ಪ್ರೀತಿಗೆ ಅಡ್ಡ ಬಂದಿದ್ದ ಅಪ್ಪ..! ಬೇಡ ಅಂದ್ರೂ ಮದುವೆ ಆಗ್ತೀನಿ ಎಂದು ಹಠ ಹಿಡಿದ ಮಗಳನ್ನೆ ಮುಗಿಸಿದ ತಂದೆ

ಪ್ರೀತಿಗೆ ಅಡ್ಡ ಬಂದಿದ್ದ ಅಪ್ಪ..! ಬೇಡ ಅಂದ್ರೂ ಮದುವೆ ಆಗ್ತೀನಿ ಎಂದು ಹಠ ಹಿಡಿದ ಮಗಳನ್ನೆ ಮುಗಿಸಿದ ತಂದೆ

ಈ ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ನಾವು ಸಾಕಷ್ಟು ಧಾರುಣ ಘಟನೆಗಳನ್ನು ಈಗಾಗಲೇ ಹೆಚ್ಚು ನೋಡಿದ್ದೇವೆ. ಹೌದು ಇಂತಹ ಘಟನೆಗಳು ಹೆಚ್ಚಾಗಿ ಉತ್ತರ ಭಾರತದ ಕಡೆಗೆ ನಡೆಯುತ್ತವೆ. ನಮ್ಮ ಸೌತ್ ಕಡೆ ಇಂತಹ ಘಟನೆಗಳು ನಡೆಯುವುದು ತುಂಬಾನೇ ಕಡಿಮೆ. ಹೌದು ಬಂಧುಗಳೇ ನಾವು ಇವತ್ತು ನಿಮಗೆ ಹೇಳ ಹೊರಟಿರುವ ಮಾಹಿತಿ ಏನು ಅಂತ ಅಂದ್ರೆ, ಈ ತಂದೆ ತಾಯಿಗಳು ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿರುತ್ತಾರೆ. ಅವರ ಮಾನ ಮರ್ಯಾದೆಯನ್ನು ಕಾಪಾಡುವುದು ಆ ಮಕ್ಕಳ ಕರ್ತವ್ಯ ಆಗಿರುತ್ತದೆ ಅಲ್ವಾ. ಆದರೆ ಇಲ್ಲಿ ಆಗಿದ್ದು ಅದರ ವಿರುದ್ಧವಾಗಿ ಎಂದು ಹೇಳಬಹುದು.

ಬೆಂಗಳೂರು ಸಮೀಪದ ದೇವನಹಳ್ಳಿ ತಾಲೂಕಿನ ಬಿದನೂರು ಎನ್ನುವ ಗ್ರಾಮದಲ್ಲಿ ಮಂಜುನಾಥ ಅವರು ಒಂದು ಕೋಳಿ ಅಂಗಡಿಯನ್ನು ಇಟ್ಟುಕೊಂಡಿರುತ್ತಾರೆ. ಹೆಚ್ಚು ಕಷ್ಟ ಪಟ್ಟು ತನ್ನ ಮೂರು ಮಕ್ಕಳ ಈ ಮಂಜು ಅವರು ಬೆಳೆಸಿರುತ್ತಾರೆ. ಇದೀಗ ಈ ಘಟನೆಗೆ ಕಾರಣ ಆದವರು, ಈತನ ಎರಡನೆಯ ಮಗಳು, ಮೂರನೆಯ ಮಗಳು ಎಂದು ಕೇಳಿ ಬಂದಿದೆ. ಇವರೇ ತಂದೆ ಕೋಪಕ್ಕೆ ಒಳಗಾದವರು. ಮೂರನೇಯ ಮಗಳು ತಾನು ಅನ್ಯ ಜಾತಿಯ ಹುಡುಗನನ್ನು ಪ್ರೀತಿ ಮಾಡುವ ವಿಚಾರ ತಿಳಿಸಿ ಇತ್ತೀಚಿಗೆ ತಂದೆ ಜೊತೆ ಗಲಾಟೆ ಮಾಡಿಕೊಂಡಿದ್ದು, ಅದರ ಕುರಿತಾಗಿ ಪೊಲೀಸರ ಬಳಿ ಹೋಗಿ ಕಳೆದ ಮಂಗಳವಾರ ತಂದೆಯ ವಿರುದ್ಧವೇ ಮಾತನಾಡಿ, ಆ ಹುಡುಗನನ್ನೇ ನಾನೂ ಮದುವೆ ಆಗುತ್ತೇನೆ ಎಂದು ಪೊಲೀಸರ ಮುಂದೆ ಕಿರಿಚಾಡಿದ್ದಳಂತೆ, ನಂತರ ಪೊಲೀಸರು ಈತನ ಮೂರನೇ ಮಗಳು ಅಂದರೆ ಕಿರಿಯ ಮಗಳನ್ನು ಸಾಂತ್ವಾನ ಕೇಂದ್ರದಲ್ಲಿ ಇರುವಂತೆ ಹೇಳಿ ಈ ಗಲಾಟೆಯ ಬಗೆಹರಿಸಿ ಸಂದಾನ ಮಾಡಿ ಕಳಿಸಿದ್ದರು. 

