ಯಾಕೆ ಧ್ರುವ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ಕೆ ಮೇಘನ ಬಂದಿರಲಿಲ್ಲ ಗೊತ್ತಾ..? ಈಗ ಬಯಲು

ಯಾಕೆ ಧ್ರುವ ಪತ್ನಿ ಪ್ರೇರಣಾ ಸೀಮಂತ ಕಾರ್ಯಕ್ಕೆ ಮೇಘನ ಬಂದಿರಲಿಲ್ಲ ಗೊತ್ತಾ..? ಈಗ ಬಯಲು

ಕನ್ನಡದ ಯುವ ನಟ ಆಗಿ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನಟ ಧ್ರುವ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಡಿರುವುದು ನಟ ಧ್ರುವ ಸರ್ಜಾ ಅವರು ಬೆರಳಣಿಕೆ ಸಿನಿಮಾಗಳಾದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಮಟ್ಟಕ್ಕೆ ಯಶಸ್ವಿಯಾಗಿದ್ದಾರೆ..ಕನ್ನಡ ಚಿತ್ರರಂಗದ ಮತ್ತೊರ್ವ ಯಶಸ್ವಿ ನಟ ಆಗಿ ಇನ್ನೂ ಕೂಡ ಹೆಚ್ಚು ಹೆಚ್ಚು ಪ್ರಯತ್ನ ಪಡುತ್ತಾ ದೊಡ್ಡ ಸಿನಿಮಾಗಳನ್ನು ಇಂಡಿಯಾ ಲೆವೆಲ್ ನಲ್ಲಿ ನೀಡುವ ತವಕದಲ್ಲಿದ್ದಾರೆ ನಟ ಧ್ರುವ ಸರ್ಜಾ.. ಇದೀಗ ಮಾರ್ಟಿನ್ ಸಿನಿಮಾದಲ್ಲಿ ಬಿಜಿಯಾಗಿರುವ ಧ್ರುವ ಸರ್ಜಾ ಅವರು ಇತ್ತೀಚಿಗೆ ಕನಕಪುರ ರಸ್ತೆಯಲ್ಲಿ ಬರುವ ಅವರ ಫಾರ್ಮ್ ಹೌಸ್ ನಲ್ಲಿಯೇ ಅವರ ಪ್ರೀತಿಯ ಮಡದಿ ಪ್ರೇರಣ ಅವರ ಸೀಮಂತ ಕಾರ್ಯ ಮಾಡಿ ಮುಗಿಸಿದ್ದಾರೆ. 

ದ್ರುವ ಅವರ ಎರಡನೇ ಮಗುವಿನ ಆಗಮನದ ಸಂತಸದ ಸುದ್ದಿ ಇದಾಗಿದ್ದು, ಈಗಾಗಲೇ ಒಬ್ಬ ಮಗಳು ಧ್ರುವ ಸರ್ಜಾ ಅವರಿಗಿದೆ. ಧ್ರುವ ಸರ್ಜಾ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದು ಇದೀಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಅವರ ಫಾರ್ಮ್ ಹೌಸ್ ನಲ್ಲಿ ಹೆಂಡತಿಯ ಸೀಮಂತ ಕಾರ್ಯ ಮಾಡಿ ಮುಗಿಸಿದ ಧ್ರುವ ಸರ್ಜಾ ಅವರು, ಬಳಿಕ ವಿಡಿಯೋವನ್ನು ತಮ್ಮ ಪ್ರೀತಿಯ ಅಭಿಮಾನಿಗಳ ಬಳಿ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅವರ ಅಣ್ಣ ಚಿರು ಪತ್ನಿ ಮೇಘನ ರಾಜ್ ಕಾಣಿಸಿರಲಿಲ್ಲ. ಅವರ ಕುಟುಂಬದವರಾಗಲಿ ಯಾರು ಕೂಡ ಕಾಣಿಸಲಿಲ್ಲ..

ಆಗ ಇವರಿಬ್ಬರ ನಡುವೆ, ಇವರ ಎರಡು ಕುಟುಂಬಗಳ ನಡುವೆ ಏನೋ ಸರಿಯಲ್ಲ ಎನ್ನುವಂತೆ ಸೀಮಂತ ಕಾರ್ಯದ ದಿನ ಕೆಲವರು ಈ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಂಡಿದ್ದರು. ಅದಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಪ್ರೇರಣ ಅವರ ಸೀಮಂತ ಕಾರ್ಯದ ದಿನ ಧ್ರುವ ಸರ್ಜಾ ಅವರ ಅತ್ತಿಗೆ ಮೇಘನಾ ರಾಜ್ ಅವರು ಕೆಲಸದ ನಿಮಿತ್ತ ಅಂದು ಹೊರದೇಶಕ್ಕೆ ಹೋಗಿದ್ದರಂತೆ.. ಹಾಗಾಗಿ ಬಿಸಿನೆಸ್ ನಿಮಿತ್ತ ಕೆಲಸದ ಕುರಿತು ಫಾರಿನ್ ನಲ್ಲಿ ಇದ್ದ ಕಾರಣಕ್ಕಾಗಿಯೆ ಮೇಘನಾ ರಾಜ್ ಅವರು ಪ್ರೇರಣ ಅವರ ಸೀಮಂತ ಕಾರ್ಯಕ್ಕೆ ಬರಲು ಆಗಲಿಲ್ಲ ಎಂದು ತಿಳಿದುಬಂದಿದೆ. ಬರದೆ ಹೋದರೂ ಸಹ ವಿಡಿಯೋ ಕಾಲ್ ಮೂಲಕ ಧ್ರುವ ಸರ್ಜಾ ಮತ್ತು ಆತನ ಹೆಂಡತಿ ಪ್ರೇರಣಾ ಅವರಿಗೂ ಕೂಡ ವಿಶ್ ಮಾಡಿದ್ದಾರೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಇಲ್ಲಿದೆ ನೋಡಿ ವಿಡಿಯೋ, ಒಮ್ಮೆ ನೋಡಿ, ನೋಡಿದ ಬಳಿಕ ಈ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...