ನೀವೂ ಅಂದುಕೊಂಡ ಕೆಲಸ ಆಗಬೇಕಾ ಹಾಗಾದ್ರೆ ಅರಳಿ ಮರದಡಿ ಇದೊಂದು ಮಂತ್ರ ಜಪಿಸಿ ಸಾಕು..!!

ನೀವೂ ಅಂದುಕೊಂಡ ಕೆಲಸ ಆಗಬೇಕಾ ಹಾಗಾದ್ರೆ ಅರಳಿ ಮರದಡಿ ಇದೊಂದು ಮಂತ್ರ ಜಪಿಸಿ ಸಾಕು..!!

ಜೀವನದಲ್ಲಿ ಮನುಷ್ಯನು ಅದೆಷ್ಟೇ ಶ್ರದ್ಧೆಯಿಂದ ಕಷ್ಟಪಟ್ಟು ಕೆಲಸ ಮಾಡಿ ಜೀವನ ಸಾಗಿಸುವಂತಿದ್ದರೂ ಸಹ ಕೆಲವೊಮ್ಮೆ ಆತನಿಗೆ ನಿರಾಶಕ್ತಿ ಮೂಡಿಬಿಡುತ್ತದೆ. ಕೆಲವೊಂದಿಷ್ಟು ಕೆಲಸದಲ್ಲಿ ಆತ ನಿರೀಕ್ಷೆಗೂ ಮೀರಿ ಸೋಲನ್ನ ಅನುಭವಿಸಬೇಕಾಗುತ್ತದೆ. ಆತ ಅದೆಷ್ಟೇ ಪ್ರಯತ್ನ ಪಟ್ಟರೂ ಆ ಕೆಲಸ ಆತನ ಕೈಗೂಡುವುದಿಲ್ಲ. ಆದರಿಂದಲೇ ಮನೆಯಲ್ಲಿ ವಾತಾವರಣ ಹದಗೆಡುತ್ತದೆ, ಮನೆಯ ಪ್ರತಿ ಸದಸ್ಯನಿಗೆ ಚಿಂತನೆ ಪ್ರಾರಂಭವಾಗುತ್ತೆ, ಸಮಸ್ಯೆ ಉದ್ಭವ ಆದಾಗಿನಿಂದ ಮನೆಯಲ್ಲಿರುವ ಎಲ್ಲರ ಮನಸ್ಥಿತಿ ಹಾಳಾಗಿ ಹೋಗುತ್ತದೆ.

ಹೌದು ನಾವು ಕೆಲಸ ಮಾಡುವುದರ ಜೊತೆ ದೈವ ಭಕ್ತಿ ಹೊಂದಿರಬೇಕು. ನಮ್ಮ ಹಿಂದಿನ ಹಿರಿಕರು ಹೇಳಿದಂತೆ ದೈವ ಎನ್ನುವುದು ಒಂದು ಅಬೂತ ಶಕ್ತಿ. ದೈವದಲ್ಲಿ ನಂಬಿಕೆ ಇಟ್ಟು ಕೆಟ್ಟವರು ಯಾರು ಇಲ್ಲ.. ದೈವವನ್ನು ನಂಬಿದರೆ ಅಥ್ವಾ ನಮ್ಮ ಮನೆ ದೇವರನ್ನ ಪ್ರಾರ್ಥಿಸಿದರೆ ಅದೆಂತಹ ಸಮಸ್ಯೆ ಇದ್ದರೂ ಕ್ಷಣಾರ್ಧದಲ್ಲಿ ನಂಬಿಕೆಯ ಪ್ರತಿರೂಪವಾಗಿ ಪ್ರತಿಫಲ ಸಿಕ್ಕೆ ಸಿಗುತ್ತದೆ. ಸುಖ, ನೆಮ್ಮದಿ, ಶಾಂತಿ ಮನೆಯಲ್ಲಿ ನೆಲೆಸುತ್ತದೆ. ಆತ ಯಾವ ಸಮಸ್ಯೆಯಿಂದ ಬಳಲುತ್ತಿದ್ದಾನೋ ಅದರಿಂದ ಪೂರ್ತಿ ಪ್ರಮಾಣದಲ್ಲಿ ಹೊರ ಬರುತ್ತಾರೆ. ದೇವರನ್ನು ನಂಬಿ ಕೈ ಮುಗಿದು ಕಷ್ಟಗಳನ್ನು ಹೇಳಿಕೊಂಡರೆ ಸಾಕು ಯಾವ ದೇವರು ಆದರೂ ಕೂಡ ಕೈ ಬಿಡುವುದಿಲ್ಲ. 

