ನಾನು ಏನು ತಪ್ಪು ಮಾಡಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರು ಇಟ್ಟ ದಿವ್ಯ ವಸಂತ :ಅಯ್ಯೋ ಪಾಪ ಎಂದ ನೆಟ್ಟಿಗರು

ನಾನು ಏನು ತಪ್ಪು ಮಾಡಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರು ಇಟ್ಟ ದಿವ್ಯ ವಸಂತ  :ಅಯ್ಯೋ ಪಾಪ ಎಂದ ನೆಟ್ಟಿಗರು

ಇತ್ತೀಚೆಗಷ್ಟೇ ಮಸಾಜ್ ಪಾರ್ಲರ್ ಒಂದರಿಂದ ಹಣ ವಸೂಲಿ ಮಾಡಿದ್ದಾರೆಂಬ ಆರೋಪ ದಿಂದ ಜೈಲ್ ಪಾಲಾಗಿದ್ದ ದಿವ್ಯ ವಸಂತ ಅವರು ಇದ್ರಲ್ಲಿ ನನ್ನ ತಪ್ಪು ಏನಿಲ್ಲ . ಇದನ್ನೇ ಬಂಡವಾಳ ಮಾಡಿಕೊಂಡ ಸುದ್ದಿ ಮಾಧ್ಯಮಗಳು ತಮ್ಮ  ಟಿಆರ್ಪಿ ಗೋಸ್ಕರ ಪ್ರಚಾರ ಮಾಡಿದ್ದಾರೆ . ನಾನು ಮಾಡಿರುವ ಒಂದು ವಿಡಿಯೋ ಅದರಲ್ಲಿ ಇವರ ಜೊತೆ ನಾನು ಅನೈತಿಕ ಸಂಬಂಧ  ಹೊಂದಿದ್ದಾಳೆ  ಎಂದು ಆರೋಪಿಸಿದ್ದಾರೆ . ಅದು ಸುಳ್ಳು ಅವರು ನನ್ನ ತಂದೆಯ ಸಮಾನ . ಅವರು ನನ್ನನು ದತ್ತು ತೆಗೆದು ಕೊಂಡಿದ್ದಾರೆ ಎಂದು ತಿಳಿಸಿದ್ದಾರೆ .

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನೊಬ್ಬ ಪ್ರಮುಖವಾದ ವ್ಯಕ್ತಿಯನ್ನು ನಿಮಗೆ ಪರಿಚಯ ಮಾಡಿಕೊಡ್ತೀನಿ. ಒನ್ ಅಂಡ್ ಓನ್ಲಿ ನಮ್ಮ ವೆಂಕಟೇಶ್ ಅಪ್ಪ. ನಾನು ಮೀಡಿಯಾದಲ್ಲಿ ವೃತ್ತಿ ಜೀವನ ಆರಂಭ ಮಾಡಿದ್ದು, ವೆಂಕಟೇಶಪ್ಪ ಅವರ ಕಡೆಯಿಂದ. ಅವರು ಒಂದು ಚಾನೆಲ್‌ನಲ್ಲಿ ಮೆಟ್ರೋ ಚೀಫ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದಕ್ಕಾಗಿ ನನ್ನನ್ನು ದತ್ತು ತೆಗೆದುಕೊಂಡಿದ್ದಾರೆ. ನಾನು ಅವರ ದತ್ತು ಪತ್ರಿ.. ಈ ಬಗ್ಗೆ ನೀನು ಹೇಳಪ್ಪ.. ಎಂದು ನಗೆ ಬೀರುತ್ತಾಳೆ.

ಈ ವೇಳೆ ಮಾತನಾಡಿದ ವೆಂಕಟೇಶಪ್ಪ, ನಮಸ್ಕಾರ ಎಲ್ಲರಿಗೂ.. ನನಗೆ ದಿವ್ಯಾ ವಸಂತ ಪರಿಚಯ ಆಗಿದ್ದು ಟಿವಿ 1 ಚಾನೆಲ್‌ನಲ್ಲಿ ಮೆಟ್ರೋ ಚೀಫ್ ಆಗಿ ಕೆಲಸ ಮಾಡುತ್ತಿದ್ದಾಗ. ಆಗ ರಿಪೋರ್ಟರ್ ಆಗಿ ಬಂದ ದಿವ್ಯಾ ಉತ್ತಮವಾಗಿ ಕೆಲಸ ಕಲಿಯುತ್ತಿದ್ದಳು. ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಿದ್ದಳು. ಅವಳ ಶ್ರಮವೇ ಈಗ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಯಾರಾದರೂ ವೃತ್ತಿಯಲ್ಲಿ ಬೆಳೆಯಬೇಕು ಅಲ್ವಾ ಅದಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ನನಗೆ ಯಾರೂ ಹೆಣ್ಣು ಮಕ್ಕಳಿಲ್ಲ. ನಾನು ಇವಳನ್ನು ನನ್ನ ಮಗಳೆಂದೇ ಭಾವಿಸಿದ್ದೇನೆ. ಏನೇ ಬೆಳೆದರೂ ಅದಕ್ಕೆ ನಾನೂ ಸಪೋರ್ಟ್ ಮಾಡುತ್ತೇನೆ. ಮಕ್ಕಳು ಬೆಳೆಯಬೇಕು ಅಲ್ವಾ.? ನಾವು ಸತ್ತಮೇಲೆ ಯಾರಾದರೂ ನಮ್ಮ ಹೆಸರೇಳಲು ಇರಬೇಕು ಎನ್ನುವ ಭಾವನೆ ನನ್ನದು ಎಂದು ಹೇಳಿಕೊಂಡಿದ್ದಾರೆ.