ದರ್ಶನ್ ಮಾತು ಕೇಳಿ ಧ್ರುವ ಸರ್ಜಾ ಫ್ಯಾನ್ಸ್ ಫುಲ್ ಗರಂ..! ಕೈವಾ ವೇದಿಕೆಯಲ್ಲಿ ದಚ್ಚು ಹೇಳಿದ್ದಿಷ್ಟು

ದರ್ಶನ್ ಮಾತು ಕೇಳಿ ಧ್ರುವ ಸರ್ಜಾ ಫ್ಯಾನ್ಸ್ ಫುಲ್ ಗರಂ..! ಕೈವಾ ವೇದಿಕೆಯಲ್ಲಿ ದಚ್ಚು ಹೇಳಿದ್ದಿಷ್ಟು

ಜಯತೀರ್ಥ ಅವರ ನಿರ್ದೇಶನದಲ್ಲಿ ಕನ್ನಡದ ಕೈವ ಚಿತ್ರ ಇಷ್ಟ್ರಲ್ಲೇ ಬಿಡುಗಡೆಯಾಗುತ್ತಿದೆ..ಹೌದು ಈ ಸಿನಿಮಾದಲ್ಲಿ ನಾಯಕ ನಟ ಆಗಿ ಬಜಾರ್ ಮತ್ತು ಬೈಟು ಲವ್ ಖ್ಯಾತಿಯ ಧನ್ವೀರ್ ಅವರು ಅಭಿನಯ ಮಾಡುತ್ತಿದ್ದಾರೆ. ಇತ್ತೀಚಿಗೆ ಕೈವಾ ಸಿನೆಮಾದ ಟ್ರೈಲರ್ ಲಾಂಚ್ ಆಗಿದ್ದು, ನಟ ದರ್ಶನ್ ಅವರೇ ಸಿನಿಮಾದ ಟ್ರೈಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಇದು 1983ರ ಸಮಯದಲ್ಲಿ ನಡೆದಂತಹ ಬೆಂಗಳೂರಿನ ನೈಜ ಘಟನೆ ಆಧಾರಿತ ಸಿನಿಮಾ ಈ ಕೈವಾ ಆಗಿದ್ದು ಧನ್ವಿರ್ ಅವರು ಅತ್ಯದ್ಭುತವಾಗಿ ಟ್ರೈಲರ್ ನಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.   

ಟ್ರೈಲರ್ ಲಾಂಚ್ ವೇಳೆ ಧನ್ವೀರ್ ಅವರಿಗೆ ಸಾಥ್ ಆಗಿ ನಟ ದರ್ಶನ್, ಚಿಕ್ಕಣ್ಣ, ಹಾಗೆ ಅಭಿಷೇಕ್ ಅಂಬರೀಶ್ ಜೊತೆಗೆ ಆಶಾ ಭಟ್ ಅವರು ಸಹ ಕಾಣಿಸಿಕೊಂಡರು. ಈ ಸಿನಿಮಾ ಬಗ್ಗೆ ಮಾತನಾಡಿದ ದರ್ಶನ್ ಅವರು ಸಿನಿಮಾದ ಟ್ರೈಲರ್ ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ, ಸಿನಿಮಾ ಇದೇ ಡಿಸೆಂಬರ್ 8ನೇ ತಾರೀಕು ಬರುತ್ತಿದ್ದು, ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ ಎಂದರು. ಹಾಗೆ ನಾನು ಸಿನಿಮಾದ ಕೆಲವು ದೃಶ್ಯಗಳನ್ನು ನೋಡಿದೆ ಜಯತೀರ್ಥ ಅವರು ಅತ್ಯದ್ಭುತವಾಗಿ ನಿರ್ದೇಶನ ಮಾಡಿದ್ದಾರೆ ಎಂದು ಹಾಡಿ ಹೊಗಳಿದರು.

ಸಿನಿಮಾ ತಂಡಕ್ಕೆ ಶುಭಾಶಯ ಕೋರಿದ ದರ್ಶನ್  ತದನಂತರದಲ್ಲಿ ಈಗಿನ ಯುವ ನಟರಿಗೆ ಇದು ಕಿವಿ ಮಾತು ಹೇಳುತ್ತೇನೆ ಎಂದು, ನೀವು ಹಿತ್ತಾಳೆ ಕಿವಿಗಳನ್ನು ಇಟ್ಟುಕೊಳ್ಳಬೇಡಿ, ಯಾರೋ ಹೇಳಿದ್ದನ್ನು ಕೇಳಬೇಡಿ, ಈ ಪಿನ್ ಇಡುವವರು ತುಂಬಾನೇ ಇದ್ದಾರೆ. ನಿಮ್ಮ ಬಳಿಯೂ ಫೋನ್ ಇದೆ, ನೀವೇ ನೇರವಾಗಿ ಅವರ ಜೊತೆ ಮಾತನಾಡಿ ಬಗ್ಗೆ ಹರಿಸಿಕೊಳ್ಳಿ ಎಂದು ಡಿ ಬಾಸ್ ಹೇಳಿದ್ದಾರೆ. ಇದನ್ನೆಲ್ಲ ನೋಡಿದ ಅಭಿಮಾನಿಗಳು ಈ ಮಾತನ್ನು ನಟ ದ್ರುವ ಸರ್ಜಾ ಅವರಿಗೆ ದರ್ಶನ್ ಅವರು ಹೇಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
ಹಾಗೆ ಧ್ರುವ ಸರ್ಜಾ ಅವರ ಅಭಿಮಾನಿ ಬಳಗ ಈ ಮಾತಿಗೆ ಟಕ್ಕರ್ ಕೊಡುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ದಾಪುಗಾಲು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಟ ದರ್ಶನ್ ಅವರ ಈ ಮಾತಿಗೆ ನಿಮ್ಮ ಅನಿಸಿಕೆ ಏನು ಎಂದು ನಮಗೆ ಕಾಮೆಂಟ್ ಮಾಡಿ ಧನ್ಯವಾದಗಳು...