ನಾಳೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿರುವ ಚಾಲೆಂಜಿಂಗ್ ಸ್ಟಾರ್! ಯಾಕೆ ಯಾವ ಸಮಸ್ಯೆಯಿಂದ ಗೊತ್ತಾ?

ನಾಳೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿರುವ  ಚಾಲೆಂಜಿಂಗ್ ಸ್ಟಾರ್! ಯಾಕೆ ಯಾವ ಸಮಸ್ಯೆಯಿಂದ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯ ನಟರು ಇದ್ದಾರೆ. ಅದ್ರಲ್ಲೂ ನಮ್ಮ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಹೆಸರು ಪಡೆದಿರುವ ನಟ ಎಂದ್ರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೂ ದರ್ಶನ್ ಅವರು ಚಿತ್ರ ರಂಗಕ್ಕೆ ಗುರುತಿಸಿಕೊಂಡು ಎರಡು ದಶಕಗಳೇ ಉರುಳಿದೆ ಹೀಗಿದ್ದರೂ ಕೊಡ ತನ್ನ ಕರಿಯ ಸಿನಿಮಾ ಮೂಲಕ ಸೃಷ್ಟಿ ಮಾಡಿದ ಕ್ರೇಜ್ ಇಂದಿನ ವರೆಗೂ ಕೊಡ ಉಳಿಸಿಕೊಂಡು ಬಂದಿದ್ದಾರೆ ಎಂದೇ ಹೇಳಬಹುದು. ಇನ್ನೂ ಇವರು ಸಿನಿಮಾ ರಂಗದ ಕುಟುಂಬದಿಂದ ಬಂದಿದ್ದರು ಕೊಡ ಇವ್ರ ಮೊದಲ ಹೆಜ್ಜೆಗಳು ಅಷ್ಟಾಗಿ ಸಲ್ಭದ ಹಾದಿಯಿಂದ ಕೊಡಿರಲಿಲ್ಲ ಎಂದೇ ಹೇಳಬಹುದು. ಮೊದಲಿಗೆ ಒಂದು ಸಣ್ಣ ಅವಕಾಶಕ್ಕಾಗಿ ಅಲೆದಾಡುತ್ತಿದ್ದ ದರ್ಶನ್ ಮೊದಲಿಗೆ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರೂ.

ಆ ನಂತರ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದ ದರ್ಶನ್ ಗೆ ಸಿಕ್ಕ ಬ್ಲಾಕ್ ಬಸ್ಟರ್ ಸಿನಿಮಾ ಎಂದ್ರೆ ಅದು ಕರಿಯ. ಇದೊಂದೇ ಸಿನಿಮಾ ದರ್ಶನ್ ಅವ್ರ ಸಿನಿಮಾ ಪಯಣವನ್ನು ಬದಲಾಯಿಸಿತು ಎಂದೇ ಹೇಳಬಹುದು. ಆ ನಂತರ ದರ್ಶನ್ ಅವರು ಹಿಂದಕ್ಕೆ ತಿರುಗಿ ನೋಡಿದ್ದೆ ಇಲ್ಲ ಆದರೆ ಕರೋನ ಬಳಿಕ ದರ್ಶನ್ ಸ್ಕ್ರಿಪ್ಟ್ ವಿಚಾರದಲ್ಲಿ ಎಡವುತ್ತಿದ್ದರೆ ಎಂದು ಅಭಿಮಾನಿಗಳಿಗೆ ಬೇಸರ ಇದ್ದರೂ ಕೊಡ ದರ್ಶನ್ ಮೇಲೆ ಇರುವ ಅಭಿಮಾನ ಅಭಿಮಾನಿಗಳಿಗೆ ಕೊಂಚವೂ ಕುಗ್ಗಿಲ್ಲ. ಇನ್ನೂ ಇವರ ಮೇಲೆ ಸಾಕಷ್ಟು ಆರೋಪಗಳನ್ನು ಸೃಷ್ಟಿ ಮಾಡಿದ್ದರು

ಕೊಡ ಒಂದು ದಿನವೂ ದರ್ಶನ್ ಅಭಿಮಾನಿಗಳು ಇವರ ವಿರುದ್ದ ನಿಂತಿದ್ದೆ ಇಲ್ಲ. ಇನ್ನೂ ಇದರಲ್ಲಿ ತಿಳಿಯಲಿದೆ ದರ್ಶನ್ ಅವರಿಗೆ ಇರುವ ಫ್ಯಾನ್ ಬೆಸ್ ಎಂತದ್ದು ಎಂದು. 

ಚಾಲೆಂಜಿಂಗ್ ಸ್ಟಾರ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಕನ್ನಡದ ಸ್ಟಾರ್ ದರ್ಶನ್ ತೂಗುದೀಪ ಅವರು ಇತ್ತೀಚೆಗೆ ಗಾಯಗೊಂಡ ತಮ್ಮ ಎಡಗೈಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಗಾಯಗೊಂಡಿರುವ ಕೈಗೆ ವೈದ್ಯರು ಗುರುವಾರ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ನಟ ಖಚಿತಪಡಿಸಿದ್ದಾರೆ

ಇನ್ನೂ ಸಾಕಷ್ಟು ದಿನ ಕಳೆದ ಬಳಿಕ ಮಾದ್ಯಮಗಳ ಮುಂದೆ ಬಂದ ದರ್ಶನ್ ಮುಂಚೆಯೇ ರೀತಿ ಸಾಧಾರಣವಾಗಿ ಕಾಣಿಸಲಿಲ್ಲ. ನೆನ್ನೆ ಮಂಡ್ಯದಲ್ಲಿ ನಡೆದ ಬಹಿರಂಗ ಸಭೆಗೆ ಭಾಗಿಯಾಗಿದ್ದ ದರ್ಶನ್ ಕೈ ಗೆ ಬ್ಯಾಂಡೇಜ್ ಹಾಕಿಕೊಂಡು ಭಾಗಿ ಆಗಿದ್ದರು. ಇನ್ನೂ 2020 ರಲ್ಲಿ ಜೋಡೆತ್ತುಗಳಂತೆ ಸುಮಲತಾ ಅವರಿಗೆ ಸಾತ್ ನೀಡಿದ್ದ ದರ್ಶನ್ ಹಾಗೂ ಯಶ್ ಅವರು ಈಗಲೂ ಅವರ ಸಾರಥಿಯಾಗಿ ನಿಂತಿದ್ದಾರೆ. ಇನ್ನೂ ಸುಮಲತಾ ಅವರ ಪ್ರಚಾರ ಮಾಡಲೆಂದು ಬಂದ ದರ್ಶನ್ ಇಂದೂ ನಾನು ಆಸ್ಪತ್ರೆಗೆ ದಾಖಲು ಆಗಳಿದ್ದೇನೆ ಹಾಗೂ ನಾಳೆ ಶಸ್ತ್ರ ಚಿಕಿತ್ಸೆ ಇದೆ ಎಂದು ತಿಳಿಸಿದ್ದಾರೆ. ಆದ್ರೆ ಇವರಿಗೆ ಇರುವ ಸಮಸ್ಯೆಯ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಇನ್ನೂ ನಮ್ಮ ದಚ್ಚು  ಬೇಗ ಸುದರಿಸಿಕೋಳ್ಳಲ್ಲಿ ಎಂದು ನಾವು ಕೊಡ ಆಶಿಸೋಣ.