ಇದಾದ ಬಳಿಕ ಈ ಮಂಜುನಾಥ ಊರಲ್ಲಿ ತಲೆಯೆತ್ತಿ ಕೊಂಡು ತಿರುಗಾಡಲು ಸಾಧ್ಯವಾಗಿಲ್ಲ. ನಾನೇ ಕೈಯಾರೆ ಕಷ್ಟಪಟ್ಟು ಬೆಳೆಸಿದ ನನ್ನ ಎರಡು ಹೆಣ್ಣು ಮಕ್ಕಳು ಈ ರೀತಿ ನನ್ನ ಮಾರಿಯಾದೆಯನ್ನು ತೆಗೆಯುತ್ತಿದ್ದಾರಲ್ಲ ಎಂದು ತುಂಬಾನೇ ನೊಂದುಕೊಂಡಿದ್ದರಂತೆ. ಇದಾದ ಬಳಿಕ ಎರಡನೇ ಮಗಳು ಕೂಡ ಅನ್ಯ ಜಾತಿಯ ಹುಡುಗನನ್ನೇ ಪ್ರೀತಿ ಮಾಡುವ ವಿಚಾರ ತಂದೆಗೆ ತಿಳಿದಿದೆ. ಇದನ್ನು ಎರಡನೇ ಮಗಳಿಗೆ ಬುದ್ಧಿವಾದ ಹೇಳಿ ಇದನ್ನು ಇಲ್ಲಿಗೆ ನಿಲ್ಲಿಸುವಂತೆ ಮಂಜುನಾಥ ಆ ಕವನ ಎನ್ನುವ 23 ವರ್ಷದ ತನ್ನ ಮಗಳಿಗೆ ಬುದ್ಧಿವಾದ ಹೇಳಿದ್ದಾನೆ..ಆದರೆ ಆಕೆಯು ಸಹ ತಂದೆಯ ಮಾತು ಕೇಳದ ಪರಿಸ್ಥಿತಿಯಲ್ಲಿ ಇರಲಿಲ್ಲ. ಬದಲಿಗೆ ತನ್ನ ತಂಗಿ ಪೊಲೀಸರಿಗೆ ಹೋಗಿ, ಅನ್ಯ ಜಾತಿಯ ಹುಡುಗನನ್ನು ಪ್ರೀತಿ ಮಾಡುತ್ತಿದ್ದೇನೆ, ಆತನನ್ನೇ ಮದುವೆ ಆಗುತ್ತೆನೆ, ನಮ್ಮ ಪ್ರೀತಿಗೆ ಜಾತಿ ಅಡ್ಡ ಬರುವುದಿಲ್ಲ ಎಂದು ಮಾತನಾಡಲು ಕುಮ್ಮಕ್ಕು ಕೊಟ್ಟಿದ್ದು ಇದೇ ಕವನ ಎಂದು ಅವರ ತಂದೆ ಇರುವ ಸತ್ಯ ಬಿಚ್ಚಿಟ್ಟಿದ್ದಾರೆ. 

ಹಾಗಾಗಿ ತಾವೇ ಅಂದು ರಾತ್ರಿ ಎರಡನೇ ಮಗಳ ಜೊತೆ ಅನ್ಯ ಜಾತಿಯ ಹುಡುಗನ ಜೊತೆ ಮದುವೆ ಬೇಡ ಎಂದು ಗಲಾಟೆ ಮಾಡಿಕೊಂಡಿದ್ದು, ನಂತರ ಆಕೆ ಅದಕ್ಕೆ ಒಪ್ಪಿಲ್ಲ, ಆದೆ ಕಾರಣಕ್ಕೆ ಮಲಗಿದ ಮೇಲೆ ಕೋಳಿ ಅಂಗಡಿ ಯಿಂದ ಚಾಕು ತಂದು, ಮಗಳ ತಲೆಗೆ ದೊಣ್ಣೆ ಏಟು ಕೊಟ್ಟು ಪ್ರಜ್ಞೆ ತಪ್ಪಿಸಿ, ಹೊಡೆದು ತನ್ನ ಸ್ವಂತ ಮಗಳನ್ನೇ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ನಂತರ ಪೊಲೀಸರ ಬಳಿ ಹೋಗಿ, ತನ್ನ ಮಗಳ ಕೊಂದಿರುವ ವಿಷಯ ಹೇಳಿ ಈತ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ..ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ತಂದೆ ತಾಯಿಗಳ ಕಷ್ಟಗಳನ್ನು ಸಹ ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ವಿಡಿಯೋ ನೋಡಿ, ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು

( video credit: Third Eye )