ಡೈವೋರ್ಸ್ ಗೆ ಮುಂದಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ! ಕಾರಣ ಏನು ಗೊತ್ತಾ?

ಡೈವೋರ್ಸ್ ಗೆ ಮುಂದಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ! ಕಾರಣ ಏನು ಗೊತ್ತಾ?

ಇನ್ನೂ ನಾ ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿಗಳಲ್ಲಿ ಸಾಕಷ್ಟು ಜೋಡಿಯ ಹೆಸರು ಓಡಾಡುತ್ತಲೇ ಇರುತ್ತದೆ ಅವರ ಮದ್ಯೆ ಸದಾ ಸುದ್ದಿಯಲ್ಲಿ ಇರುವ ಹೆಸರು ಎಂದ್ರೆ ಅದು ಚಂದನ್ ಹಾಗೂ ನಿವೇದಿತಾ ಗೌಡ. ಇನ್ನೂ ಇವರಿಬ್ಬರ ವಿಧಿಯ ಬರಹ ನೋಡುವುದಾದರೆ ಎಲ್ಲರೂ ಹೇಳುವಂತೆ ಡಿಸ್ಟಿನಿ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿಯುತ್ತದೆ. ಏಕೆಂದ್ರೆ ಮೈಸೂರಿನಲ್ಲಿ ಓದುತ್ತಾ ಟಿಕ್ ಟಾಕ್ ಮಾಡುತ್ತಾ ಪರಿಚಯವೇ ಇಲ್ಲದ ಹುಡುಗಿ ಬಿಗ್ ಬಾಸ್ ಗೆ ಬಂದು ಚಂದನ್ ಪರಿಚಿತವಾಗಿ ಆ ಪರಿಚಯ ಪ್ರೀತಿಯಾಗಿ ಈಗ ಮದುವೆಯಾಗಿರುವುದು ನಿಜಕ್ಕೆ ವಿಧಿಯ ಬರಹ ಎಂದೇ ಹೇಳಬಹುದು. ಇನ್ನೂ ಚಂದನ್ ಶೆಟ್ಟಿ ಅವರು ಕನ್ನಡದ ಪ್ರಸಿದ್ಧ ರಾಪರ್, ಗಾಯಕ, ಮತ್ತು ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ.  

ಇನ್ನೂ ಇವರು ಮೊದಲಿಗೆ ಅಲ್ಬಾಂಬ್ ಸಾಂಗ್  ಆದ "3 ಪೆಗ್" ಎಂಬ ಹಾಡಿನ ಮೂಲಕ ಬಹಳಷ್ಟು ಜನಪ್ರಿಯತೆ ಪಡೆದುಕೊಂಡರು. ಚಂದನ್ ಶೆಟ್ಟಿಯವರು "ಬಿಗ್ ಬಾಸ್ ಕನ್ನಡ" ರಿಯಾಲಿಟಿ ಶೋನ ಸೀಸನ್ 5ರ ವಿಜೇತರೂ ಆಗಿದ್ದಾರೆ. ಇನ್ನೂ ಚಂದನ್ ಅವರು 17 ಸೆಪ್ಟೆಂಬರ್ 1990, ಶಿವಮೊಗ್ಗ, ಕರ್ನಾಟಕ ಬಿಗ್ ಬಾಸ್ ಗೆದ್ದ ನಂತರ ಅವರ ಪ್ರಖ್ಯಾತಿ ಹೆಚ್ಚಾದ ನಂತರ ಈಗ ಚಲನಚಿತ್ರ ಸಂಗೀತ, ರಾಪ್ ಸಂಗೀತ, ಮತ್ತು ರಿಯಾಲಿಟಿ ಟಿವಿ ಹಾಗೂ ಸಿನಿಮಾಗಳ ಹೀರೋ ಆಗಿ ಮಿಂಚುತ್ತಾ ಇದ್ದಾರೆ ಎಂದು ಹೇಳಬಹುದು. ಇತ್ತ ನಿವೇದಿತಾ ಗೌಡ ಕಡೆ ಹೇಳುವುದಾದರೇ ನಿವೇದಿತಾ ಗೌಡ ಕನ್ನಡದ ರಿಯಾಲಿಟಿ ಶೋ "ಬಿಗ್ ಬಾಸ್ ಕನ್ನಡ"ದ ಸೀಸನ್ 5ರಲ್ಲಿ ಭಾಗವಹಿಸಿದ್ದು, ಈ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಈ ಮೂಲಕವೇ ಜನರಿಗೆ ಇವರ ಪರಿಚಯ ಆಗಿದ್ದು ಎಂದ್ರೆ ತಪ್ಪಾಗಲಾರದು. ಇನ್ನೂ ಇವರು 1999, ಮೈಸೂರು, ಇವರು  ಸಿವಿಲ್ ಎಂಜಿನಿಯರಿಂಗ್, ರಣರಂಗ ಮಹಾವಿದ್ಯಾಲಯ, ಮೈಸೂರು ನಲ್ಲಿ ವಿದ್ಯಾಭ್ಯಾಸ ಮಾಡಿದವರು. ಈಗ ಸದ್ಯದಲ್ಲಿ ರಿಯಾಲಿಟಿ ಶೋ ಮೂಲಕ ಬ್ಯುಸಿ ಆಗಿದ್ದಾರೆ.

