ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು ! ಡೆಟ್ ನೋಟ್ ಅಲ್ಲಿ ಬಯಲಾದ ರಹಸ್ಯ ಏನು ಗೊತ್ತಾ?

ದರ್ಶನ್ ಫಾರ್ಮ್ ಹೌಸ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು ! ಡೆಟ್ ನೋಟ್ ಅಲ್ಲಿ ಬಯಲಾದ ರಹಸ್ಯ ಏನು ಗೊತ್ತಾ?

ಜೂನ್ 9, 2024 ರಂದು ಶವವಾಗಿ ಪತ್ತೆಯಾದ ರೇಣುಕಾ ಸ್ವಾಮಿ ಅವರ ಹತ್ಯೆಗೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆ ದರ್ಶನ್ ಅವರ ಪತ್ನಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ, ಇದು ಘಟನೆಯನ್ನು ಪ್ರಚೋದಿಸಿದೆ ಎಂದು ನಂಬಲಾಗಿದೆ.  ದರ್ಶನ್ ಮತ್ತು ಪವಿತ್ರಾ ಮತ್ತು ಇತರ ಹನ್ನೊಂದು ಮಂದಿಯನ್ನು ಜೂನ್ 16 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನೂ ದರ್ಶನ್ ತೂಗುದೀಪ ಬಂಧಿತ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಂಗಳೂರು ಪೊಲೀಸ್ ತನಿಖೆಯಿಂದ ಸ್ವಾಮಿಗೆ ಹಲವು ಗಾಯಗಳಾಗಿದ್ದು, ಭಾರವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.  

ದರ್ಶನ್ ನೇರವಾಗಿ ಭಾಗಿಯಾಗಿದ್ದಾರೋ ಅಥವಾ ದೊಡ್ಡ ಪಿತೂರಿಯ ಭಾಗವಾಗಿದ್ದಾರೋ ಎಂದು ಪೊಲೀಸರು ತನಿಖೆಯ ಮೂಲಕ ತಿಳಿಸಬೇಕಾಗಿದೆ.  ಬಂಧಿತ ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ದೇಶಾದ್ಯಂತ ಬಹಳ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಬಹುದು. ಇನ್ನೂ ಬೆಂಗಳೂರಿನಲ್ಲಿ ಸ್ಥಳ ಮಹಜರು ಮುಗಿದಿದ್ದು. ಈಗ ಮೈಸೂರಿನಲ್ಲಿ ಸ್ಥಳ ಮಹಜರು ಮಾಡಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಈಗ ಸಿಕ್ಕಿರುವ ಸಾಕ್ಷಿ ಪ್ರಕಾರ ಈ ಎಲ್ಲಾ ಕೃತ್ಯವು ದರ್ಶನ್ ಅವರೇ ಮಾಡಿಸಿದ್ದಾರೆ ಎಂಬುದನ್ನು ಮನದಟ್ಟು ಮಾಡುತ್ತಿದೆ. ಆದ್ರೆ ಇದೊಂದು ಪಿತೂರಿಯು ಕೊಡ ಆಗಿರಬಹುದು. ಹಾಗಾಗಿ ಈ ಪ್ರಕರಣಕ್ಕೆ ಅಂತ್ಯವನ್ನು ಕಾಣುವ ವರೆಗೂ ಅವರ ವ್ಯಕ್ತಿವ್ಯನ್ನು ನಾವು ಗೌರವಿಸಬೇಕು. ಇದೀಗ ಈ ಮದ್ಯದಲ್ಲಿ ದರ್ಶನ್ ಅವರ ಎಸ್ಟೇಟ್ ಮ್ಯಾನೇಜರ್ ಆತ್ಮತ್ಯೆಗೆ ಶರಣಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹೌದು, ಎರಡು ತಿಂಗಳ ಹಿಂದೆಯಷ್ಟೇ ದರ್ಶನ್ ನ ಫಾರ್ಮ್ ಹೌಸ್ ಮ್ಯಾನೇಜರ್ 35 ವರ್ಷದ ಶ್ರೀಧರ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾರೆ.   

ಏಪ್ರಿಲ್ 17ನೇ ತಾರೀಖು ಘಟನೆ ನಡೆದಿದ್ದು,ಆತನ ಮೃತನ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ತಾನೇ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ  ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ಬಗ್ಗನದೊಡ್ಡಿಯಲ್ಲಿನ ದುರ್ಗ ಫಾರ್ಮ್ ಹೌಸ್ ನ ಮ್ಯಾನೇಜರ್ ಆಗಿರುವ ಶ್ರೀಧರ್ ಮೃತ ದೇಹ  ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದನಂತೆ. ಈತ ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಶ್ರೀಧರ್ ಮೃತದೇಹ ಕಲ್ಲು ಬಂಡೆ ಮೇಲೆ ಪತ್ತೆಯಾಗಿತ್ತು. ಅಂದಹಾಗೇ ದುರ್ಗ ಫಾರ್ಮ್ ಹೌಸ್ ಸುಮಾರು 2 ಎಕರೆ 36 ಗುಂಟೆ ಪ್ರದೇಶದಲ್ಲಿದ್ದು ಅದರ ಸಂಪೂರ್ಣ ಜವಾಬ್ದಾರಿ ಈತ ನಿರ್ವಹಣೆ ಮಾಡುತ್ತಿದನ್ನು ಎನ್ನಲಾಗುತ್ತಿದೆ.  ( video credit : powertvnews )