ಮನೆಯಲ್ಲಿ ಕ್ಯಾಲೆಂಡರ್ ಹಾಗೂ ಗಡಿಯಾರ ಈ ದಿಕ್ಕಿನಲ್ಲಿ ಮಾತ್ರ ಇಡಬಾರದು! ಯಾವ ದಿಕ್ಕು ಹಾಗೂ ಯಾಕೆ ಗೊತ್ತಾ?
ವಾಸ್ತು ಶಿಲ್ಪವು ಮನೆ ಅಥವಾ ಕಟ್ಟಡಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ವಾಸ್ತು ಶಿಲ್ಪದ ನಿಯಮಗಳನ್ನು ಅನುಸರಿಸಿದರೆ ಮನೆಗೆ ಹೆಚ್ಚು ಪ್ರಕಾಶ, ಸ್ವಚ್ಛ ವಾತಾವರಣ ಮತ್ತು ಹವಾ ಸಂಚಾರ ದೊರೆಯುತ್ತದೆ, ಇದು ಆರೋಗ್ಯಕ್ಕೆ ಹಿತಕಾರಿ. ವಾಸ್ತು ಶಿಲ್ಪವು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಹರಿವನ್ನು ಸುಗಮಗೊಳಿಸುತ್ತದೆ. ಇದು ಮನೆಯಲ್ಲಿ ನೆಮ್ಮದಿ, ಸಮೃದ್ಧಿ ಮತ್ತು ಸಂತೋಷವನ್ನು ತರಲು ಸಹಾಯಕವಾಗುತ್ತದೆ. ಸರಿಯಾದ ವಾಸ್ತು ನಿಯಮಗಳನ್ನು ಅನುಸರಿಸಿದರೆ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಶಿಲ್ಪವು ಭೌತಿಕ, ಭಾವನಾತ್ಮಕ ಮತ್ತು ಆತ್ಮೀಯ ಸಮತೋಲನವನ್ನು ತರುತ್ತದೆ.
ವಾಸ್ತು ಶಿಲ್ಪವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅಜ್ವಲತೆಯ ಸಂಕೇತವಾಗಿದೆ. ಅಂದರೆ, ವಾಸ್ತು ಶಿಲ್ಪವು ಮನೆಯ ಆರೈಕೆ ಮತ್ತು ಸಮೃದ್ಧಿಗೆ ಬಹು ಮುಖ್ಯವಾಗಿದೆ. ಕೆಲವೊಮ್ಮೆ ಕೇವಲ ಮನೆ ಕಟ್ಟುವ ಸಮಯದಲ್ಲಿ ನೀವು ಈ ರೀತಿ ಎಲ್ಲಾ ವಿಷಯಗಳನ್ನು ನೀವು ಗಣನೀಯ ಮಾಡಿಕೊಂಡು ಕೇವಲ ನಿರ್ಮಾಣಕ್ಕೆ ವಾಸ್ತು ನೋಡಿದ್ರೆ ಸಾಲದು ಮನೆಯಲ್ಲಿ ಇಡುವ ವಸ್ತುಗಳನ್ನು ಜೋಡಿಸುವ ಸಮಯದಲ್ಲಿ ಕೊಡ ನೀವು ವಾಸ್ತು ಶಿಲ್ಪ ನೋಡಿ ಜೋಡಿಸಿದಾಗ ಮಾತ್ರ ನಿಮ್ಮ ಮನೆಯಲ್ಲಿ ನೆಮ್ಮದಿ ಸುಖ ನೆಮ್ಮದಿ ಎಲ್ಲವು ಕೊಡ ನೆಲೆಸಲು ಸಾಧ್ಯ. ಹಾಗೆಯೇ ನಿಮ್ಮ ಮನೆಯಲ್ಲಿ ಇಡುವ ಗಡಿಯಾರ ಹಾಗೂ ಕ್ಯಾಲೆಂಡರ್ ಗಳಿಗೂ ಕೊಡ ದಿಕ್ಕು ಬಹಳ ಮುಖ್ಯ ಎಂದು ವಾಸ್ತು ಶಾಸ್ತ್ರ ಹೇಳಲಿವೆ.
ಇನ್ನೂ ಮನೆಯಲ್ಲಿ ಇಡುವ ಗಡಿಯಾರ ಗುಂಡಾಕಾರ ಇರುವ ಗಡಿಯಾರ ಮಾತ್ರ ಇಡಬೇಕು ಚೂಪಾದ ಅಥವಾ ಬೇರೆಯ ರೀತಿಯ ಗಡಿಯಾರ ನೀವು ಇಟ್ಟಾಗ ಮನೆಯಲ್ಲಿ ಕಷ್ಟದ ವಾತಾವರಣ ಸೃಷ್ಟಿ ಆಗಲಿದೆ. ಇನ್ನೂ ಗಡಿಯಾರ ಕೇವಲ ಪೂರ್ವ , ಉತ್ತರ ದಿಕ್ಕಿಗೆ ಮಾತ್ರ ಇಡಬೇಕು ಇಲ್ಲದೆ ಇದ್ದಾಗ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿಗೆ ಅಶುಭ ಎಂಬ ಹೆಸರು ಇದ್ದರಿಂದ ಗಡಿಯಾರ ಹಾಗೂ ಕ್ಯಾಲೆಂಡರ್ ಕೊಡ ಇಡಬಾರದು. ಇನ್ನೂ ಗಡಿಯಾರದಲ್ಲಿ ದೇವರ ಫೋಟೋ ಇರುವುದು ಕೊಡ ಇಡಬಾರದು. ದೇವರಿಗೆ ನಿತ್ಯ ಪೂಜೆ ಸಲ್ಲಿಸುವ ವಾಡಿಕೆ ಇದ್ದು ಹಬ್ಬ ಹರಿದಿನಕ್ಕೆ ಮಾತ್ರ ಶುಭ್ರ ಆಗುವ ಕಾರಣ ಧೂಳನ್ನು ಮಾಡುವುದರಿಂದ ಮನೆಗೆ ದರಿದ್ರ ಉಂಟು ಮಾಡಲಿದೆ. ಇನ್ನೂ ಕ್ಯಾಲೆಂಡರ್ ಕೊಡ ಸೂರ್ಯ ಹುಟ್ಟುವ ದಿಕ್ಕಿನಲ್ಲಿ ಕೇಸರಿ ಹಾಗೂ ಬಿಳಿ ಬಣ್ಣದ ಕ್ಯಾಲೆಂಡರ್ ಇಟ್ಟಾಗ ನಿಮ್ಮ ಮನೆಗೆ ದಾರಿದ್ರ್ಯ ಉಂಟಾಗದು. ( video credit : jeet media network )