ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಡಿ ಬಾಸ್ ಬಂಧನಕ್ಕೆ ಆಗ್ರಹ! ಏನಾಗಿದೆ ನೀವೇ ನೋಡಿ?

ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಡಿ ಬಾಸ್ ಬಂಧನಕ್ಕೆ ಆಗ್ರಹ! ಏನಾಗಿದೆ ನೀವೇ ನೋಡಿ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಹೀರೋ ಎಂದ ಕೂಡಲೇ ನನೇಪಾಗುವ ಹೆಸರು ಎಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೂ ದರ್ಶನ್ ಅವರ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡುತ್ತದೆ. ಇನ್ನು ದರ್ಶನ್ ಅವ್ರು ಕೇವಲ ಕನ್ನಡ ಭಾಷೆಯಲ್ಲಿ ನಟನೆ ಮಾಡಿದ್ದರು ಕೊಡ ಪರ ಭಾಷಿಗರ ಅಭಿಮಾನಿಗಳನ್ನು ಭಾರಿ ಸಂಖ್ಯೆಯಲ್ಲಿ ಸಂಪಾದನೆ ಮಾಡಿದ್ದಾರೆ ಎಂದ್ರೆ ತಪ್ಪಾಗಲಾರದು. ಇನ್ನೂ ದರ್ಶನ್ ಅವರು ಮಾಸ್ ಸಿನಿಮಾ ಅಲ್ಲದೆ ನಿಜ ಜೀವನದಲ್ಲಿ ಮಾಸ್ ಡೈಲಾಗ್ ಹೇಳುವುದರಲ್ಲಿ ಕೊಡ ಎಕ್ಸ್ಪರ್ಟ್ ಎಂದ್ರೆ ತಪ್ಪಾಗಲಾರದು. ಏಕೆಂದ್ರೆ ದರ್ಶನ್ ಅವರು ನೇರ ನುಡಿ ಸ್ವಭಾವದ ಕಾರಣ. ಅವರಿಗೆ ಅನಿಸಿದ್ದನ್ನು ಯಾರು ಎಂದು ಕೂಡ ಯೋಚನೆ ಮಾಡದೆ ನೇರವಾಗಿಯೇ ತಿಳಿಸುತ್ತಾರೆ.

ಈ ಕಾರಣದಿಂದಲೇ ದರ್ಶನ್ ಅವರು ಸಾಕಷ್ಟು ಮಂದಿ ಯಾಗು ಮೀಡಿಯಾ ಜನರನ್ನು ಎದುರಾಕಿಕೊಂಡಿದ್ದಾರೆ. ಇದೀಗ ದರ್ಶನ್ ಅವರು ಮತ್ತೆ ಮಾದ್ಯಮದಲ್ಲಿ ಚರ್ಚೆಯಲ್ಲಿ ಇದ್ದಾರೆ. ಕಾರಣ ಏನೆಂದು ನಾವು ಹೊಸದಾಗಿ ತಿಳಿಸಬೇಕಿಲ್ಲ. ಇನ್ನೂ ಕಳೆದ ಮೂರು ದಿನಗಳಿಂದ ಸದ್ದು ಮಾಡುತ್ತಿರುವ ವರ್ತೂರು ಸಂತೋಷ್ ಅವರ ಹುಲಿಯ ಉಗುರಿನ ಸರದ ವಿಚಾರವಾಗಿ ಅವರನ್ನು ಬಿಗ್ ಬಾಸ್ ಮನೆಯಿಂದ ನೇರವಾಗಿ ಅರೆಸ್ಟ್ ಮಾಡಿ ಹೊರಗಡೆ ಕರೆ ತಂದು ಈಗ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ. ಇನ್ನು ಸೂಕ್ತ ಮಾಹಿತಿ ನೀಡದಿದ್ದರೆ ಅವರಿಗೆ ಐದು ವರ್ಷಗಳ ಕಾಲ ಸೆರೆ ವಾಸ ಕೂಡ ಅನುಭವಿಸಬೇಕು ಎನ್ನುವ ಮಾಹಿತಿ ಇದೇ. ಇದೀಗ ಇದರ ಬೆನ್ನಲ್ಲೇ ಇದೆ ಪ್ರಕರಣದಲ್ಲಿ ದರ್ಶನ್ ಅವರಿಗೂ ಕೊಡ ಜೆಡಿಯು ಪಕ್ಷದ ಸದಸ್ಯರು ದರ್ಶನ್ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. 

ದರ್ಶನ್ ಅವರು ದೈವ ಭಕ್ತನಗಿರುವ ಕಾರಣದಿಂದ ಆಗಾಗ ದೇವಸ್ಥಾನಗಳಿಗೆ ತೆರಳುತ್ತಿರುತ್ತರೆ. ಕಳೆದ ತಿಂಗಳು ಕೊಲ್ಲೂರು ಮೂಕಾಂಬಿಕಾ ದೇಸ್ಥಾನದಲ್ಲಿ ತೆಗೆದಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಹುಲಿಯ ಉಗುರದ ಡಾಲರ್ ಧರಿಸಿರುವ ದರ್ಶನ್ ಅವರ ಫೋಟೋ ಆಧಾರವಾಗಿ ಇಟ್ಟುಕೊಂಡು ಈಗ ಅರಣ್ಯ ಅಧಿಕಾರಿಗಳಿಗೆ ದೂರನ್ನು ನೀಡಲಾಗಿದೆ. ಇನ್ನೂ ತನಿಖೆಯೂ ಕೊಡ ಆರಂಭ ಆಗಿದ್ದು ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂದು ನಾವು ನೋಡಬೇಕಿದೆ. ಮೊದಲೇ ದರ್ಶನ್ ಅವರಿಗೆ ಪ್ರಾಣಿಗಳು ಬಹಳ ಇಷ್ಟ ಇರುವ ಕಾರಣ ಆಗಾಗ ಕಾಡಿಗೆ ತೆರಳುತ್ತಿರುತ್ತಾರೆ.  ಆದರೆ ಇಂದಿನ ವರೆಗೂ ದರ್ಶನ್ ಅವರು ಈ ವಿಷಯದ ಬಗ್ಗೆ ಯಾವ ಪ್ರತಿಕ್ರಿಯೆ ಕೊಡ ನೀಡಿಲ್ಲ.

( video credit : VIN KANNADA )