ಈ ಯೋಗ ಬಂದಿದ್ದು ಹೇಗೆ ಗೊತ್ತಾ?

ಇದೀಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ದರ್ಶನ್ ಎಂದರೆ ತಪ್ಪಾಗಲಾರದು. ಒಬ್ಬ ನಾಯಕ ನಟನಾಗಿ ಎಲ್ಲರಿಗೂ ಮಾದರಿ ಆಗಬೇಕಿದ್ದ ಈ ನಟ ಕೆಲವು ವರ್ಷಗಳಿಂದಲೂ ನಡೆದುಕೊಳ್ಳುವ ರೀತಿ ಎಲ್ಲರಿಗೂ ಕ್ರಮೇಣ ಬೇಸರವನ್ನು ಉಂಟು ಮಾಡಿದೆ. ಈತನ ಮೇಲೆ ಆರೋಪಗಳು ಶುರುವಾಗಿರುವುದು ಈಗಿನಿಂದಂತೂ ಅಲ್ಲಾ. ಬರೋಬ್ಬರಿ 2011ರ ವರ್ಷದಿಂದ ಒಂದಲ್ಲಾ ಒಂದು ಆರೋಪದಲ್ಲಿ ಈತ ಸಿಲುಕಿಕೊಂಡು ಬರುತ್ತಾ ಇದ್ದಾರೆ ಎಂದು ಹೇಳಬಹುದು. ಇನ್ನೂ 2003ನಲ್ಲಿ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.  ಆಕೆಯ ಮೇಲೆ 2011ನಲ್ಲಿ ಹಲ್ಲೆ ಮಾಡಿ ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ . ಇನ್ನೂ ಅದೆಲ್ಲದರ ನಂತರ ಆಗಾಗ ತನ್ನ ವಯಕ್ತಿಕ ಹಾಗೂ ಕುಟುಂಬದ ಗಲಾಟೆಯ ಸಲುವಾಗಿ ಪೊಲೀಸ್ ಅತಿಥಿಯಾಗಿ ಇದ್ದವರು ದರ್ಶನ್.

ಇನ್ನೂ ಅದೆಲ್ಲವೂ ಅವರ ವಯಕ್ತಿಕ ಆದ್ರೆ ಇನ್ನೂ ಕೆಲವೆಡೆ ತಮ್ಮ ಅಹಂಕಾರದ ಮಾತುಗಳನ್ನು ಆಡುತ್ತಾ ಸದಾ ಎಲ್ಲೆಡೆ ಸುದ್ದಿಯಲ್ಲಿ ಇದ್ದವರು ಎಂದು ಹೇಳಬಹುದು. ಎಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರಿಗೆ ಕೋಪ ಬಹಳ ಹೆಚ್ಚು ಎಂದು ಹೇಳಬಹುದು. ಅದು ಎಲ್ಲರಿಗೂ ತಿಳಿದಿರುವ ವಿಚಾರ ಇನ್ನೂ ಈತನಿಗೆ ಇಂದಿನ ಪರಿಸ್ಥಿತಿಯಲ್ಲಿ ಬಂದು ನಿಲ್ಲಲು ಆತನ ಆಪ್ತ ಗೆಳತಿ  ಮಾಡಿದ ಒಂದು ಸಣ್ಣ ಎಡವಟ್ಟು ಎಂದರೆ ತಪ್ಪಾಗಲಾರದು . ಹೌದು ಪವಿತ್ರ ಗೌಡ ತನಗೆ ಸಾಮಾಜಿಕ ಜಾಲತಾಣಗಳಲ್ಲಿ ರೇಣುಕಾ ಸ್ವಾಮಿ ಅವರಿಂದ ಈ ರೀತಿಯ ಮಾನಸಿಕ ಕಿರುಕುಳ ಅನುಭವಿಸಿರುವ ವಿಷಯದ ಬಗ್ಗೆ ದರ್ಶನ್ ಗೆ ಮುಟ್ಟಿಸದೇ ಒಮ್ಮೆ ಪೋಲಿಸರ ಸಹಾಯ ಪಡೆದುಕೊಂಡು ಕಾನೂನು ಬದ್ಧವಾಗಿ ನಡೆದಿದ್ದರೆ ಇಂದು ಈ ಯಾವ ಪರಿಸ್ಥಿತಿಯಲ್ಲಿಯೂ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಬಹುದು.

ಒಂದು ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದ ಈಕೆ ಇಂದು ಕೋಟಿ ಬೆಲೆ ಬಾಳುವ ಮನೆಯಲ್ಲಿ ಇದ್ದು ತಾನು ನಡೆಸುವಂತಹ ಬೋಟಿಕ್ ಇಂದ ಕೋಟಿ ಗಟ್ಟಲೆ ಸಂಪಾದನೆ ಮಾಡಿಕೊಂಡು ಬಾಳುತ್ತಿರುವ ಈಕೆ ಮಾಡಿದ ಒಂದು ಸಣ್ಣ ಎಡವಟ್ಟು ಈಗ ಸೆರೆಮನೆಯ ವಾಸವನ್ನು ಮಾಡುವ ಯೋಗ ತಂದು ಕೊಟ್ಟಿದೆ. 18ವರ್ಷ ಇದ್ದಾಗಲೇ ಪ್ರೀತಿಸಿ ಮದುವೆಯಾಗಿದ್ದ ಈಕೆ ಐಷಾರಾಮಿ ಜೀವನ ಬೇಕೆಂದು ಬಣ್ಣದ ರಂಗ ಆಯ್ಕೆ ಮಾಡಿಕೊಂಡು ತನ್ನ ಮೊದಲ ಗಂಡ ಸಂಜಯ್ ಸಿಂಗ್ ಗೆ ಡೈವರ್ಸ್ ನೀಡುತ್ತಾರೆ. ಇನ್ನಷ್ಟು ಐಶಾರಾಮಿ ಹಾಗೂ ಹೆಸ್ರು ಪ್ರಸಿದ್ದಿ ಮಾಡಬೇಕು ಎಂಬ ಆಸೆಯಿಂದ ದರ್ಶನ್ ಹಿಂದೆ ಬಿದ್ದು ಅವನಿಗೆ ಆಪ್ತ  ಗೆಳತಿ ಆಗಿ  ಇಂದು ಅದೇ ಎಡವಟ್ಟು ಮಾಡಿಕೊಂಡು ಎಲ್ಲವನ್ನೂ ಕಳೆದುಕೊಂಡು ಇಂದು ಪೊಲೀಸರ ಅತಿಥಿಯಾಗಿ ಇದ್ದಾರೆ ಎಂದು ಹೇಳಬಹುದು.