ತಮ್ಮ ಹಾಗೂ ದರ್ಶನ್ ನಡುವಿನ ವೈಮನಸಿನ ಬಗ್ಗೆ ಧ್ರುವ ಹೇಳಿದ್ದೇನು..? ಅದನ್ನ ಮಾಡಿ ಸಿಕ್ಕಿಹಾಕಿಕೊಳ್ಳಬೇಡಿ ಅಂದಿದ್ದು ಯಾರಿಗೆ

ತಮ್ಮ ಹಾಗೂ ದರ್ಶನ್ ನಡುವಿನ ವೈಮನಸಿನ ಬಗ್ಗೆ ಧ್ರುವ ಹೇಳಿದ್ದೇನು..? ಅದನ್ನ ಮಾಡಿ ಸಿಕ್ಕಿಹಾಕಿಕೊಳ್ಳಬೇಡಿ ಅಂದಿದ್ದು ಯಾರಿಗೆ

ಕನ್ನಡದ ಸ್ಟಾರ್ ನಟರ ಪಟ್ಟಿಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಬ್ಬರು.. ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗ ಇರುವುದು ಸತ್ಯ. ಅವರು ಒಂದು ಕೂಗು ಹಾಕಿದರೆ ಸಾಕು ಅವರ ಅಭಿಮಾನಿ ಬಳಗದವರು ಅವರ ಮುಂದೆಯೆ ನೆಕ್ಸ್ಟ್ ಸೆಕೆಂಡ್ ನಲ್ಲಿ ನಿಲ್ಲುತ್ತಾರೆ.. ಅಷ್ಟರ ಮಟ್ಟಿಗೆ ದರ್ಶನ್ ಅವರನ್ನು ಅವರ ಪ್ರೀತಿಯ ಅಭಿಮಾನಿಗಳು ಸದಾ ಪ್ರೀತಿಯಿಂದಲೇ ಬೆಳೆಸಿದ್ದಾರೆ, ಅಷ್ಟು ಇಷ್ಟಪಡುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಇತ್ತೀಚಿಗೆ ನಮ್ಮ ಕಾವೇರಿ ಹೋರಾಟದಲ್ಲಿ ಸ್ಯಾಂಡಲ್ವುಡ್ ಬಳಗ ಒಂದಾಗಿತ್ತು.

ನಟ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಇನ್ನು ಕೆಲ ಸ್ಟಾರ್ ನಟರು ಕೂಡ ಆಗಮಿಸಿದ್ದರು.ಆ ವೇಳೆ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಏನೋ ಸರಿ ಇಲ್ಲ ಎಂಬಂತೆ ಕಂಡು ಬಂದಿದ್ದು, ಅವರವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆಯನ್ನ ನಡೆಸಿದ್ದರು. ಇದೇ ಕುರಿತಾಗಿ ನಿನ್ನೆ ನಟ ದ್ರುವ ಸರ್ಜಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರ ಈ ಪ್ರಶ್ನೆಗೆ, ನೋಡಿ ದರ್ಶನ್ ಸರ್ ನಮಗಿಂತ ತುಂಬಾನೇ ಸೀನಿಯರ್ಸ್ ಆಕ್ಟರ್, ಅವರಿಗೆ ನಾವು ಎಷ್ಟು ಮರ್ಯಾದೆ ಕೊಡಬೇಕು ಅಷ್ಟು ಮರ್ಯಾದೆ ಕೊಟ್ಟೆ ಕೊಡುತ್ತೇವೆ, ಅವರ ಪ್ರೆಸೆನ್ಸ್ ಅಲ್ಲಿಯೂ ಕೊಡುತ್ತೇವೆ, ಆಬ್ಸೆನ್ಸ್ ಅಲ್ಲಿಯೂ ಕೊಡುತ್ತೇವೆ.  

ಅವರು ನಮ್ಮ ಸಿನಿಮಾ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ ನಾವು ಅದನ್ನು ಎಂದಿಗೂ ಮರೆಯಲು ಆಗುವುದಿಲ್ಲ. ಆದರೆ ಈ ಪ್ರಶ್ನೆ ಬಂದ ಬಳಿಕ ನಾನು ನಾಟಕ ಆಡಲು ಆಗುವುದಿಲ್ಲ, ನನಗೆ ನನ್ನ ಮನಸ್ಸಿನಲ್ಲಿ ಎರಡು ಮೂರು ಪ್ರಶ್ನೆಗಳಿವೆ ದರ್ಶನ್ ಸರ್ ಅವರಿಗೆ ಕೇಳುವಂತದ್ದವು, ಅದನ್ನು ಕೇಳಿ ಬಗೆಹರಿಸಿಕೊಳ್ಳುತ್ತೇನೆ. ನಮಗೂ ಸೆಲ್ಫ್ ರೆಸ್ಪೆಕ್ಟ್ ಇದೆ ಅಲ್ಲವಾ' ಎಂದರು.. ಇನ್ನು ಏನೇನೆಲ್ಲ ತಮ್ಮ ಮತ್ತು ದರ್ಶನ್ ಅವರ ನಡುವಿನ ವೈ ಮನಸಿನ ಕುರಿತಾಗಿ ನಟ ದ್ರುವ ಸರ್ಜಾ ಹೇಳಿದ್ದೇನು ಗೊತ್ತೇ..?

ಹೌದು ಧ್ರುವ ಸರ್ಜಾ ಅವರು ಆ ಕೆಲಸವನ್ನು ಎಂದಿಗೂ ದಯವಿಟ್ಟು ಮಾಡಬೇಡಿ, ಮಾಡ್ತೀರಾ ಮಾಡಿ ಪರವಾಗಿಲ್ಲ, ಆದರೆ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಹೇಳಿದ್ದು ಯಾರಿಗೆ ಎಂದು ಈ ವಿಡಿಯೋ ನೋಡಿ ತಿಳಿದುಕೊಳ್ಳಿ, ಧನ್ಯವಾದ...

( video credit :  Kannada news & KFI insider )