ನಿಮ್ಮ ಜೀವನದಲ್ಲಿ ಎಲ್ಲಾ ಮುಗಿದೆ ಹೋಯಿತು ಎನ್ನುವ ಹಂತಕ್ಕೆ ತಲುಪಿದ್ದೀರ, ಹಾಗಾದ್ರೆ ಈ ಲೇಖನ ನಿಮಗೆ ಸೂಕ್ತವಾಗಿದೆ ಗೆಳೆಯರೇ. ಹೌದು ನೀವು ಅಂದುಕೊಂಡಂತೆ ಜೀವನ ಸಾಗಿಸಲು ಆಗುತ್ತಿಲ್ವ, ನಿಮಗೆ ಉದ್ಯೋಗ ಸಮಸ್ಯೆ ಇದೆಯೇ, ಮದುವೆ ಅಗಿಲ್ವ, ಸಂತಾನ ಪ್ರಾಪ್ತಿ ಅಗಿಲ್ವ ಮನೆಯಲ್ಲಿ ನೆಮ್ಮದಿ ಇಲ್ಲ ಎಂದಾದರೆ, ಹಾಗೆ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತಿಲ್ಲ ಎನ್ನುವುದಾದರೆ, ಇಂದೇ ಅರಳಿಮರದ ಮುಂದೆ ಹೋಗಿ ನಿಮ್ಮ ಎರಡು ಕೈಗಳನ್ನು ಅರಳಿ ಮರದ ಮೇಲೆ ಇಡೀ. ಭಕ್ತಿಯಿಂದ ನಿಮ್ಮ ಕಷ್ಟಗಳ ಅಲ್ಲಿ ಹೇಳಿಕೊಳ್ಳಿ, ಹಾಗೆ 11 ಬಾರಿ ಈ ಮಂತ್ರವನ್ನು ಜಪಿಸಿ 24 ಗಂಟೆಯಲ್ಲಿ ನಿಮ್ಮ ಸಮಸ್ಯೆ ಖಂಡಿತ ಕಡಿಮೆ ಆಗುತ್ತಾ ಬರುತ್ತದೆ.

ಅದುವೇ 'ಶ್ರೀರಾಮ ಜಯ ರಾಮ ಜಯ ಜಯ ರಾಮ' ಎನ್ನುವ ಸ್ತೋತ್ರವನ್ನು 11 ಬಾರಿ ಅರಳಿಮರದ ಮುಂದೆ ಅರಳಿ ಮರದ ಮೇಲೆ ಕೈ ಇಟ್ಟು ಹೇಳಿ, ರಾಮನ ಕೃಪಾ ಆಶೀರ್ವಾದದ ಜೊತೆ ಆಂಜನೇಯ ಕೂಡ ನಿಮ್ಮ ಕಷ್ಟಗಳ ದೂರ ಮಾಡುತ್ತಾನೆ. ಪ್ರತಿ ವಾರ ನೀವು ಚಾಚು ತಪ್ಪದೆ ಈ ಮಂತ್ರವ ಜಪಿಸುತ್ತ ಹೋಗಿ ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಖಂಡಿತ ಪರಿಹಾರ ಆಗುತ್ತದೆ. ಈ ಎಲ್ಲಾ ಮಾಹಿತಿ ನಮಗೆ ಈ  ವಿಡಿಯೋ ಮೂಲಕವೇ ತಿಳಿದು ಬಂದಿದೆ..ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿ ನೋಡಿ, ಮತ್ತು ಮಾಹಿತಿ ತುಂಬಾನೇ ಇಂಫಾರ್ಮ್ಯಾಟಿಕ್ ಅನ್ಸಿದ್ರೆ ಶೇರ್ ಮಾಡಬಹುದು, ಧನ್ಯವಾದಗಳು...( video credit : Degula Darshana Karnataka )