 ಇನ್ನೂ ಮೊದಲಿಗೆ ಸ್ನೇಹಿತರಾಗಿ ಇದ್ದ ಇವರು ಮದುವೆಯಾಗುತ್ತಾರೆ ಎಂದು ಯಾರೊಬ್ಬರಿಗೂ ಕೊಡ ನಿರೀಕ್ಷೆ ಇರಲಿಲ್ಲ. ಇನ್ನೂ 2019 ನಲ್ಲಿ ಯುವದಸರಾ ಸಮಯದಲ್ಲಿ ವೇದಿಕೆಯ ಮೇಲೆ ತಮ್ಮ ಪ್ರೇಮ ನಿವೇದನೆ ಮಾಡಿ ಆ ನಂತರ ಮದುವೆಯಾದವರು ಇವರು. ಇವರಿಬ್ಬರೂ "ಬಿಗ್ ಬಾಸ್ ಕನ್ನಡ"ದ ಸೀಸನ್ 5ರಲ್ಲಿ ಪಾಲ್ಗೊಂಡು, ಅಲ್ಲಿ ಪರಿಚಯವಾದರು ಮತ್ತು ಒಬ್ಬರನ್ನೊಬ್ಬರು ಪ್ರೀತಿಸಲಾರಂಭಿಸಿದರು. ಅದಾದ ಬಳಿಕ 24 ಫೆಬ್ರವರಿ 2020 ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಅನ್ಯೂನ್ಯತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುಗರಿಗೆ ಹೊಟ್ಟೆ ಕಿಚ್ಚು ತರಿಸಿ ಇನ್ಸಪೇರ್ ಆಗುವ ರೀತಿಯಲ್ಲಿ ಇದ್ದ ಜೋಡಿ ಈಗ ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಲುತ್ತಿದ್ದಾರೆ ಎನ್ನಲಾಗಿದೆ. ಇಂದು ಶಾಂತಿನಗರ ಕೋರ್ಟ್ ನಲ್ಲಿ ದಂಪತಿ ವಿಚ್ಛೇದನ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ . ಮತ್ತು ಅವರು ಒಂದು ವರ್ಷದಿಂದ ಜೊತೆಯಲ್ಲಿ ಇರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದೆ . ಡೈವೋರ್ಸ್ ನಂತರ ಯಾವುದೇ ಪರಿಹಾರ ಕೇಳಬಾರದು ಎಂದು ಕೋರ್ಟ್ ಹೇಳಿದೆ 

​( video credit : Third Eye )